ಪತ್ನಿ ವಿಯೋಗ ತಾಳಲಾರದೆ ಆಕೆಯ ಚಿತೆಗೆ ಹಾರಿ ಪತಿ ಆತ್ಮಹತ್ಯೆ

ಪತ್ನಿಯ ಶವ ಸಂಸ್ಕಾರ ವೇಳೆ ನೀಲಮಣಿ, ದುಃಖತಪ್ತರಾಗಿ ಹತ್ತಿರದಲ್ಲಿ ಕುಳಿತುಕೊಂಡಿದ್ದರು. ಚಿತೆಗೆ ಬೆಂಕಿ ಸ್ಪರ್ಶ ನೀಡಿದ ಕೊಂಚ ಸಮಯದ ನಂತರ ಕುಟುಂಬಸ್ಥರು ಸ್ನಾನ ಮಾಡಲೆಂದು ಪಕ್ಕದ ಹೊಳೆಗೆ ತೆರಳಿದ್ದರು.
ಕಾಲ್ಪನಿಕ ಚಿತ್ರ
ಕಾಲ್ಪನಿಕ ಚಿತ್ರ
Updated on

ಭುವನೇಶ್ವರ: ಪತ್ನಿಯ ಶವ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ವೃದ್ಧ ವ್ಯಕ್ತಿಯೋರ್ವ ಉರಿಯುತ್ತಿದ್ದ ಚಿತೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ.

ಸಿಯಾಲ್ಜೋಡಿ ಎಂಬ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು ಮೃತ ವೃದ್ಧ ನೀಲಮಣಿಗೆ 65 ವರ್ಷ ವಯಸ್ಸಾಗಿತ್ತು ಎಂಡು ತಿಳಿದುಬಂದಿದೆ. 

ನೀಲಮಣಿ ಪತ್ನಿ ರಾಯ್ಬರಿ ಹೃದಯಾಘಾತದಿಂದ ಮಂಗಳವಾರ ಮೃತಪಟ್ಟಿದ್ದರು. ಅವರ ಶವ ಸಂಸ್ಕಾರ ವೇಳೆ ನೀಲಮಣಿ ಪತ್ನಿ ವಿಯೋಗ ತಾಳಲಾರದೆ ದುಃಖತಪ್ತರಾಗಿ ಹತ್ತಿರದಲ್ಲಿ ಕುಳಿತುಕೊಂಡಿದ್ದರು.

ಚಿತೆಗೆ ಬೆಂಕಿ ಸ್ಪರ್ಶ ನೀಡಿದ ಕೊಂಚ ಸಮಯದ ನಂತರ ಕುಟುಂಬಸ್ಥರು ಸ್ನಾನ ಮಾಡಲೆಂದು ಪಕ್ಕದ ಹೊಳೆಗೆ ತೆರಳಿದ್ದರು. ಈ ಸಂದರ್ಭ ನೀಲಮಣಿ ಚಿತೆಯೊಳಗೆ ಹಾರಿದ್ದಾಗಿ ತಿಳಿದುಬಂದಿದೆ. 

ಸದ್ದು ಕೇಳಿ ಕುಟುಂಬಸ್ಥರು ಓಡಿ ಬರುವ ವೇಳೆಗೆ ನೀಲಮಣಿ ದೇಹ ಸಂಪೂರ್ಣ ಬೆಂಕಿಗೆ ಆಹುತಿಯಾಗಿ ಸುಟ್ಟು ಕರಕಲಾಗಿತ್ತು.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಘಟನೆ ನಡೆದ ಸ್ಥಳಕ್ಕೆ ಅಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com