ಪಂಜಾಬ್: ರೂಪ್ ನಗರ್ ಬಳಿ ರೈಲಿಗೆ ಸಿಲುಕಿ 3 ಮಕ್ಕಳು ಸಾವು

ಪ್ಯಾಸೆಂಜರ್ ರೈಲಿಗೆ ಸಿಲುಕಿ 3 ಮಕ್ಕಳು ಸಾವನ್ನಪ್ಪಿರುವ ಘಟನೆ ಪಂಜಾಬ್ ನ ಶ್ರೀ ಕಿರತ್ಪುರ್ ಸಾಹಿಬ್ ಬಳಿ ನಡೆದಿದೆ.
ಪಂಜಾಬ್ ನಲ್ಲಿ ಮಕ್ಕಳು ರೈಲಿಗೆ ಸಿಲುಕಿದ ಪ್ರದೇಶ
ಪಂಜಾಬ್ ನಲ್ಲಿ ಮಕ್ಕಳು ರೈಲಿಗೆ ಸಿಲುಕಿದ ಪ್ರದೇಶ
Updated on

ಚಂಡೀಗಢ: ಪ್ಯಾಸೆಂಜರ್ ರೈಲಿಗೆ ಸಿಲುಕಿ 3 ಮಕ್ಕಳು ಸಾವನ್ನಪ್ಪಿರುವ ಘಟನೆ ಪಂಜಾಬ್ ನ ಶ್ರೀ ಕಿರತ್ಪುರ್ ಸಾಹಿಬ್ ಬಳಿ ನಡೆದಿದೆ.
 
ವಲಸೆ ಕಾರ್ಮಿಕರ ನಾಲ್ವರು ಮಕ್ಕಳು, ಸಟ್ಲಜ್ ನದಿಯ  ರೈಲ್ವೆ ಟ್ರ್ಯಾಕ್ ಬಳಿ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ.
 

ಮೂರು ಮಕ್ಕಳು ಸಾವನ್ನಪ್ಪಿದ್ದರೆ, ನಾಲ್ಕನೆಯ ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
 
ಸಂತ್ರಸ್ತ ಮಕ್ಕಳು 7-11 ವಯಸ್ಸಿನವರಾಗಿದ್ದರು ಎಂದು ತಿಳಿದುಬಂದಿದೆ. ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೋರ್ವ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ. 4 ನೇ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬೆರ್ರಿ ಹಣ್ಣುಗಳನ್ನು ತಿನ್ನುವುದಕ್ಕಾಗಿ ಮಕ್ಕಳು ಇಲ್ಲಿಗೆ ಬಂದಿದ್ದರು. ಆದರೆ ರೈಲು ತಮ್ಮತ್ತ  ಬರುತ್ತಿರುವುದು ಅವರಿಗೆ ಅರಿವಾಗಲಿಲ್ಲ ಎಂದು ಎಎಸ್ಐ ಜಿಆರ್ ಪಿ ಜಗ್ಜೀತ್ ಸಿಂಗ್ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com