ನವದೆಹಲಿ: ಗಲ್ಲುಶಿಕ್ಷೆಗೆ ಕೆಲ ತಾಸುಗಳು ಇರುವಂತೆ ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನಾಲ್ವರು ಅತ್ಯಾಚಾರಿಗಳ ಪೈಕಿ ಮೂವರು ದೆಹಲಿ ಹೈಕೋರ್ಟ್ ಗೆ ಸಲ್ಲಿಸಿದ ಅರ್ಜಿಯೂ ವಜಾಗೊಂಡಿದೆ.
ಈ ವಿಷಯದಲ್ಲಿ ಏನೂ ಇಲ್ಲ, ಅರ್ಜಿಯಲ್ಲಿ ಯಾವುದೇ ದಾಖಲೆಗಳಿಲ್ಲ ಎಂದು ಹೇಳಿದ ನ್ಯಾಯಾಧೀಶರು ಅರ್ಜಿಯನ್ನು ವಜಾಗೊಳಿಸಿದ್ದಾರೆ.
ಶುಕ್ರವಾರ ನಿಗದಿಯಾಗಿರುವ ಗಲ್ಲು ಶಿಕ್ಷೆಗೆ ತಡೆ ನೀಡಬೇಕೆಂದು ಹಂತಕರಾದ ಅಕ್ಷಯ್ ಕುಮಾರ್ ಸಿಂಗ್, ಪವನ್ ಗುಪ್ತಾ, ವಿನಯ್ ಶರ್ಮಾ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿಯ ಪಟಿಯಾಲಾ ಕೋರ್ಟ್ ವಜಾಗೊಳಿಸಿತ್ತು. ನಂತರ ಹಂತಕರು ಮೊರೆ ಹೋಗಿದ್ದರು.
ಗಲ್ಲುಶಿಕ್ಷೆಗೊಳಗಾಗಿರುವ ಆರೋಪಿಗಳಿಗೆ ಎಲ್ಲಾ ನ್ಯಾಯ ಪ್ರಕ್ರಿಯೆಗಳು ಮುಗಿದಿವೆ ಎಂದು ಕೋರ್ಟ್ ಹೇಳಿತು.
ಈ ಅರ್ಜಿಯನ್ನು ಸಲ್ಲಿಸಲು ನಿಮಗೆ ಅನುಮತಿ ಇದೆಯೇ? ಎಂದು ನ್ಯಾಯಾಧೀಶರಾದ ಮನ್ ಮೋಹನ್ ಅವರು ಆರೋಪಿಗಳನ್ನು ಪರ ವಕೀಲರನ್ನು ಪ್ರಶ್ನಿಸಿದರು ಎಂಬುದು ಮೂಲಗಳಿಂದ ತಿಳಿದುಬಂದಿದೆ.
Advertisement