ಗೆಹ್ಲೋಟ್, ಪೈಲಟ್ ಒಬ್ಬ ಗದ್ದರ್ ಎಂದಿದ್ದು 'ಅನಿರೀಕ್ಷಿತ', ಬಿಕ್ಕಟ್ಟು ಪರಿಹರಿಸಲಾಗುವುದು: ಕಾಂಗ್ರೆಸ್
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರನ್ನು "ಗದ್ದರ್" (ನಂಬಿಕೆ ದ್ರೋಹಿ) ಎಂದು ಕರೆದಿರುವುದು "ಅನಿರೀಕ್ಷಿತ" ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಶುಕ್ರವಾರ ಹೇಳಿದ್ದಾರೆ.
Published: 25th November 2022 08:33 PM | Last Updated: 19th December 2022 11:27 AM | A+A A-

ಅಶೋಕ್ ಗೆಹ್ಲೋಟ್-ಸಚಿನ್ ಪೈಲಟ್
ಸನವದ್: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರನ್ನು "ಗದ್ದರ್"(ನಂಬಿಕೆ ದ್ರೋಹಿ) ಎಂದು ಕರೆದಿರುವುದು "ಅನಿರೀಕ್ಷಿತ" ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಅವರು ಶುಕ್ರವಾರ ಹೇಳಿದ್ದಾರೆ.
ಪಕ್ಷಕ್ಕೆ ಪರಸ್ಪರ ವಾಕ್ಸರ ನಡೆಸುತ್ತಿರುವ ಈ ಇಬ್ಬರು ನಾಯಕರ ಅಗತ್ಯವಿದೆ ಮತ್ತು ರಾಜಸ್ಥಾನ ಘಟಕದಲ್ಲಿನ ಬಿಕ್ಕಟ್ಟನ್ನು ಸಂಘಟನೆಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪರಿಹರಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ: ಸಚಿನ್ ಪೈಲಟ್ ಒಬ್ಬ ಗದ್ದರ್, ಸಿಎಂ ಆಗಲು ಸಾಧ್ಯವಿಲ್ಲ: ಅಶೋಕ್ ಗೆಹ್ಲೋಟ್
ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಲ್ಲಿ ಮಾತನಾಡಿದ ಕಾಂಗ್ರೆಸ್ ಮಾಧ್ಯಮ ಮುಖ್ಯಸ್ಥ ಜೈರಾಮ್ ರಮೇಶ್, ಅಶೋಕ್ ಗೆಹ್ಲೋಟ್ ಅವರು ಪಕ್ಷದ ಹಿರಿಯ, ಅನುಭವಿ ನಾಯಕರು. ಟಿವಿ ಸಂದರ್ಶನದಲ್ಲಿ ಅವರು ಸಚಿನ್ ವಿರುದ್ಧ ಈ ರೀತಿ ಪದ ಬಳಸಿರುವುದು ಅನಿರೀಕ್ಷಿತ ಮತ್ತು ನನಗೂ ಅಚ್ಚರಿ ತಂದಿದೆ ಎಂದಿದ್ದಾರೆ.
ಅಶೋಕ್ ಗೆಹ್ಲೋಟ್ ಅವರು ಗುರುವಾರ ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ, ಸಚಿನ್ ಪೈಲಟ್ ಒಬ್ಬ "ಗದ್ದರ್" ಮತ್ತು ಅವರು ರಾಜಸ್ಥಾನ ಸಿಎಂ ಆಗಲು ಸಾಧ್ಯವಿಲ್ಲ ಎಂದು ಹೇಳಿದ್ದರು.