ತ್ರಿಪುರಾ: ಗೋ ಕಳ್ಳಸಾಗಣೆ ಶಂಕೆ, ಮೂವರಿಗೆ ಥಳಿತ! 

 ಗೋವುಗಳ ಕಳ್ಳಸಾಗಣೆ ಶಂಕೆಯಿಂದ ಮೂವರಿಗೆ ತೀವ್ರವಾಗಿ ಥಳಿಸಿರುವ ಘಟನೆ ತ್ರಿಪುರಾದಲ್ಲಿ ನಡೆದಿದೆ. 
ಥಳಿತ (ಸಾಂಕೇತಿಕ ಚಿತ್ರ)
ಥಳಿತ (ಸಾಂಕೇತಿಕ ಚಿತ್ರ)
Updated on

ಅಗರ್ತಲಾ: ಗೋವುಗಳ ಕಳ್ಳಸಾಗಣೆ ಶಂಕೆಯಿಂದ ಮೂವರಿಗೆ ತೀವ್ರವಾಗಿ ಥಳಿಸಿರುವ ಘಟನೆ ತ್ರಿಪುರಾದಲ್ಲಿ ನಡೆದಿದೆ. 

ಖೋವಾಯ್ ಜಿಲ್ಲೆಯಲ್ಲಿ ಭಾನುವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು,  ನಮನ್ಜ್ಯೋಯ್ಪಾರಾದ ಗ್ರಾಮಸ್ಥರು ಅಗರ್ತಲಾ ಮಾರ್ಗದಲ್ಲಿ ಐದು ಹಸುಗಳನ್ನು ಹೊತ್ತು ಸಂಚರಿಸುತ್ತಿದ್ದ ವಾಹನವನ್ನು ತಡೆದು ನಿಲ್ಲಿಸಿದ್ದಾರೆ. ಇದರಲ್ಲಿದ್ದ ಮೂರು ಮಂದಿಯನ್ನು ಮಾರಕಾಸ್ತ್ರಗಳಿಂದ ಹೊಡೆದಿದ್ದು, ಓರ್ವ ಪರಾರಿಯಾಗಲು ಯತ್ನಿಸಿದ್ದಾನೆ ಆದರೆ ಉತ್ತರ ಮಹರಣಿಪುರದಲ್ಲಿ ಆತನನ್ನು ಹಿಡಿದು ಥಳಿಸಲಾಗಿದೆ. 

ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಥಳಿತಕ್ಕೆ ಒಳಗಾದವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಮಾರ್ಗ ಮಧ್ಯದಲ್ಲೇ ಅವರು ಸಾವನ್ನಪ್ಪಿದ್ದರು ಎಂದು ವೈದ್ಯರು ಘೋಷಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಮೃತಪಟ್ಟವರು ಜಯೀದ್ ಹೊಸ್ಸೇನ್ (30) ಬಿಲಾಲ್ ಮಿಯಾ (28) ಸೈಫುಲ್ ಇಸ್ಲಾಮ್ (18) ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com