ಪತ್ರಕರ್ತರನ್ನು ಫ್ರಂಟ್ ಲೈನ್ ವರ್ಕರ್ಸ್ ಎಂದು ಘೋಷಿಸಿ, ಆದ್ಯತೆ ಮೇಲೆ ಲಸಿಕೆ ನೀಡಿ: ಸಂಪಾದಕರ ಗಿಲ್ಡ್

ದೇಶದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ ಪತ್ರಕರ್ತರನ್ನು ಮುಂಚೂಣಿ ಕೆಲಸಗಾರರೆಂದು ಘೋಷಿಸಿ ಅವರಿಗೆ ಆದ್ಯತೆಯ ಮೇಲೆ ಲಸಿಕೆ ನೀಡುವಂತೆ ಸಂಪಾದಕರ ಗಿಲ್ಡ್ ಗುರುವಾರ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದೆ.
ಕೋವಿಡ್-19 ಲಸಿಕೆ
ಕೋವಿಡ್-19 ಲಸಿಕೆ

ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ ಪತ್ರಕರ್ತರನ್ನು ಮುಂಚೂಣಿ ಕೆಲಸಗಾರರೆಂದು ಘೋಷಿಸಿ ಅವರಿಗೆ ಆದ್ಯತೆಯ ಮೇಲೆ ಲಸಿಕೆ ನೀಡುವಂತೆ ಸಂಪಾದಕರ ಗಿಲ್ಡ್ ಗುರುವಾರ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದೆ.

ಸುದ್ದಿ ಸಂಸ್ಥೆಗಳು ಸಾಂಕ್ರಾಮಿಕ ರೋಗ, ಚುನಾವಣೆಗಳು ಮತ್ತು ಇತರ ಪ್ರಸಕ್ತ ವ್ಯವಹಾರಗಳನ್ನು ಪಟ್ಟುಬಿಡದೆ ವರದಿ ಮಾಡುತ್ತಿವೆ. ಓದುಗರಿಗೆ ಸುದ್ದಿ ಮತ್ತು ಮಾಹಿತಿಯ ಹರಿವು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯುತ್ತಿದೆ. ಹೀಗಾಗಿ ಪತ್ರಕರ್ತರನ್ನು ಫ್ರಂಟ್ ಲೈನ್ ವರ್ಕರ್ಸ್ ಎಂದು ಘೋಷಿಸಬೇಕು ಎಂದು ಗಿಲ್ಡ್ ಪ್ರಕಟಣೆಯಲ್ಲಿ ತಿಳಿಸಿದೆ.

"ಸುದ್ದಿ ಮಾಧ್ಯಮವನ್ನು ಸಹ ಅಗತ್ಯ ಸೇವೆಗಳಲ್ಲಿ ಸೇರಿಸಲಾಗಿದೆ. ಆದ್ದರಿಂದ, ಪತ್ರಕರ್ತರಿಗೆ ಈ ರಕ್ಷಣೆಯ ಹೊದಿಕೆಯನ್ನು ನೀಡುವುದು ನ್ಯಾಯೋಚಿತವಾಗಿರುತ್ತದೆ, ವಿಶೇಷವಾಗಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ" ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ(ಇಜಿಐ) ಪತ್ರಕರ್ತರನ್ನು ಮುಂಚೂಣಿ ಕೆಲಸಗಾರರೆಂದು ಘೋಷಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತದೆ ಮತ್ತು ಅವರಿಗೆ ಇತರ ಮುಂಚೂಣಿ ಕಾರ್ಮಿಕರೊಂದಿಗೆ ಕೊರೋನಾ ವೈರಸ್ ವಿರುದ್ಧ ಆದ್ಯತೆಯ ಲಸಿಕೆ ನೀಡಲು ಅವಕಾಶವಿದೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com