ಉತ್ತರಾಖಂಡ ಹಿಮಕುಸಿತ ದುರಂತ: ಮತ್ತೆ ಮೂವರ ಮೃತದೇಹ ಪತ್ತೆ, ಸಾವಿನ ಸಂಖ್ಯೆ 19ಕ್ಕೆ ಏರಿಕೆ

ಹಿಮಕುಸಿತ ಸಂಭವಿಸಿದ ಸ್ಥಳದಿಂದ ಇನ್ನೂ ಮೂರು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಸಾವಿನ ಸಂಖ್ಯೆ 19 ಕ್ಕೆ ಏರಿದೆ ಎಂದು ನೆಹರು ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ ಶುಕ್ರವಾರ ತಿಳಿಸಿದೆ.
ಹಿಮಕುಸಿತ ಸಂಭವಿಸಿದ ದ್ರೌಪದಿ ಕಾ ದಂಡ II ಶಿಖರ
ಹಿಮಕುಸಿತ ಸಂಭವಿಸಿದ ದ್ರೌಪದಿ ಕಾ ದಂಡ II ಶಿಖರ
Updated on

ಉತ್ತರಕಾಶಿ: ಇಲ್ಲಿ ಹಿಮಕುಸಿತ ಸಂಭವಿಸಿದ ಸ್ಥಳದಿಂದ ಇನ್ನೂ ಮೂರು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಸಾವಿನ ಸಂಖ್ಯೆ 19 ಕ್ಕೆ ಏರಿದೆ ಎಂದು ನೆಹರು ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ ಶುಕ್ರವಾರ ತಿಳಿಸಿದೆ.

ಶೋಧ ಕಾರ್ಯಾಚರಣೆಗೆ ಸಹಾಯ ಮಾಡಲು ಭಾರತೀಯ ವಾಯುಪಡೆಯ (ಐಎಎಫ್) ಎರಡು ಹೆಲಿಕಾಪ್ಟರ್‌ಗಳು ಉತ್ತರಾಖಂಡದ ಹರ್ಸಿಲ್‌ನಿಂದ ಹೊರಟಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ನೆಹರು ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ (ಎನ್‌ಐಎಂ) ತಂಡವು ದ್ರೌಪದಿ ಕಾ ದಂಡ II ಶಿಖರವನ್ನು ಏರಿ ಹಿಂದಿರುಗುತ್ತಿದ್ದಾಗ 17,000 ಅಡಿ ಎತ್ತರದಲ್ಲಿ ಹಿಮಕುಸಿತ ಸಂಭವಿಸಿದೆ.

ಗುರುವಾರ ಸಂಜೆ ಹಿಮಪಾತದ ಸ್ಥಳದಿಂದ ಇನ್ನೂ ಮೂರು ದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದುವರೆಗೆ ಒಟ್ಟು 19 ಜನರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳಲ್ಲಿ 17 ಜನರು ತರಬೇತಿ ಪಡೆಯುತ್ತಿದ್ದ ಪರ್ವತಾರೋಹಿಗಳಾಗಿದ್ದರೆ, ಇಬ್ಬರು ಅವರ ಮಾರ್ಗದರ್ಶಕರು ಎಂದು ಎನ್ಐಎಂ ತಿಳಿಸಿದೆ.

ಎನ್‌ಐಎಂ ಪ್ರಕಾರ, ಇನ್ನೂ 10 ತರಬೇತಿ ನಿರತರೂ ಕಾಣೆಯಾಗಿದ್ದಾರೆ.

ಸೇನೆ, ಐಎಎಫ್, ಎನ್‌ಐಎಂ, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್, ಹೈ ಆಲ್ಟಿಟ್ಯೂಡ್ ವಾರ್‌ಫೇರ್ ಸ್ಕೂಲ್ (ಜಮ್ಮು ಮತ್ತು ಕಾಶ್ಮೀರ) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ಜಿಲ್ಲಾಡಳಿತದೊಂದಿಗೆ ಮಂಗಳವಾರ ಹಿಮಪಾತ ಸಂಭವಿಸಿದ ಕೆಲವೇ ಗಂಟೆಗಳ ನಂತರ ಶೋಧ ಕಾರ್ಯಾಚರಣೆ ನಡೆಸುತ್ತಿದೆ.

ಹಿಮಕುಸಿತದ ನಂತರ ನಾಪತ್ತೆಯಾದ ಪರ್ವತಾರೋಹಿಗಳು ಸುಧಾರಿತ ತರಬೇತಿ ಕೋರ್ಸ್‌ಗಾಗಿ ಎನ್ಐಎಂನಿಂದ ಆಯ್ಕೆಯಾದ ತಂಡದ ಭಾಗವಾಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com