ನೂಪುರ್ ಶರ್ಮಾ ಶಿರಚ್ಛೇದಕ್ಕೆ ಕರೆ ನೀಡಿದ್ದ ಅಜ್ಮೀರ್ ದರ್ಗಾ ಮೌಲ್ವಿ ಬಂಧನ

ಬಿಜೆಪಿಯ ಅಮಾನತುಗೊಂಡಿರುವ ವಕ್ತಾರೆ ನೂಪುರ್ ಶರ್ಮಾ ಶಿರಚ್ಛೇದ ಮಾಡಿದವರಿಗೆ ತಮ್ಮ ಮನೆಯನ್ನು ನೀಡುವುದಾಗಿ ಕ್ಯಾಮರಾ ಮುಂದೆ ಹೇಳಿದ್ದ ಅಜ್ಮೀರ್ ದರ್ಗಾ ಮೌಲ್ವಿಯನ್ನು ಬಂಧಿಸಲಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಅಜ್ಮೀರ್: ಬಿಜೆಪಿಯ ಅಮಾನತುಗೊಂಡಿರುವ ವಕ್ತಾರೆ ನೂಪುರ್ ಶರ್ಮಾ ಶಿರಚ್ಛೇದ ಮಾಡಿದವರಿಗೆ ತಮ್ಮ ಮನೆಯನ್ನು ನೀಡುವುದಾಗಿ ಕ್ಯಾಮರಾ ಮುಂದೆ ಹೇಳಿದ್ದ ಅಜ್ಮೀರ್ ದರ್ಗಾ ಮೌಲ್ವಿಯನ್ನು ಬಂಧಿಸಲಾಗಿದೆ. 

ಪೊಲೀಸರು ಮಾಹಿತಿ ನೀಡಿರುವ ಪ್ರಕಾರ ಖಾದೀಮ್ ಸಲ್ಮಾನ್ ಎಂಬ ಮೌಲ್ವಿ ಉದಯ್ ಪುರದಲ್ಲಿ ಕನ್ಹಯ್ಯ ಲಾಲ್ ಹತ್ಯೆ ಪ್ರಕರಣಕ್ಕೂ ಮುನ್ನ ಈ ವಿಡಿಯೋ ಮಾಡಿದ್ದಾನೆ. 

ಆತನ ವಿರುದ್ಧ ಈ ಹಿಂದೆಯೂ ಪ್ರಕರಣ ದಾಖಲಾಗಿದ್ದ ಇತಿಹಾಸವಿದ್ದು, ಈ ಬಾರಿ ಆತ ಅಮಲೇರಿದ ಸ್ಥಿತಿಯಲ್ಲಿ ವಿಡಿಯೋ ಮಾಡಿದ್ದಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಜ್ಮೀರ್ ಪೊಲೀಸರು ಆತನ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. 

ತಾನು ಜೂ.28ಕ್ಕಿಂತಲೂ ಮೊದಲೇ ಈ ವಿಡಿಯೋ ಮಾಡಿದ್ದು ಆ ಬಳಿಕ ಅದನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿರುವುದಾಗಿ ಪೊಲೀಸರಿಗೆ ಆತ ಮಾಹಿತಿ ನೀಡಿದ್ದಾನೆ. ಮೇಲ್ನೋಟಕ್ಕೆ ಆತ ಅಮಲೇರಿದ ಪರಿಸ್ಥಿತಿಯಲ್ಲಿ ಈ ವಿಡಿಯೋ ಮಾಡಿದ್ದು, ಹೆಚ್ಚಿನ ವಿಚಾರಣೆ ಮಾಡಲಾಗುತ್ತಿದೆ.

ಇದನ್ನೂ ಓದಿ: ನೂಪುರ್ ಶರ್ಮಾಗೆ ಛೀಮಾರಿ: ಲಕ್ಷ್ಮಣ ರೇಖೆ ದಾಟಿದ ಸುಪ್ರೀಂ ಕೋರ್ಟ್- ನಿವೃತ್ತ ಜಡ್ಜ್​ಗಳ ವಿರೋಧ
 
ವಿಡಿಯೋದಲ್ಲಿ ನೂಪುರ್ ಶರ್ಮಾ ಬಗ್ಗೆ ಮಾತನಾಡಿರುವ ಮೌಲ್ವಿ, ನೂಪುರ್ ಶರ್ಮಾ ಅವರ ಶಿರಚ್ಛೇದ ಮಾಡಿ ತಲೆ ತಂದು ತಮಗೆ ಕೊಟ್ಟವರಿಗೆ ತಮ್ಮ ಮನೆಯನ್ನು ನೀಡುತ್ತೇನೆ, ಪ್ರವಾದಿಯನ್ನು ಅವಮಾನ ಮಾಡಿದ್ದಕ್ಕಾಗಿ ಆಕೆಯ ತಲೆಯನ್ನು ಶೂಟ್ ಮಾಡುವುದಾಗಿ ಮೌಲ್ವಿ ಹೇಳಿದ್ದಾನೆ.
 
ನೀವು ಎಲ್ಲಾ ಮುಸ್ಲಿಮ್ ರಾಷ್ಟ್ರಗಳಿಗೂ ಪ್ರತಿಕ್ರಿಯೆ ನೀಡಬೇಕು, ನಾನು ಇದನ್ನು ರಾಜಸ್ಥಾನದ ಅಜ್ಮೀರ್ ನಿಂದ ಹೇಳುತ್ತಿದ್ದೇನೆ ಹಾಗೂ ಈ ಸಂದೇಶ ಹುಜೂರ್ ಕ್ವಾಜ ಬಾಬಾ ಕಾ ದರ್ಬಾರ್ ನಿಂದ ಬರುತ್ತಿದೆ ಎಂದು ಹೇಳಿದ್ದಾನೆ. ಈ ಸ್ಥಳ ಸೂಫಿಗಳಿಗೆ ಸಂಬಂಧಿಸಿದ ಧಾರ್ಮಿಕ ಸ್ಥಳವಾಗಿದ್ದು, ಹಿಂದೂ ಭಕ್ತರೂ ಇಲ್ಲಿಗೆ ಆಗಮಿಸುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com