ಮುಂಬೈ: ಮುಂಬೈ ನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಪತ್ರಕರ್ತ ಅರ್ನಬ್ ಗೋಸ್ವಾಮಿ ಹಾಗೂ ಎಆರ್ ಜಿ ಮೀಡಿಯಾದ ವಿರುದ್ಧದ ಮಾನನಷ್ಟ ಮೊಕದ್ದಮೆಯನ್ನು ಹಿಂಪಡೆದಿದ್ದಾರೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿಡಿ ಕೇದಾರ್ ಮೊಕದ್ದಮೆಯನ್ನು ಹಿಂಪಡೆಯಲು ಅನುಮತಿ ನೀಡಿದ್ದು, 1,500 ರೂಪಾಯಿಗಳ ನಾಮಮಾತ್ರ ವೆಚ್ಚವನ್ನು ಗೋಸ್ವಾಮಿಗೆ ನೀಡಿ ಪ್ರಕರಣ ಹಿಂಪಡೆಯಲು ಸಿಂಗ್ ಗೆ ಸೂಚನೆ ನೀಡಿದ್ದಾರೆ.
ಮಾನನಷ್ಟ ಮೊಕದ್ದಮೆ ಹಾಕಿದರೆ, ಸಮರ್ಥನೆ ನೀಡುವವರು ಅಡ್ವೊಕೇಟ್ ನ್ನು ನೇಮಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ ಬೇಷರತ್ ಆಗಿ ಮೊಕದ್ದಮೆ ಹಿಂಪಡೆದರೂ ಅದಕ್ಕೆ ವೆಚ್ಚಗಳನ್ನು ವಿಧಿಸಲೇಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
2021 ರಲ್ಲಿ ಗೋಸ್ವಾಮಿ ಹಾಗೂ ರಿಪಬ್ಲಿಕ್ ಚಾನಲ್ ವಿರುದ್ಧ ಪರಮ್ ಬಿರ್ ಸಿಂಗ್ 90,00,000 ರೂಪಾಯಿಗಳ ಮಾನನಷ್ಟ ಮೊಕದ್ದಮೆ ಹೂಡಿದ್ದರು.
Advertisement