ಬಂಡಾಯ ಶಾಸಕರು ಶಿವಸೇನೆಗೆ ವಾಪಸ್ಸಾಗುತ್ತಾರೆ ಎಂಬ ವಿಶ್ವಾಸದಲ್ಲೇ ಇರುವ ರಾವುತ್! 

ಶಿವಸೇನೆಯ ಬಂಡಾಯ ಶಾಸಕರು ಮರಳಿ ಬರುತ್ತಾರೆ ಎಂಬ ವಿಶ್ವಾಸವಿದೆ ಎಂದು ಶಿವಸೇನೆಯ ಸಂಸದ ಸಂಜಯ್ ರಾವುತ್ ಹೇಳಿದಾರೆ. 
ಸಂಜಯ್ ರಾವುತ್
ಸಂಜಯ್ ರಾವುತ್
Updated on

ಮುಂಬೈ: ಶಿವಸೇನೆಯ ಬಂಡಾಯ ಶಾಸಕರು ಮರಳಿ ಬರುತ್ತಾರೆ ಎಂಬ ವಿಶ್ವಾಸವಿದೆ ಎಂದು ಶಿವಸೇನೆಯ ಸಂಸದ ಸಂಜಯ್ ರಾವುತ್ ಹೇಳಿದಾರೆ. 

ನಾವು ಎಂದಿಗೂ ಬಂಡಾಯ ಶಾಸಕರ ಜೊತೆ ಮಾತುಕತೆಯಲ್ಲಿದ್ದೆವು. ಅವರು ನಮ್ಮ ಜನ, ಅವರು ವಾಪಸ್ ಬರುತ್ತಾರೆ. ಶಿವಸೇನೆ ಬಾಳ್ ಠಾಕ್ರೆ ಅವರದ್ದು ಅದು ಬೇರೆಯವರದ್ದಾಗಲು ಸಾಧ್ಯವಿಲ್ಲ. ಹಣದಿಂದ ಅದನ್ನು ಹೈಜಾಕ್ ಮಾಡಲು ಸಾಧ್ಯವಿಲ್ಲ. ಕೇವಲ ಹಣವಷ್ಟೇ ಅಲ್ಲ ಬೇರೆ ಇನ್ನೂ ಏನೋ ನೀಡಲಾಗಿತ್ತು ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಕೆಲವೊಂದು ಅಂಶಗಳು ಬಹಿರಂಗವಾದಾಗ ದೊಡ್ಡದು ಮಾಹಿತಿ ಬಯಲಾಗುತ್ತದೆ.

ಶಿವಸೇನೆಯಾಗಿ ನಾವು 100 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. ಮಧ್ಯಂತರ ಚುನಾವಣೆ ನಡೆಸೋಣ ಆಗ ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಲ್ಲವೂ ಸ್ಪಷ್ಟವಾಗಲಿದೆ ಎಂದು ಉದ್ಧವ್ ಠಾಕ್ರೆ ಹೇಳಿದ್ದರು ಎಂದು ರಾವುತ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com