ಅಸ್ಸಾಂ ವಶಕ್ಕೆ ಪಡೆದಿದ್ದ ನಿರ್ಮಾಣ ಸಾಮಗ್ರಿ ವಾಪಸ್: ಮಿಜೊರಾಮ್ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಸುಧಾರಣೆ

ಅಸ್ಸಾಂ-ಮಿಜೊರಾಮ್ ಗಡಿ ಭಾಗದಲ್ಲಿ ಉಂಟಾಗಿದ್ದ ಹೊಸ ಉದ್ವಿಗ್ನ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿದೆ.
ಅಸ್ಸಾಂ ವಶಕ್ಕೆ ಪಡೆದಿದ್ದ ನಿರ್ಮಾಣ ಸಾಮಗ್ರಿ
ಅಸ್ಸಾಂ ವಶಕ್ಕೆ ಪಡೆದಿದ್ದ ನಿರ್ಮಾಣ ಸಾಮಗ್ರಿ
Updated on

ಗುವಾಹಟಿ: ಅಸ್ಸಾಂ-ಮಿಜೊರಾಮ್ ಗಡಿ ಭಾಗದಲ್ಲಿ ಉಂಟಾಗಿದ್ದ ಹೊಸ ಉದ್ವಿಗ್ನ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿದೆ.

ಅಸ್ಸಾ ನ ಹೈಲಕಂದಿ ಜಿಲ್ಲಾಡಳಿತ ವಶಕ್ಕೆ ಪಡೆದಿದ್ದ ನಿರ್ಮಾಣ ಕಾಮಗಾರಿ ಸಾಮಗ್ರಿಗಳನ್ನು ಮಿಜೊರಾಮ್ ನ ಕೊಲಾಸಿಬ್ ಜಿಲ್ಲಾಡಳಿತಕ್ಕೆ ವಾಪಸ್ ನೀಡಿದ ಬಳಿಕ ಪರಿಸ್ಥಿತಿ ಸುಧಾರಣೆ ಕಂಡಿದೆ.
 
ಮಿಜೊರಾಮ್ ನ ಸೇತುವೆ ನಿರ್ಮಾಣ ಕಾಮಗಾರಿಯನ್ನು ತಡೆದಿದ್ದ ಅಸ್ಸಾಂ ಪೊಲೀಸ್ ಸಿಬ್ಬಂದಿಗಳು ಟಿಎಂಟಿ ಬಾರ್ ಸೇರಿದಂತೆ ಹಲವು ನಿರ್ಮಾಣ ಸಾಮಗ್ರಿಗಳನ್ನು ವಶಕ್ಕೆ ಪಡೆದಿದ್ದರ ಪರಿಣಾಮ ಗಡಿ ಭಾಗದಲ್ಲಿ ಹೊಸ ವಿವಾದ ಉಂಟಾಗಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.

ಈ ಘಟನೆಯ ಬಳಿಕ ಮಿಜೊರಾಮ್ ಪೊಲೀಸರು ಅಸ್ಸಾಂ ಪೊಲೀಸರ ವಿರುದ್ಧ ಕಳ್ಳತನದ ಪ್ರಕರಣ ದಾಖಲಿಸಿದ್ದರು. ಮಿಜೊರಾಮ್ ನ ಪ್ರಕಾರ ಸೇತುವೆ ನಿರ್ಮಾಣವಾಗುತ್ತಿದ್ದ ಪ್ರದೇಶ ಕೊಲಸಿಬ್ ಜಿಲ್ಲೆಯ ಬೈರಾಬಿಗೆ ಸೇರಿದ್ದಾಗಿದೆ. ಆದರೆ ಅಸ್ಸಾಂ ಈ ಪ್ರದೇಶವನ್ನು ತನ್ನದೆಂದು ಹೇಳುತ್ತಿದ್ದು ಹೈಲಕಂದಿ ಜಿಲ್ಲೆಯ ಕಚುರ್ತಲ್ ನಲ್ಲಿದೆ.

ಮಿಜೊರಾಮ್ ನ ಕೊಲಸಿಬ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಹೆಚ್ ಲಥಲಾಂಗ್ಲಿಯಾನ ಅಸ್ಸಾಂ ನ ಜಿಲ್ಲಾಡಳಿತ ನಿರ್ಮಾಣ ಸಾಮಗ್ರಿಗಳನ್ನು ಹಿಂತಿರುಗಿಸಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಅಸ್ಸಾಂ ನಿಂದ ನಿರ್ಮಾಣ ಸಾಮಗ್ರಿಗಳು ವಾಪಸ್ ದೊರೆತಿರುವ ಹಿನ್ನೆಲೆಯಲ್ಲಿ ಮಿಜೊರಾಮ್ ಪೊಲೀಸರು ಅಸ್ಸಾಂ ಪೊಲೀಸರ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ಹಿಂಪಡೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com