ಹರ್ಯಾಣದಲ್ಲಿ ರೈಲು ಎಂಜಿನ್ ಹರಿದು ಮೂವರು ಮಕ್ಕಳು ಸಾವು

ನಗರದ ಹಿಸ್ಸಾರ್‍-ಸಿರ್ಸಾ ರೈಲು ಮಾರ್ಗದಲ್ಲಿ ರೈಲು ಎಂಜಿನ್‍ ಹರಿದು ಇಬ್ಬರು ಸಹೋದರರು ಸೇರಿದಂತೆ ಮೂವರು ಮಕ್ಕಳು ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹಿಸ್ಸಾರ್‍: ನಗರದ ಹಿಸ್ಸಾರ್‍-ಸಿರ್ಸಾ ರೈಲು ಮಾರ್ಗದಲ್ಲಿ ರೈಲು ಎಂಜಿನ್‍ ಹರಿದು ಇಬ್ಬರು ಸಹೋದರರು ಸೇರಿದಂತೆ ಮೂವರು ಮಕ್ಕಳು ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಜಿತ್‍(8) ಮತ್ತು ಆತನ ತಮ್ಮ ಗೋಲು(5) ಮತ್ತು ರವಿ(12) ಎಂಬ ಬಾಲಕರು ರೈಲ್ವೆ ಹಳಿ ದಾಟುತ್ತಿದ್ದಾಗ ಈ ದುರಂತ ಸಂಭವಿಸಿದೆ. 

ಕೊರೋನಾ ವೈರಸ್‍ ನಿಂದ ಲಾಕ್‍ಡೌನ್‍ ಜಾರಿ ಇರುವ ವೇಳೆ ರೈಲು ಬರುತ್ತದೆ ಎಂದು ಬಾಲಕರು ಊಹಿಸಿರಲಿಲ್ಲ. ಲಾಕ್‍ಡೌನ್‍ ಅವಧಿಯಲ್ಲಿ ಕೆಲ ಸರಕು ರೈಲುಗಳು ತುಂಬಾ ಸಮಯದವರೆಗೆ ನಿಲ್ಲುತ್ತಿದ್ದವು ಎಂದು ಬಾಲಕರ ಕುಟುಂಬದವರು ಹೇಳಿದ್ದಾರೆ.

ಈ ಕುರಿತು ತನಿಖೆ ನಡೆಸುವುದಾಗಿ ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com