ನವದೆಹಲಿ: ದೆಹಲಿ ಬಿಜೆಪಿ ಘಟಕದ ನೂತನ ಅಧ್ಯಕ್ಷರಾಗಿ ಅದೇಶ್ ಕುಮಾರ್ ಗುಪ್ತಾ ಅವರನ್ನು ಹಾಗೂ ಚತ್ತೀಸ್ಗಢ ಬಿಜೆಪಿ ರಾಜ್ಯ ಅಧ್ಯಕ್ಷರನ್ನಾಗಿ ಕೇಂದ್ರ ಮಾಜಿ ಕೇಂದ್ರ ಸಚಿವ ವಿಷ್ಣು ದಿಯೋ ಸಾಯ್ ಅವರನ್ನುನೇಮಕ ಮಾಡಲಾಗಿದೆ.
ಪಕ್ಷದ ಅಧ್ಯಕ್ಷ ಜೆ ಪಿ ನಡ್ಡಾ ಮಂಗಳವಾರ ಈ ಎರಡು ನೇಮಕಗಳನ್ನು ಮಾಡಿ ಆದೇಶಿಸಿದ್ದಾರೆ.
ದೆಹಲಿ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಟ ಮತ್ತು ಶಾಸಕ ಮನೋಜ್ ತಿವಾರಿ ಅವರ ಬದಲಿಗೆ ಉತ್ತರ ದೆಹಲಿ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಗುಪ್ತಾ ನೇಮಕಗೊಂಡಿದ್ದಾರೆ.
ಮಣಿಪುರ ಬಿಜೆಪಿಯ ರಾಜ್ಯ ಅಧ್ಯಕ್ಷರಾಗಿ ಪ್ರೊ. ಎಸ್.ಟಿಕೇಂದ್ರ ಸಿಂಗ್ ಅವರನ್ನು ನಡ್ಡಾ ನೇಮಕ ಮಾಡಿದ್ದಾರೆ.
ಚತ್ತೀಸ್ ಗಢ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡಿರುವ ವಿಷ್ಣು ದಿಯೋ ಸಾಯ್ ಅವರು 16ನೇ ಲೋಕಸಭೆಯಲ್ಲಿ ರಾಯಗಢ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. .ಈ ನೇಮಕಗಳು ತಕ್ಷಣದಿಂದ ಜಾರಿಗೆ ಬರಲಿವೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಹೇಳಿದ್ದಾರೆ.
Advertisement