ಶಾಂತಿ ಮಾತುಕತೆಗೆ ಯುಎಲ್ಎಫ್ಎ-ಐ ನ್ನು ಆಹ್ವಾನಿಸಿದ ಅಸ್ಸಾಂ ಸಿಎಂ 

ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ ಆ.15 ರಂದು ಯುಎಲ್ಎಫ್ಎ-ಐ ನ ಮುಖ್ಯಸ್ಥ ಪರೇಶ್ ಬರುವಾ ಅವರನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ. 
ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ
ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ

ಗುವಾಹಟಿ: ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ ಆ.15 ರಂದು ಯುಎಲ್ಎಫ್ಎ-ಐ ನ ಮುಖ್ಯಸ್ಥ ಪರೇಶ್ ಬರುವಾ ಅವರನ್ನು ಶಾಂತಿ ಮಾತುಕತೆಗೆ ಆಹ್ವಾನಿಸಿದ್ದಾರೆ. 

ಇದೇ ವೇಳೆ ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿರುವ ಕೋವಿಡ್-19 ಯೋಧರಿಗೆ ಹಿಮಂತ ಬಿಸ್ವ ಶರ್ಮ  ಕೃತಜ್ಞತೆ ಸಲ್ಲಿಸಿದ್ದಾರೆ. 

75 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಾತನಾಡಿರುವ ಅವರು, ಅಸ್ಸಾಂ ಈ ಬಾರಿ ದಶಕಗಳಲ್ಲೇ ಮೊದಲ ಬಾರಿಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಯುಎಲ್ಎಫ್ಎ ಸೇರಿದಂತೆ ಯಾವುದೇ ಉಗ್ರ ಸಂಘಟನೆಯ ಪ್ರತಿಭಟನೆ ಇಲ್ಲದೇ ನಡೆಸುತ್ತಿದೆ. ಅಸ್ಸಾಂ ನ ಜನತೆಯ ಪರವಾಗಿ, ಯುಎಲ್ಎಫ್ಎ-ಐ ನ ಮುಖ್ಯಸ್ಥ ಪರೇಶ್ ಬರುವಾ ಅವರನ್ನು ಮಾತುಕತೆಗೆ ಆಹ್ವಾನಿಸುತ್ತಿದ್ದೇನೆ. ನಮ್ಮ ರಾಜ್ಯದ ಯಾವುದೇ ಯುವಕನೂ ಹತ್ಯೆಗೀಡಾಗಬಾರದು ಎಂದು ಅವರು ಕರೆ ನೀಡಿದ್ದಾರೆ. 

ಪ್ರತಿ ವರ್ಷದ ಗಣರಾಜ್ಯ ದಿನಾಚರಣೆ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಅಸ್ಸಾಂ ಬಂದ್ ಗೆ ಕರೆ ನೀಡುತ್ತಿದ್ದ ಯುಎಲ್ಎಫ್ಎ-ಐ ಈ ಬಾರಿ ದಶಕಗಳಲ್ಲೇ ಮೊದಲ ಬಾರಿಗೆ ಬಂದ್ ಗೆ ಕರೆ ನೀಡಿರಲಿಲ್ಲ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com