ಮುಂಬೈ: ಟೌಕ್ಟೆ ಚಂಡಮಾರುತಕ್ಕೆ 273 ಮಂದಿ ಇದ್ದ ಬಾರ್ಜ್ ದಿಕ್ಕಾಪಾಲು!

ಟೌಕ್ಟೆ ಚಂಡಮಾರುತದ ಪರಿಣಾಮ ಮುಂಬೈ ನ ಕಡಲಲ್ಲಿ 273 ಮಂದಿಯನ್ನು ಹೊತ್ತು ಸಂಚರಿಸುತ್ತಿದ್ದ ಬಾರ್ಜ್ ದಿಕ್ಕಾಪಾಲಾಗಿ ಚಲಿಸಿದ ಘಟನೆ ವರದಿಯಾಗಿದೆ. 
ಮುಂಬೈ: ಟೌಕ್ಟೆ ಚಂಡಮಾರುತಕ್ಕೆ ದಿಕ್ಕಾಪಾಲಾಯ್ತು 273 ಮಂದಿ ಇದ್ದ ಬಾರ್ಜ್!
ಮುಂಬೈ: ಟೌಕ್ಟೆ ಚಂಡಮಾರುತಕ್ಕೆ ದಿಕ್ಕಾಪಾಲಾಯ್ತು 273 ಮಂದಿ ಇದ್ದ ಬಾರ್ಜ್!
Updated on

ಮುಂಬೈ: ಟೌಕ್ಟೆ ಚಂಡಮಾರುತದ ಪರಿಣಾಮ ಮುಂಬೈ ನ ಕಡಲಲ್ಲಿ 273 ಮಂದಿಯನ್ನು ಹೊತ್ತು ಸಂಚರಿಸುತ್ತಿದ್ದ ಬಾರ್ಜ್ ದಿಕ್ಕಾಪಾಲಾಗಿ ಚಲಿಸಿದ ಘಟನೆ ವರದಿಯಾಗಿದೆ. 

ಟೌಕ್ಟೆ  ಚಂಡಮಾರುತ ಮೇ.17 ರಂದು ಸಂಜೆ ಗುಜರಾತ್ ನ್ನು ಪ್ರವೇಶಿಸಲಿದೆ. ಇದಕ್ಕೂ ಮುನ್ನ  ಬಾಂಬೆ ಹೈ ಏರಿಯಾದ ಹೀರಾ ಆಯಿಲ್ ಫೀಲ್ಡ್ಸ್ ನಿಂದ ಬಾರ್ಜ್ P305 ದಿಕ್ಕಾಪಾಲಾಗಿದ್ದು, ಈ ಬಾರ್ಜ್ ನಲ್ಲಿ 273 ಮಂದಿ ಇದ್ದರು. ಬಾರ್ಜ್ ನಲ್ಲಿದ್ದವರ ಶೋಧ, ರಕ್ಷಣೆ ಕಾರ್ಯಾಚರಣೆಗಾಗಿ  ಐಎನ್ಎಸ್ ಕೊಚ್ಚಿಯನ್ನು ಕಳಿಸಲಾಗಿದೆ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ. 

ಆಯಿಲ್ ಫೀಲ್ಡ್ಸ್ ಮುಂಬೈ ನ ನೈರುತ್ಯದಾದ್ಯಂತ 70 ಕಿ.ಮೀ ವರೆಗೂ ಕಾಣಸಿಗುತ್ತದೆ. ಟೌಕ್ಟೆ ಚಂಡಮಾರುತದ ಹಿನ್ನೆಲೆಯಲ್ಲಿ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರಕ್ಕಾಗಿ ಹಲವು ಹಡಗುಗಳನ್ನು ಕಳಿಸಲಾಗಿದೆ. 

ಯುದ್ಧನೌಕೆ ಬಾರ್ಜ್ ನ್ನು ಸಂಜೆ 4 ಗಂಟೆ ವೇಳೆಗೆ ತಲುಪಲಿದೆ. ಇನ್ನು ಚಂಡಮಾರುತದ ಹಿನ್ನೆಲೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಗಳನ್ನು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ವರೆಗೆ ಸ್ಥಗಿತಗೊಳಿಸಲಾಗಿತ್ತು. ರಾಯ್ ಘಡ ಜಿಲ್ಲೆ ಸೇರಿದಂತೆ ಹಲವೆಡೆ ರೆಡ್ ಅಲರ್ಟ್ ನ್ನು ಘೋಷಿಸಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com