ರೈತರ ಪ್ರತಿಭಟನೆ: ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದೇವೆ ಮುಂದೇನು ಎನ್ನುವುದನ್ನು ಬುಧವಾರ ಸಭೆ ನಂತರ ನಿಶ್ಚಯ

ಸರ್ಕಾರ ಈ ಹಿಂದೆ ಎಂ ಎಸ್ ಪಿ ನಿಗದಿ ಕುರಿತಾಗಿ ತೀರ್ಮಾನ ಕೈಗೊಳ್ಳಲು ಸಮಿತಿ ರಚಿಸುವುದಾಗಿ ತಿಳಿಸಿತ್ತು. ಆದರೆ ರೈತನಾಯಕರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಮಾತುಕತೆಯಲ್ಲಿ ನಿರತರಾಗಿರುವ ರೈತನಾಯಕರು
ಮಾತುಕತೆಯಲ್ಲಿ ನಿರತರಾಗಿರುವ ರೈತನಾಯಕರು
Updated on

ನವದೆಹಲಿ: ರೈತರ ಪ್ರತಿಭಟನೆಯನ್ನು ನಿಲ್ಲಿಸುವಂತೆ ಕೋರಿದ್ದ ಕೇಂದ್ರ ಸರ್ಕಾರಕ್ಕೆ ತಾವು ಸ್ಪಷ್ಟನೆಯನ್ನು ನೀಡಿದ್ದು, ಜೊತೆಗೆ ಕೆಲವು ಬೇಡಿಕೆಯನ್ನು ಇಟ್ಟಿದ್ದೇವೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ. 

ಸಂಘಟನೆ ಇಟ್ಟಿರುವ ಬೇಡಿಕೆಯಲ್ಲಿ ರೈತರ ವಿರುದ್ಧ ದಾಖಲಾಗಿರುವ ನಕಲಿ ಕೇಸುಗಳನ್ನು ಹಿಂಪಡೆಕೊಳ್ಳಬೇಕು ಎನ್ನುವುದೂ ಸೇರಿದೆ.

ಬುಧವಾರ ರೈತನಾಯಕರು ಇನ್ನೊಂದು ಸುತ್ತಿನ ಸಭೆ ನಡೆಸಲಿದ್ದು ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ರೈತನಾಯಕರು ತಿಳಿಸಿದ್ದಾರೆ. ಸರ್ಕಾರ ಈ ಹಿಂದೆ ಎಂ ಎಸ್ ಪಿ ನಿಗದಿ ಕುರಿತಾಗಿ ತೀರ್ಮಾನ ಕೈಗೊಳ್ಳಲು ಸಮಿತಿ ರಚಿಸುವುದಾಗಿ ತಿಳಿಸಿತ್ತು. ಆದರೆ ರೈತನಾಯಕರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com