ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಈ ಬಾರಿಯ ಪ್ರಸಿದ್ಧ ಲವ ಕುಶ ರಾಮಲೀಲಾದಲ್ಲಿ ರಾವಣನ ಪ್ರತಿಕೃತಿಯನ್ನು ದಕ್ಷಿಣದ ಸೂಪರ್ ಸ್ಟಾರ್ ಪ್ರಭಾಸ್ ದಹಿಸಲಿದ್ದಾರೆ. ಪ್ರತಿ ವರ್ಷದಂತೆ ಲವ ಕುಶ ರಾಮಲೀಲಾ ಸಮಿತಿಯು ಸೆಪ್ಟೆಂಬರ್ 26 ರಿಂದ ದೆಹಲಿಯಲ್ಲಿ ದಸರಾ ಹಬ್ಬದ ಸಂಭ್ರಮದಲ್ಲಿ ರಾವಣ ಪ್ರತಿಕೃತಿ ದಹನವನ್ನು ಆಯೋಜಿಸಲಿದೆ.
ಈ ವರ್ಷ ಕೆಂಪು ಕೋಟೆಯ ಹುಲ್ಲುಹಾಸುಗಳಲ್ಲಿ ಅಯೋಧ್ಯೆಯ ರಾಮಮಂದಿರ-ವಿಷಯದ ಮೇಲೆ ವೇದಿಕೆ ಮಾಡಲು ಸಮಿತಿ ಹೊರಟಿದೆ. ಅಕ್ಟೋಬರ್ 5 ರಂದು ಬರುವ ವಿಜಯದಶಮಿಯಂದು ಪ್ರಭಾಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಕುರಿತು ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಲವ ಕುಶ ರಾಮಲೀಲಾ ಸಮಿತಿಯ ಮುಖ್ಯಸ್ಥ ಅರ್ಜುನ್ ಕುಮಾರ್, ಈ ವರ್ಷದ ಯೋಜನೆಗಳ ಬಗ್ಗೆ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ. ಪ್ರಭಾಸ್ ಈಗಾಗಲೇ ಮುಂಬರುವ ಆದಿಪುರುಷ ಚಿತ್ರದಲ್ಲಿ ಭಗವಾನ್ ರಾಮನ ಪಾತ್ರವನ್ನು ನಿರ್ವಹಿಸುತ್ತಿರುವುದರಿಂದ ಈ ಬಾರಿಯ ದಸರಾದಲ್ಲಿ ರಾವಣನ ಪ್ರತಿಕೃತಿ ದಹಿಸಲು ಅವರೇ ಉತ್ತಮರು ಎಂದರು.
ಯಾವಾಗಲೂ ರಾವಣ, ಕುಂಭಕರ್ಣ ಮತ್ತು ಮೇಘನಾದ್ ಅವರ ಮೂರು ಪ್ರತಿಕೃತಿಗಳನ್ನು ಇಡಲಾಗುತ್ತದೆ. ಪ್ರಭಾಸ್ ಪ್ರತಿಯೊಂದಕ್ಕೂ ತನ್ನ ಬಾಣದಿಂದ ಸುಡಲಿದ್ದಾರೆ. ಈ ವರ್ಷ ಪ್ರತಿಕೃತಿಗಳು 100 ಅಡಿ ಎತ್ತರದಲ್ಲಿರುತ್ತವೆ ಎಂದು ಅವರು ತಿಳಿಸಿದರು.
Advertisement