ಆಸ್ತಿ ವಿವಾದ: ರಕ್ತ ಸಂಬಂಧಿಯನ್ನು ಗುಂಡಿಕ್ಕಿ ಹತ್ಯೆ ಮಾಡಿ ವೈಎಸ್‌ಆರ್‌ಸಿ ಮುಖಂಡ ತಾನೂ ಆತ್ಮಹತ್ಯೆ!

62 ವರ್ಷದ ವೈಎಸ್‌ಆರ್‌ಸಿ ಪಕ್ಷದ ಮುಖಂಡ ಶಿವಪ್ರಸಾದ್ ರೆಡ್ಡಿ ತಮ್ಮ ಸಂಬಂಧಿ ಹಾಗೂ ಅದೇ ಪಕ್ಷದ ನಾಯಕರೂ ಆಗಿದ್ದ 45 ವರ್ಷದ ಪಾರ್ಥಸಾರಥಿ ರೆಡ್ಡಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಕಡಪ: 62 ವರ್ಷದ ವೈಎಸ್‌ಆರ್‌ಸಿ ಪಕ್ಷದ ಮುಖಂಡ ಶಿವಪ್ರಸಾದ್ ರೆಡ್ಡಿ ತಮ್ಮ ಸಂಬಂಧಿ ಹಾಗೂ ಅದೇ ಪಕ್ಷದ ನಾಯಕರೂ ಆಗಿದ್ದ 45 ವರ್ಷದ ಪಾರ್ಥಸಾರಥಿ ರೆಡ್ಡಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಡಪ ಜಿಲ್ಲೆಯ ಪುಲಿವೆಂಡುಲಾ ಮಂಡಲದ ನಲ್ಲಾಪುರೆಡಿಪಾಲೆ ಗ್ರಾಮದಲ್ಲಿ ಮಂಗಳವಾರ ಈ ಘಟನೆ ವರದಿಯಾಗಿದೆ.

ಬೆಳಿಗ್ಗೆ 8 ಗಂಟೆ ಸುಮಾರಿಗೆ ಪಾರ್ಥಸಾರಥಿ ರೆಡ್ಡಿ ಶಿವಪ್ರಸಾದ್ ರೆಡ್ಡಿ ಅವರ ಮನೆಗೆ ಹೋಗಿ ಚಾಕುವಿನಿಂದ ಹಲ್ಲೆಗೆ ಯತ್ನಿಸಿದರು. ಆ ಸಮಯದಲ್ಲಿ, ಆತ್ಮರಕ್ಷಣೆಯಲ್ಲಿ, ಶಿವಪ್ರಸಾದ್ ರೆಡ್ಡಿ ತನ್ನ ಪರವಾನಗಿ ಪಡೆದ ರಿವಾಲ್ವರ್‌ನಿಂದ ಪಾರ್ಥಸಾರಥಿ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಆ ವೇಳೆ ಪಾರ್ಥಸಾರಥಿ ರೆಡ್ಡಿ ಸ್ಥಳದಲ್ಲೇ ಮೃತಪಟ್ಟರು.

ಘಟನೆಯ ಬಳಿಕ ಬಂಧನ ಭೀತಿಯುಂದ  ಶಿವಪ್ರಸಾದ್ ರೆಡ್ಡಿ, ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ನಂತರ ಅವರನ್ನು ಪುಲಿವೆಂಡುಲಾ ವಲಯದ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ವೈದ್ಯರು ಅವರು "ಮೃತಪಟ್ಟಿರುವುದಾಗಿ" ಘೋಷಿಸಿದರು.

ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಕೈಗೆತ್ತಿಕೊಂಡಿದ್ದು. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಲು ಪುಲಿವೆಂಡುಲಾದಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿತ್ತು. ಪಾರ್ಥಸಾರಥಿ ರೆಡ್ಡಿ ಮತ್ತು ಶಿವಪ್ರಸಾದ್ ರೆಡ್ಡಿ ಅವರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಈ ಸಂಬಂಧ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com