ನವದೆಹಲಿ: ಸಮನ್ಸ್ ಹೊರತಾಗಿಯೂ ಟಿಆರ್ಪಿ ದಂಧೆಯೆಸಂಬಂಧಿಸಿದಂತೆ ತನ್ನ ಹೇಳಿಕೆಯನ್ನು ದಾಖಲಿಸಲು ರಿಪಬ್ಲಿಕ್ ಟಿವಿಯ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್ಒ) ಶನಿವಾರ ಮುಂಬೈ ಪೊಲೀಸರ ಮುಂದೆ ಹಾಜರಾಗಿಲ್ಲ ಅಲ್ಲದೆ ಈ ಪ್ರಕರಣದಲ್ಲಿ ಚಾನೆಲ್ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚಾನೆಲ್ನ ಸಿಎಫ್ಒ ಶಿವ ಸುಬ್ರಮಣ್ಯಂ ಸುಂದರಂ ಅವರ ವಿರುದ್ಧ ಶುಕ್ರವಾರ ಸಮನ್ಸ್ ಜಾರಿಗೊಳಿಸಲಾಗಿ ಸಹ ಸುಪ್ರೀಂ ಕೋರ್ಟ್ ವಿಚಾರಣೆ ಇನ್ನೊಂದು ವಾರ ಇರುವ ಹಿನ್ನೆಲೆಯಲ್ಲಿ ಅವರ ಹೇಳಿಕೆದಾಖಲಿಸದಂತೆ ಪೊಲೀಸರಿಗೆ ಮನವಿ ಮಾಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಆದಾಗ್ಯೂ, ಮ್ಯಾಡಿಸನ್ ವರ್ಲ್ಡ್ ಮತ್ತು ಮ್ಯಾಡಿಸನ್ ಕಮ್ಯುನಿಕೇಷನ್ಸ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸ್ಯಾಮ್ ಬಲ್ಸಾರಾ ಶನಿವಾರ ಅಪರಾಧ ವಿಭಾಗದ ಮುಂದೆ ಹಾಜರಾಗಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ ಎಂದು ಅವರು ಹೇಳಿದರು.
ಮುಂಬೈ ಅಪರಾಧ ವಿಭಾಗದ ಅಪರಾಧ ಗುಪ್ತಚರ ಘಟಕ (ಸಿಐಯು) ಸುಂದರಂ ವಿರುದ್ಧ ಸಮನ್ಸ್ ಜಾರಿಗೊಳಿಸಿತ್ತು ಮತ್ತು ಶನಿವಾರ ಬೆಳಿಗ್ಗೆ 11 ಗಂಟೆಗೆ ತನಿಖೆಗೆ ಆಗಮಿಸಲು ತಿಳಿಸಲಾಗಿತ್ತು. "ಆದರೆ, ಅವರು ತನಿಖಾ ತಂಡದ ಮುಂದೆ ಹಾಜರಾಗಲಿಲ್ಲ. ಚಾನೆಲ್ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಿದೆ ಮತ್ತು ಒಂದು ವಾರದೊಳಗೆ ಈ ಬಗ್ಗೆ ವಿಚಾರಣೆ ನಡೆಯಲಿದೆ ಎಂದು ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಇದನ್ನು ಉಲ್ಲೇಖಿಸಿ ಅವರು ತಮ್ಮ ಹೇಳಿಕೆಯನ್ನು ದಾಖಲಿಸದಂತೆ ಪೊಲೀಸರಿಗೆ ಮನವಿ ಮಾಡಿದರು , "ಅಧಿಕಾರಿ ಹೇಳಿದರು.
ಸುಂದರಂ ಅವರಿಗೆ "ಈ ವಿಷಯದ ಕೆಲವು ಸಂಗತಿಗಳು ಮತ್ತು ಸನ್ನಿವೇಶದ ಅರಿವಿದೆ.ಹಾಗೂ ಅದನ್ನು ತಿಳಿಯುವ ಅಗತ್ಯವಿದೆ"
ಅಪರಾಧ ಶಾಖೆಯ ಸಿಐಯು ನಕಲಿ ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್(ಟಿಆರ್ಪಿ) ದಂಧೆ ಪ್ರಕರಣದ ತನಿಖೆ ನಡೆಸುತ್ತಿದೆ.
ಇವರಲ್ಲದೆ ಮರಾಠಿ ಚಾನೆಲ್ಗಳಾದ 'ಫಕ್ತ್ ಮರಾಠಿ' ಮತ್ತು 'ಬಾಕ್ಸ್ ಸಿನೆಮಾ' ಮತ್ತು ಒಂದೆರಡು ಜಾಹೀರಾತು ಸಂಸ್ಥೆಗಳ ಅಕೌಂಟೆಂಟ್ಗಳನ್ನು ಸಹ ಪೊಲೀಸರು ತನಿಖೆಗಾಗಿ ಕರೆಸಿದ್ದಾರೆ ಎಂದು ಅವರು ಹೇಳಿದರು. ಈ ಪ್ರಕರಣದಲ್ಲಿ ಫಕ್ ಮರಾಠಿ ಮತ್ತು ಬಾಕ್ಸ್ ಸಿನೆಮಾ ಮಾಲೀಕರು ಸೇರಿದಂತೆ ನಾಲ್ವರನ್ನು ಪೊಲೀಸರು ಗುರುವಾರ ಬಂಧಿಸಿದ್ದರು.
Advertisement