ಅಟ್ಟಾಡಿಸಿಕೊಂಡು ಬಂದ ಹುಲಿ, ವ್ಯಾಘ್ರನ ಮುಂದೆ ಯುವಕ ಜೀವ ಉಳಿಸಿಕೊಂಡಿದ್ದೇಗೆ? ಭಯಾನಕ ವಿಡಿಯೋ!

ಆಕ್ರೋಶಗೊಂಡಿರುವ ಹುಲಿ ತನ್ನ ಕೈಗೆ ಸಿಕ್ಕ ಬೇಟೆಯನ್ನು ಯಾವುದೇ ಕಾರಣಕ್ಕೂ ಬಿಟ್ಟು ಹೋಗುವುದಿಲ್ಲ. ಅಂತಹದರಲ್ಲಿ ಅಟ್ಟಾಡಿಸಿಕೊಂಡು ಬಂದ ಹುಲಿಯಿಂದ ಯುವಕನೋರ್ವ ಸತ್ತಂತೆ ಮಲಗಿ ತನ್ನ ಜೀವವನ್ನು ಉಳಿಸಿಕೊಂಡಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಪ್ ವೈರಲ್ ಆಗಿದೆ.Man Escape
ಹುಲಿ ದಾಳಿ
ಹುಲಿ ದಾಳಿ

ಮಹಾರಾಷ್ಟ್ರ: ಆಕ್ರೋಶಗೊಂಡಿರುವ ಹುಲಿ ತನ್ನ ಕೈಗೆ ಸಿಕ್ಕ ಬೇಟೆಯನ್ನು ಯಾವುದೇ ಕಾರಣಕ್ಕೂ ಬಿಟ್ಟು ಹೋಗುವುದಿಲ್ಲ. ಅಂತಹದರಲ್ಲಿ ಅಟ್ಟಾಡಿಸಿಕೊಂಡು ಬಂದ ಹುಲಿಯಿಂದ ಯುವಕನೋರ್ವ ಸತ್ತಂತೆ ಮಲಗಿ ತನ್ನ ಜೀವವನ್ನು ಉಳಿಸಿಕೊಂಡಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಪ್ ವೈರಲ್ ಆಗಿದೆ. 

ಮಹಾರಾಷ್ಟ್ರದ ಭಂದಾರಾ ಜಿಲ್ಲೆಯಲ್ಲಿ ಕಳೆದ ಶನಿವಾರ ಕಾಡಿನಿಂದ ನಾಡಿಗೆ ಬಂದಿದ್ದ ಹುಲಿಯನ್ನು ಯುವಕರ ಗುಂಪೊಂದು ಕಾಡಿಗೆ ಅಟ್ಟಲು ಮುಂದಾಗಿತ್ತು. ಈ ವೇಳೆ ಉದ್ರಿಕ್ತ ಜನರತ್ತ ನುಗ್ಗಿದ ಹುಲಿ ಯುವಕನೋರ್ವನನ್ನು ಕೆಡವಿಕೊಂಡಿತ್ತು. ಈ ವೇಳೆ ಯುವಕ ಸತ್ತಂತೆ ನಟಿಸಿದ್ದಾನೆ. ಇದನ್ನು ಕಂಡ ಹುಲಿ ಆತನನ್ನು ಬಿಟ್ಟು ಅಲ್ಲಿಂದ ಓಡಿ ಹೋಯಿತು. 

ಸ್ವಲ್ಪ ಯಾಮಾರಿದ್ದರೂ ಹುಲಿ ಯುವಕನ ಕತ್ತಿಗೆ ಬಾಯಿ ಹಾಕಿ ಜೀವ ತೆಗೆಯಬಹುದಿತ್ತು. ಆದರೆ ಅದೃಷ್ಟವಶಾತ್ ಯುವ ಸಮಯಪ್ರಜ್ಞೆ ತೋರಿದ್ದರಿಂದ ಜೀವ ಉಳಿದಿದೆ. ಈ ವಿಡಿಯೋವನ್ನು ಐಎಫ್ಎಸ್ ಪ್ರವೀಣ್ ಕಸ್ವಾನ್ ಎಂಬುವರು ಅಪ್ಲೋಡ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com