ಶ್ರೀನಗರ: ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿರುವ ದನ್ಮಾರ್ ಪ್ರದೇಶದ ಅಲಂದಾರ್ ಕಾಲೊನಿಯಲ್ಲಿ ಶುಕ್ರವಾರ ನಸುಕಿನ ಜಾವ ನಡೆದ ಎನ್ ಕೌಂಟರ್ ನಲ್ಲಿ ಇಬ್ಬರು ಅಪರಿಚಿತ ಭಯೋತ್ಪಾದಕರ ಹತ್ಯೆಯಾಗಿದೆ.
ಸದ್ಯ ಎನ್ ಕೌಂಟರ್ ಪ್ರದೇಶದಲ್ಲಿ ಮುಂದುವರಿದಿದ್ದು ಪೊಲೀಸರು ಮತ್ತು ಭದ್ರತಾ ಪಡೆ ಶೋಧ ಕಾರ್ಯದಲ್ಲಿ ಮುಂದುವರಿದಿದ್ದಾರೆ. ಹೆಚ್ಚಿನ ಮಾಹಿತಿ ಸಿಕ್ಕಿಲ್ಲ ಎಂದು ಜಮ್ಮು-ಕಾಶ್ಮೀರ ವಲಯದ ಪೊಲೀಸರು ತಿಳಿಸಿದ್ದಾರೆ.
ಉಗ್ರರು ಅಡಗಿ ಕುಳಿತಿರುವ ಬಗ್ಗೆ ನಿಖರ ಮಾಹಿತಿ ಪಡೆದ ಭದ್ರತಾ ಪಡೆ ದನ್ಮರ್ ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯ ಮುಂದುವರಿಸಿದರು. ಸಫಕದಲ್-ಸೌರ ರಸ್ತೆಯಲ್ಲಿ ಇಂದಿನ ಎನ್ ಕೌಂಟರ್ ನಡೆದಿದೆ. ಉಗ್ರರು ಭದ್ರತಾ ಪಡೆಗೆ ಗುಂಡಿನ ಸುರಿಮಳೆಗೈಯಲು ಆರಂಭಿಸಿದ್ದರಿಂದ ಶೋಧ ಕಾರ್ಯ ಎನ್ ಕೌಂಟರ್ ಆಗಿ ಪರಿವರ್ತನೆಯಾಯಿತು, ಹತ್ಯೆಗೊಂಡ ಉಗ್ರರು ಯಾವ ಗುಂಪಿಗೆ ಸೇರಿದವರು ಎಂದು ಪತ್ತೆಯಾಗಿಲ್ಲ.
Advertisement