ನವದೆಹಲಿ: ಈ ಬಾರಿ ಸೂಪರ್ ಸ್ಟಾರ್ ಪ್ರಭಾಸ್ ರಿಂದ ರಾವಣ ಪ್ರತಿಕೃತಿ ದಹನ

ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಈ ಬಾರಿಯ ಪ್ರಸಿದ್ಧ ಲವ ಕುಶ ರಾಮಲೀಲಾದಲ್ಲಿ ರಾವಣನ ಪ್ರತಿಕೃತಿಯನ್ನು ದಕ್ಷಿಣದ ಸೂಪರ್ ಸ್ಟಾರ್ ಪ್ರಭಾಸ್ ದಹಿಸಲಿದ್ದಾರೆ
ಪ್ರಭಾಸ್
ಪ್ರಭಾಸ್

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಈ ಬಾರಿಯ ಪ್ರಸಿದ್ಧ ಲವ ಕುಶ ರಾಮಲೀಲಾದಲ್ಲಿ ರಾವಣನ ಪ್ರತಿಕೃತಿಯನ್ನು ದಕ್ಷಿಣದ ಸೂಪರ್ ಸ್ಟಾರ್ ಪ್ರಭಾಸ್ ದಹಿಸಲಿದ್ದಾರೆ. ಪ್ರತಿ ವರ್ಷದಂತೆ  ಲವ ಕುಶ ರಾಮಲೀಲಾ ಸಮಿತಿಯು ಸೆಪ್ಟೆಂಬರ್ 26 ರಿಂದ ದೆಹಲಿಯಲ್ಲಿ ದಸರಾ ಹಬ್ಬದ ಸಂಭ್ರಮದಲ್ಲಿ ರಾವಣ ಪ್ರತಿಕೃತಿ ದಹನವನ್ನು ಆಯೋಜಿಸಲಿದೆ.  

ಈ ವರ್ಷ ಕೆಂಪು ಕೋಟೆಯ ಹುಲ್ಲುಹಾಸುಗಳಲ್ಲಿ  ಅಯೋಧ್ಯೆಯ ರಾಮಮಂದಿರ-ವಿಷಯದ ಮೇಲೆ ವೇದಿಕೆ ಮಾಡಲು ಸಮಿತಿ ಹೊರಟಿದೆ. ಅಕ್ಟೋಬರ್ 5 ರಂದು ಬರುವ ವಿಜಯದಶಮಿಯಂದು ಪ್ರಭಾಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 

ಈ ಕುರಿತು ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಲವ ಕುಶ ರಾಮಲೀಲಾ ಸಮಿತಿಯ ಮುಖ್ಯಸ್ಥ ಅರ್ಜುನ್ ಕುಮಾರ್, ಈ ವರ್ಷದ ಯೋಜನೆಗಳ ಬಗ್ಗೆ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ. ಪ್ರಭಾಸ್ ಈಗಾಗಲೇ ಮುಂಬರುವ ಆದಿಪುರುಷ ಚಿತ್ರದಲ್ಲಿ ಭಗವಾನ್ ರಾಮನ ಪಾತ್ರವನ್ನು ನಿರ್ವಹಿಸುತ್ತಿರುವುದರಿಂದ ಈ ಬಾರಿಯ ದಸರಾದಲ್ಲಿ ರಾವಣನ ಪ್ರತಿಕೃತಿ ದಹಿಸಲು ಅವರೇ ಉತ್ತಮರು ಎಂದರು. 

ಯಾವಾಗಲೂ ರಾವಣ, ಕುಂಭಕರ್ಣ ಮತ್ತು ಮೇಘನಾದ್ ಅವರ ಮೂರು ಪ್ರತಿಕೃತಿಗಳನ್ನು ಇಡಲಾಗುತ್ತದೆ.  ಪ್ರಭಾಸ್ ಪ್ರತಿಯೊಂದಕ್ಕೂ ತನ್ನ ಬಾಣದಿಂದ ಸುಡಲಿದ್ದಾರೆ. ಈ ವರ್ಷ ಪ್ರತಿಕೃತಿಗಳು 100 ಅಡಿ ಎತ್ತರದಲ್ಲಿರುತ್ತವೆ ಎಂದು ಅವರು ತಿಳಿಸಿದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com