ಹಿಂದೂ, ಇಸ್ಲಾಂ ಧರ್ಮ ಎರಡನ್ನೂ ಮಮತಾ ಬ್ಯಾನರ್ಜಿ ಭ್ರಷ್ಟಗೊಳಿಸಿದ್ದಾರೆ: ಬಿಜೆಪಿ ಸಂಸದ ಆರೋಪ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹಿಂದೂ ಮತ್ತು ಇಸ್ಲಾಂ ಧರ್ಮ ಎರಡನ್ನೂ ಭ್ರಷ್ಟಗೊಳಿಸಿದ್ದಾರೆ ಎಂದು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಮತ್ತು ಸಂಸದ ದಿಲೀಪ್ ಘೋಷ್ ಆರೋಪಿಸಿದ್ದಾರೆ.
ದಿಲೀಪ್ ಘೋಷ್
ದಿಲೀಪ್ ಘೋಷ್

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹಿಂದೂ ಮತ್ತು ಇಸ್ಲಾಂ ಧರ್ಮ ಎರಡನ್ನೂ ಭ್ರಷ್ಟಗೊಳಿಸಿದ್ದಾರೆ ಎಂದು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಮತ್ತು ಸಂಸದ ದಿಲೀಪ್ ಘೋಷ್ ಆರೋಪಿಸಿದ್ದಾರೆ.

ನಮಾಜ್ ಸಲ್ಲಿಸುವ ಮತ್ತು ಇಫ್ತಾರ್ ಕೂಟಗಳಿಗೆ ಹೋದ ಉದಾಹರಣೆಗಳನ್ನು ಉಲ್ಲೇಖಿಸಿ ಮಾತನಾಡಿದ ಅವರು ಹಿಂದೂ ಕುಟುಂಬದಿಂದ ಬಂದಿದ್ದರೂ ನಮಾಜ್ ಸಲ್ಲಿಸುವುದಕ್ಕೆ ಮತ್ತು ಇಫ್ತಾರ್ ಕೂಟಗಳಿಗೆ ಹೋಗುತ್ತಾರೆ ಎಂದು ಹೇಳಿದ್ದಾರೆ.

ನಮ್ಮಲ್ಲಿ ಇತರ ಧರ್ಮಗಳನ್ನು ಗೌರವಿಸಿ, ನಿಮ್ಮ ಧರ್ಮವನ್ನು ಅನುಸರಿಸಿ ಎಂಬ ಮಾತಿದೆ. ಆದರೆ ಇಲ್ಲಿ ನಾವು ವಿರುದ್ಧವಾಗಿ ನಡೆಯುವುದನ್ನು ಕಾಣಬಹುದು. ನಮ್ಮ ಮುಖ್ಯಮಂತ್ರಿ ಹಿಂದೂ ಬ್ರಾಹ್ಮಣ ಕುಟುಂಬದಿಂದ ಬಂದವರು, ಆದರೆ ಅವರು ನಮಾಜ್ ಮಾಡುತ್ತಾರೆ ಮತ್ತು ರೋಜಾ (ಉಪವಾಸ) ಆಚರಿಸುತ್ತಾರೆ. ಕೆಲವೊಮ್ಮೆ ಅವರು ಹೊಟ್ಟೆ ತುಂಬ ತಿಂದ ನಂತರ ಇಫ್ತಾರ್ ಕೂಟಗಳಿಗೆ ಹೋಗುತ್ತಾರೆ. ಆಕೆ ಈ ರೀತಿ ಇಸ್ಲಾಂ ಮತ್ತು ಹಿಂದೂ ಧರ್ಮ ಎರಡನ್ನೂ ಭ್ರಷ್ಟಗೊಳಿಸುತ್ತಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com