ದೇಶಾದ್ಯಂತ ದೀಪಾವಳಿ ಆರಂಭವಾಗಿದೆ. ಪಟಾಕಿಗಳನ್ನು ಹಚ್ಚುವಾಗ ಆದಷ್ಟು ಎಚ್ಚರವಾಗಿರಿ ಎಂದು ಗಣ್ಯರು, ವೈದ್ಯರು ಈ ವರ್ಷವೂ ಎಚ್ಚರಿಕೆ ನೀಡಿದ್ದಾರೆ.
ಪ್ರತಿವರ್ಷ ಪಟಾಕಿ ಹಚ್ಚುವುದರಿಂದ ಆಗುವ ದುರ್ಘಟನೆಗಳು ಹೆಚ್ಚಾಗುತ್ತಾ ಹೋಗುತ್ತಿವೆ ಎಂದು ಚೆನ್ನೈಯ ರಾಜನ್ ಐ ಕೇರ್ ಆಸ್ಪತ್ರೆಯ ಅಧ್ಯಕ್ಷ ಮತ್ತು ವೈದ್ಯಕೀಯ ನಿರ್ದೇಶಕ ಡಾ ಮೋಹನ್ ರಾಜನ್ ಹೇಳುತ್ತಾರೆ.
ಪಟಾಕಿ ಹಚ್ಚುವಾಗ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳಲ್ಲಿ ನಿರ್ಲಕ್ಷ್ಯ ಮತ್ತು ವೈಫಲ್ಯವೇ ದುರ್ಘಟನೆ ಹೆಚ್ಚಾಗಲು ಕಾರಣ. ಕಣ್ಣಿಗೆ ಸಂಬಂಧಿಸಿದ ಅನಾಹುತಗಳು ಪ್ರತಿವರ್ಷ ದೀಪಾವಳಿ ಸಮಯದಲ್ಲಿ ಹೆಚ್ಚಾಗುತ್ತಿರುತ್ತದೆ ಎಂದು ಅವರು ಹೇಳುತ್ತಾರೆ.
ಮಕ್ಕಳಲ್ಲಿ ಶೇಕಡಾ 45 ರಷ್ಟು ಗಾಯಗಳು ಮನೆಯಲ್ಲಿ ಸಂಭವಿಸುತ್ತಿರುವುದು ಕಂಡುಬಂದಿದೆ, ಅದರಲ್ಲಿ ಪಟಾಕಿ ಹಚ್ಚುವುದರಿಂದ ಗಾಯಗಳ ಕೊಡುಗೆ ಶೇಕಡಾ 10 ರಷ್ಟಿದೆ ”ಎಂದು ಡಾ ರಾಜನ್ ಹೇಳುತ್ತಾರೆ. ತಜ್ಞರು ಹೇಳುವಂತೆ ‘ರಾಕೆಟ್’ ಪಟಾಕಿ ಗಾಯಗಳು ಅತ್ಯಂತ ಕೆಟ್ಟದಾಗಿದೆ, ಏಕೆಂದರೆ ಅವು ಕಣ್ಣುಗುಡ್ಡೆಗಳನ್ನು ಛಿದ್ರಗೊಳಿಸುತ್ತವೆ. ಟದ ಗಾಯಗಳು ಬಾಹ್ಯ ಸುಡುವಿಕೆಗೆ ಕಾರಣವಾಗಬಹುದು, ಇದರಲ್ಲಿ ಕೆಲವು ಲೋಹೀಯ ಭಾಗಗಳು ಕಣ್ಣಿಗೆ ಪ್ರವೇಶಿಸಿ ಹಾನಿಗೊಳಗಾಗಬಹುದು ಎಂದು ಹೇಳುತ್ತಾರೆ.
ಸುರಕ್ಷಿತವಾಗಿ ದೀಪಾವಳಿ ಹೇಗೆ ಆಚರಿಸಬಹುದು?:
Advertisement