ಕೇಂದ್ರದ ಕೃಷಿ ಮಸೂದೆ: ಚಂಡೀಗಢದಲ್ಲಿ ಇಂದು ರೈತರಿಂದ ರಾಜ್ಯಪಾಲರಿಗೆ ಮನವಿ ಸಲ್ಲಿಕೆ, ದೆಹಲಿ ಸುತ್ತಮುತ್ತ ಭದ್ರತೆ

ಹರ್ಯಾಣ ಭಾಗದ ರೈತರು ಮೆರವಣಿಗೆ ಸಾಗಿ ರಾಜ್ಯಪಾಲರ ನಿವಾಸಕ್ಕೆ ಇಂದು ಆಗಮಿಸಿ ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆ ವಿರುದ್ಧ ತಮ್ಮ ಮನವಿಯನ್ನು ಸಲ್ಲಿಸಲಿದ್ದಾರೆ. ದೆಹಲಿ ಗಡಿಭಾಗದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಏಳು ತಿಂಗಳು ಪೂರೈಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಂಡೀಗಢ: ಹರ್ಯಾಣ ಭಾಗದ ರೈತರು ಮೆರವಣಿಗೆ ಸಾಗಿ ರಾಜ್ಯಪಾಲರ ನಿವಾಸಕ್ಕೆ ಇಂದು ಆಗಮಿಸಿ ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆ ವಿರುದ್ಧ ತಮ್ಮ ಮನವಿಯನ್ನು ಸಲ್ಲಿಸಲಿದ್ದಾರೆ. ದೆಹಲಿ ಗಡಿಭಾಗದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಏಳು ತಿಂಗಳು ಪೂರೈಸಿದೆ.

ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಮನವಿಯನ್ನು ಸಲ್ಲಿಸುವುದು ತಮ್ಮ ಉದ್ದೇಶವಾಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚದ ಭಾಗವಾಗಿರುವ ರೈತರ ಪ್ರತಿಭಟನೆಯಲ್ಲಿ ತೊಡಗಿರುವ ಭಾರತೀಯ ಕಿಸಾನ್ ಸಂಘ ತಿಳಿಸಿದೆ.

ದೆಹಲಿಯ ಗಡಿಭಾಗದ ಸಿಂಘು, ಟಿಕ್ರಿ ಮತ್ತು ಗಾಜಿಪುರ್ ಗಡಿಭಾಗಗಳಲ್ಲಿ ಪ್ರತಿಭಟನೆಯಲ್ಲಿ ನಿರತರಾಗಿರುವ ರೈತರು ಇಂದು 'ಕೃಷಿಯನ್ನು ರಕ್ಷಿಸಿ, ಪ್ರಜಾಪ್ರಭುತ್ವ ದಿನವನ್ನು ರಕ್ಷಿಸಿ' ಎಂಬ ಘೋಷವಾಕ್ಯದೊಂದಿಗೆ ತಮ್ಮ ಏಳು ತಿಂಗಳು ಪೂರ್ಣಗೊಂಡ ಪ್ರತಿಭಟನೆಯ ದಿನವನ್ನು ಆಚರಿಸಲಿದ್ದಾರೆ.

ಸಂಯುಕ್ತ ಕಿಸಾನ್ ಮೋರ್ಚದ ಕರೆಯ ಮೇರೆಗೆ ಚಂಡೀಗಢದಲ್ಲಿ ಭಾರತೀಯ ಕಿಸಾನ್ ಸಂಘಟನೆಯ ರೈತರು ಮೆರವಣಿಗೆ ಸಾಗಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಿದ್ದೇವೆ. ಪ್ರತಿಭಟನಾ ನಿರತ ರೈತರು ಬೆಳಗಿನ ಹೊತ್ತು ಪಂಚ್ ಕುಲಾದಲ್ಲಿ ಸೇರಿ ನಂತರ ರಾಜಭವನಕ್ಕೆ ಮೆರವಣಿಗೆ ಹೊರಡಲಿದ್ದೇವೆ ಎಂದು ಸಂಘಟನೆ ತಿಳಿಸಿದೆ. 

ಈ ಮಧ್ಯೆ ರೈತರ ಮೆರವಣಿಗೆ ಹಿನ್ನೆಲೆಯಲ್ಲಿ ಚಂಡೀಗಢ ಪೊಲೀಸರು ಬಿಗಿ ಕ್ರಮ ಕೈಗೊಂಡಿದ್ದಾರೆ. ತೀವ್ರ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಚಂಡೀಗಢದಲ್ಲಿ 13 ಪ್ರವೇಶ ಮತ್ತು ನಿರ್ಗಮನ ಕೇಂದ್ರಗಳು ಇಂದು ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ಮುಚ್ಚಿರುತ್ತದೆ ಎಂದು ಭಾರತೀಯ ಕಿಸಾನ್ ಸಂಘ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com