ಪ್ರಭಾಸ್
ಪ್ರಭಾಸ್

ನವದೆಹಲಿ: ಈ ಬಾರಿ ಸೂಪರ್ ಸ್ಟಾರ್ ಪ್ರಭಾಸ್ ರಿಂದ ರಾವಣ ಪ್ರತಿಕೃತಿ ದಹನ

ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಈ ಬಾರಿಯ ಪ್ರಸಿದ್ಧ ಲವ ಕುಶ ರಾಮಲೀಲಾದಲ್ಲಿ ರಾವಣನ ಪ್ರತಿಕೃತಿಯನ್ನು ದಕ್ಷಿಣದ ಸೂಪರ್ ಸ್ಟಾರ್ ಪ್ರಭಾಸ್ ದಹಿಸಲಿದ್ದಾರೆ
Published on

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಈ ಬಾರಿಯ ಪ್ರಸಿದ್ಧ ಲವ ಕುಶ ರಾಮಲೀಲಾದಲ್ಲಿ ರಾವಣನ ಪ್ರತಿಕೃತಿಯನ್ನು ದಕ್ಷಿಣದ ಸೂಪರ್ ಸ್ಟಾರ್ ಪ್ರಭಾಸ್ ದಹಿಸಲಿದ್ದಾರೆ. ಪ್ರತಿ ವರ್ಷದಂತೆ  ಲವ ಕುಶ ರಾಮಲೀಲಾ ಸಮಿತಿಯು ಸೆಪ್ಟೆಂಬರ್ 26 ರಿಂದ ದೆಹಲಿಯಲ್ಲಿ ದಸರಾ ಹಬ್ಬದ ಸಂಭ್ರಮದಲ್ಲಿ ರಾವಣ ಪ್ರತಿಕೃತಿ ದಹನವನ್ನು ಆಯೋಜಿಸಲಿದೆ.  

ಈ ವರ್ಷ ಕೆಂಪು ಕೋಟೆಯ ಹುಲ್ಲುಹಾಸುಗಳಲ್ಲಿ  ಅಯೋಧ್ಯೆಯ ರಾಮಮಂದಿರ-ವಿಷಯದ ಮೇಲೆ ವೇದಿಕೆ ಮಾಡಲು ಸಮಿತಿ ಹೊರಟಿದೆ. ಅಕ್ಟೋಬರ್ 5 ರಂದು ಬರುವ ವಿಜಯದಶಮಿಯಂದು ಪ್ರಭಾಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 

ಈ ಕುರಿತು ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಲವ ಕುಶ ರಾಮಲೀಲಾ ಸಮಿತಿಯ ಮುಖ್ಯಸ್ಥ ಅರ್ಜುನ್ ಕುಮಾರ್, ಈ ವರ್ಷದ ಯೋಜನೆಗಳ ಬಗ್ಗೆ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ. ಪ್ರಭಾಸ್ ಈಗಾಗಲೇ ಮುಂಬರುವ ಆದಿಪುರುಷ ಚಿತ್ರದಲ್ಲಿ ಭಗವಾನ್ ರಾಮನ ಪಾತ್ರವನ್ನು ನಿರ್ವಹಿಸುತ್ತಿರುವುದರಿಂದ ಈ ಬಾರಿಯ ದಸರಾದಲ್ಲಿ ರಾವಣನ ಪ್ರತಿಕೃತಿ ದಹಿಸಲು ಅವರೇ ಉತ್ತಮರು ಎಂದರು. 

ಯಾವಾಗಲೂ ರಾವಣ, ಕುಂಭಕರ್ಣ ಮತ್ತು ಮೇಘನಾದ್ ಅವರ ಮೂರು ಪ್ರತಿಕೃತಿಗಳನ್ನು ಇಡಲಾಗುತ್ತದೆ.  ಪ್ರಭಾಸ್ ಪ್ರತಿಯೊಂದಕ್ಕೂ ತನ್ನ ಬಾಣದಿಂದ ಸುಡಲಿದ್ದಾರೆ. ಈ ವರ್ಷ ಪ್ರತಿಕೃತಿಗಳು 100 ಅಡಿ ಎತ್ತರದಲ್ಲಿರುತ್ತವೆ ಎಂದು ಅವರು ತಿಳಿಸಿದರು. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com