ನಾರ್ಕೊಟಿಕ್ಸ್ ನಿಯಂತ್ರಣ ಬ್ಯುರೋ ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್ ಅವರ ಚಾಲಕನ ಹೇಳಿಕೆಯನ್ನು ದಾಖಲಿಸಿಕೊಂಡಿದೆ.
ಮುಂಬೈ ಕೋಸ್ಟ್ ನಲ್ಲಿ ಕ್ರೂಸ್ ಶಿಪ್ ನಲ್ಲಿ ಡ್ರಗ್ಸ್ ಗೆ ಸಂಬಂಧಿಸಿದಂತೆ ಎನ್ ಸಿಬಿ ದಾಳಿ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಸಿಬಿ ಶಾರೂಖ್ ಖಾನ್ ಅವರ ಚಾಲಕನ ಹೇಳಿಕೆಯನ್ನು ಪಡೆದುಕೊಂಡಿದೆ.
ಮುಂಬೈ ನಲ್ಲಿರುವ ಎನ್ ಸಿಬಿ ಕಚೇರಿಗೆ ತೆರಳಿದ ಶಾರೂಖ್ ಚಾಲಕ ಆಂಟಿ ಡ್ರಗ್ಸ್ ಸಂಸ್ಥೆ ಎದುರು ಹೇಳಿಕೆ ನೀಡಿದ್ದಾರೆ. ಬಳಿಕ ಆತನನ್ನು ಬಿಡುಗಡೆ ಮಾಡಿದ್ದಾರೆ.
ಎನ್ ಸಿಬಿ ಸಿಬ್ಬಂದಿಗಳು ಶನಿವಾರದಂದು ರಾತ್ರಿ ಮುಂಬೈ ನ ಉಪನಗರಗಳಲ್ಲಿ ದಾಳಿ ನಡೆಸಿ ಡ್ರಗ್ಸ್ ವಶಕ್ಕೆ ಪಡೆದು ಶಿವರಾಜ್ ರಾಮ್ ದಾಸ್ ಎಂಬಾತನನ್ನು ಬಂಧಿಸಲಾಗಿತ್ತು. ಡ್ರಗ್ಸ್ ಪ್ರಕರಣದಲ್ಲಿ ಶಾರೂಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರೂ ಸೇರಿ 19 ಮಂದಿಯನ್ನು ಎನ್ ಸಿಬಿ ವಶಕ್ಕೆ ಪಡೆದಿದೆ.
ಮುಂಬೈ ನ ಕಡಲ ತೀರದಲ್ಲಿ ಕ್ರೂಸ್ ಪಾರ್ಟಿಯ ವೇಳೆ ಕಳೆದ ವಾರ ಎನ್ ಸಿಬಿ ದಾಳಿ ನಡೆಸಿ ಆರ್ಯನ್ ಖಾನ್ ನ್ನು ವಶಕ್ಕೆ ಪಡೆದಿತ್ತು. ಆರ್ಯನ್ ಖಾನ್ ಗೆ ಸದ್ಯ ಜಾಮೀನು ನಿರಾಕರಿಸಲಾಗಿದೆ.
Advertisement