ಪಿಎಂ ಕೇರ್ಸ್ ಫಂಡ್ ನಿಂದ ಆಕ್ಸಿಜನ್ ಒದಗಿಸಲು ದೇಶಾದ್ಯಂತ ವಿಶೇಷ ಅಭಿಯಾನ: ಗೃಹ ಸಚಿವ ಅಮಿತ್ ಶಾ 

ಪಿಎಂ ಕೇರ್ಸ್ ಫಂಡ್ ನಿಂದ ಆಸ್ಪತ್ರೆಗಳಿಗೆ ಕೋವಿಡ್-19 ಸೋಂಕಿತರಿಗೆ ಆಕ್ಸಿಜನ್ ನ್ನು ತುರ್ತಾಗಿ ನೀಡಲು ವಿಶೇಷ ಅಭಿಯಾನವನ್ನು ದೇಶಾದ್ಯಂತ ಆರಂಭಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಅಮಿತ್ ಶಾ
ಅಮಿತ್ ಶಾ

ಗಾಂಧಿನಗರ(ಗುಜರಾತ್): ಪಿಎಂ ಕೇರ್ಸ್ ಫಂಡ್ ನಿಂದ ಆಸ್ಪತ್ರೆಗಳಿಗೆ ಕೋವಿಡ್-19 ಸೋಂಕಿತರಿಗೆ ಆಕ್ಸಿಜನ್ ನ್ನು ತುರ್ತಾಗಿ ನೀಡಲು ವಿಶೇಷ ಅಭಿಯಾನವನ್ನು ದೇಶಾದ್ಯಂತ ಆರಂಭಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಅವರು ಇಂದು ಗುಜರಾತ್ ನ ಗಾಂಧಿನಗರದ ಕೊಲ್ವಾಡ ಗ್ರಾಮದ ಆಯುರ್ವೇದ ಆಸ್ಪತ್ರೆಯಲ್ಲಿ ಆಕ್ಸಿಜನ್ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ಪಿಎಂ ಕೇರ್ಸ್ ಫಂಡ್ ನಿಂದ ಆಕ್ಸಿಜನ್ ಪೂರೈಸುವ ವಿಶೇಷ ಅಭಿಯಾನದ ಭಾಗವಾಗಿ 11 ಹೊಸ ಪಿಎಸ್ ಎ ಆಕ್ಸಿಜನ್ ಘಟಕವನ್ನು ಗುಜರಾತ್ ನಲ್ಲಿ ಸ್ಥಾಪಿಸಲಾಗಿದೆ. ಗುಜರಾತ್ ನಲ್ಲಿ ಉತ್ಪಾದಿಸಿದ ಹೆಚ್ಚುವರಿ ಆಕ್ಸಿಜನ್ ನ್ನು ಬೇರೆ ರಾಜ್ಯಗಳಿಗೆ ವಿತರಿಸಲಾಗುವುದು ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com