ಕೊರೋನಾ 3ನೇ ಅಲೆ ಆತಂಕದ ನಡುವೆ 'ಜನಾಶೀರ್ವಾದ' ಯಾತ್ರೆ ಜನರನ್ನು ಅಪಾಯಕ್ಕೆ ತಳ್ಳುತ್ತಿದೆ: ಮಹಾರಾಷ್ಟ್ರ ಸಿಎಂ

ಬಿಜೆಪಿಯ 'ಜನಾಶೀರ್ವಾದ' ಯಾತ್ರೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು, ಕೊರೋನಾ ಮೂರನೇ ಅಲೆಯ ಆತಂಕದ ನಡುವೆಯೇ ಆಶೀರ್ವಾದ" ರ್ಯಾಲಿಗಳನ್ನು ಆಯೋಜಿಸುವ ಮೂಲಕ...
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ

ಮುಂಬೈ: ಬಿಜೆಪಿಯ 'ಜನಾಶೀರ್ವಾದ' ಯಾತ್ರೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು, ಕೊರೋನಾ ಮೂರನೇ ಅಲೆಯ ಆತಂಕದ ನಡುವೆಯೇ ಆಶೀರ್ವಾದ" ರ್ಯಾಲಿಗಳನ್ನು ಆಯೋಜಿಸುವ ಮೂಲಕ "ಜನರ ಜೀವವನ್ನು ಅಪಾಯಕ್ಕೆ ತಳ್ಳಲಾಗುತ್ತಿದೆ" ಮಂಗಳವಾರ ಹೇಳಿದ್ದಾರೆ.

ಇಂದು ಥಾಣೆಯಲ್ಲಿ ಆಮ್ಲಜನಕ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಮಹಾ ಸಿಎಂ, "ಇಂತಹ ರ್ಯಾಲಿಗಳಿಂದಾಗಿ ಕೆಲವರು ಸತ್ತರೆ ಈ ಜನರು ತಲೆಕೆಡಿಸಿಕೊಳ್ಳುತ್ತಿಲ್ಲ" ಎಂದು ಹೇಳಿದರು. 

ಬಿಜೆಪಿಯ ಹೊಸದಾಗಿ ನೇಮಕಗೊಂಡ ಕೇಂದ್ರ ಸಚಿವರು ಇತ್ತೀಚೆಗೆ ಜನರ ಆಶೀರ್ವಾದ ಪಡೆಯಲು "ಜನಾಶೀರ್ವಾದ್" ರ್ಯಾಲಿಗಳನ್ನು ಆಯೋಜಿಸಿದರು. 
ಕೊರೋನಾ ಮೂರನೇ ಅಲೆಯ ಆತಂಕದ ನಡುವೆ 'ಆಶೀರ್ವಾದ' ರ್ಯಾಲಿಗಳನ್ನು ಆಯೋಜಿಸುತ್ತಿದ್ದಾರೆ. ಅವರು ಜನರಿಂದ ಆಶೀರ್ವಾದ ಪಡೆಯುತ್ತಿಲ್ಲ. ಆದರೆ ಅವರು ವಾಸ್ತವವಾಗಿ ಜನರ ಜೀವವನ್ನು ಅಪಾಯಕ್ಕೆ ತಳ್ಳುತ್ತಿದ್ದಾರೆ" ಎಂದು ಠಾಕ್ರೆ ಹೇಳಿದರು. 

ಶಿವಸೇನೆ ಸ್ಥಾಪನೆಯಾದಾಗ ಪಕ್ಷವು ಶೇ. 80 ರಷ್ಟು ಸಾಮಾಜಿಕ ಕಾರ್ಯಗಳನ್ನು ಮತ್ತು ಶೇ. 20 ರಷ್ಟು ರಾಜಕೀಯ ಮಾಡುತ್ತದೆ ಎಂದು ಘೋಷಿಸಲಾಯಿತು. 
"ಆದರೆ ಇಂದು ದೇಶದಲ್ಲಿ ಶೇ. 100 ರಷ್ಟು ರಾಜಕೀಯ ಮಾಡುವ ಪಕ್ಷಗಳಿವೆ. ಅವರು ಜನರಿಗೆ ಪ್ರಯೋಜನವಾಗುವ ಯಾವುದೇ ಕೆಲಸವನ್ನು ಮಾಡಲು ಬಯಸುವುದಿಲ್ಲ. ಅವರು ಜನರ ಜೀವವನ್ನು ಅಪಾಯಕ್ಕೆ ತಳ್ಳುವ ರ್ಯಾಲಿಗಳು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ" ಎಂದು ಬಿಜೆಪಿ ವಿರುದ್ಧ ಠಾಕ್ರೆ ವಾಗ್ದಾಳಿ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com