ಜಮ್ಮು-ಕಾಶ್ಮೀರದ ನಂತರ, ಈಗ ಲಡಾಖ್, ಕಾರ್ಗಿಲ್ ಪಕ್ಷಗಳನ್ನು ಜು.1 ರಂದು ಮಾತುಕತೆಗೆ ಆಹ್ವಾನಿಸಿದ ಕೇಂದ್ರ 

ಜಮ್ಮು-ಕಾಶ್ಮೀರದ ನಾಯಕರೊಂದಿಗೆ ಜೂ.24 ರಂದು ಸಭೆ ನಡೆಸಿದ ಬಳಿಕ ಈಗ ಕೇಂದ್ರ ಸರ್ಕಾರ ಲಡಾಖ್ ಮತ್ತು ಕಾರ್ಗಿಲ್ ಗಳ ನಾಯಕರೊಂದಿಗೆ ಜುಲೈ 1 ರಂದು ಸಭೆ ನಡೆಸಲು ಮುಂದಾಗಿದೆ. 
ಭೂಪಟದಲ್ಲಿ ಲಡಾಖ್
ಭೂಪಟದಲ್ಲಿ ಲಡಾಖ್
Updated on

ನವದೆಹಲಿ: ಜಮ್ಮು-ಕಾಶ್ಮೀರದ ನಾಯಕರೊಂದಿಗೆ ಜೂ.24 ರಂದು ಸಭೆ ನಡೆಸಿದ ಬಳಿಕ ಈಗ ಕೇಂದ್ರ ಸರ್ಕಾರ ಲಡಾಖ್ ಮತ್ತು ಕಾರ್ಗಿಲ್ ಗಳ ನಾಯಕರೊಂದಿಗೆ ಜುಲೈ 1 ರಂದು ಸಭೆ ನಡೆಸಲು ಮುಂದಾಗಿದೆ. 

ಮಾಜಿ ಸಂಸದರು ಹಾಗೂ ಸಿವಿಲ್ ಸೊಸೈಟಿಯ ಸದಸ್ಯರನ್ನು ಮಾತುಕತೆಯ ಸಭೆಗೆ ಆಹ್ವಾನಿಸಲಾಗಿದ್ದು, ಜುಲೈ.1 ರಂದು ಬೆಳಿಗ್ಗೆ 11 ಗಂಟೆಗೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ ನೇತೃತ್ವದಲ್ಲಿ ಸಭೆ ನಡೆಯಲಿದೆ. 

ಜಮ್ಮು-ಕಾಶ್ಮೀರದ ನಾಲ್ವರು ಮಾಜಿ ಮುಖ್ಯಮಂತ್ರಿಗಳೂ ಸೇರಿದಂತೆ 14 ರಾಜಕೀಯ ನಾಯಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರದಂದು ಮೂರುವರೆ ಗಂಟೆಗಳ ಕಾಲ ಸಭೆ ನಡೆಸಿದ್ದರು. 

ಜಮ್ಮು-ಕಾಶ್ಮೀರದಲ್ಲಿ ಡೀಲಿಮಿಟೇಷನ್, ಯಶಸ್ವಿ ಚುನಾವಣೆಗಳು ಹಾಗೂ ಪ್ರದೇಶದಲ್ಲಿ ಪ್ರಜಾಪ್ರಭುತ್ವದ ಪುನರ್ಸ್ಥಾಪನೆ ಮುಂತಾದ ವಿಷಯಗಳು ಚರ್ಚೆಯಾಗಿದ್ದವು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com