ಮಥುರಾ ದೇವಾಲಯದ ಒಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಅರ್ಚಕನ ಶವ ಪತ್ತೆ!

ಮಥುರಾ ದೇವಾಲಯದ ಒಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಅರ್ಚಕರೊಬ್ಬರ ಶವ ಪತ್ತೆಯಾಗಿದೆ. 
ಆತ್ಮಹತ್ಯೆ
ಆತ್ಮಹತ್ಯೆ

ಮಥುರಾ: ಮಥುರಾ ದೇವಾಲಯದ ಒಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಅರ್ಚಕರೊಬ್ಬರ ಶವ ಪತ್ತೆಯಾಗಿದೆ. 

ಮೃತರನ್ನು ಚರಣ್ ದಾಸ್ ಎಂದು ಗುರುತಿಸಲಾಗಿದ್ದು, ಇಲ್ಲಿನ ಶಿವಮಂದಿರದ ಅರ್ಚಕರಾಗಿ ಇವರು ಸೇವೆ ಸಲ್ಲಿಸುತ್ತಿದ್ದರು. 

ದೇವಾಲಯದ ಮೇಲ್ಛಾವಣಿಯ ಕೊಕ್ಕೆಗೆ ಅರ್ಚಕರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಸೌನ್ಕ್ ಪೊಲೀಸ್ ಔಟ್ ಪೋಸ್ಟ್ ನ ಉಸ್ತುವಾರು ಸಂದೀಪ್ ಕುಮಾರ್ ಹೇಳಿದ್ದಾರೆ. 

ಸ್ಥಳೀಯರು ಅರ್ಚಕರ ಶವ ಕಂಡು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಪ್ರಕರಣ ಎಂಬಂತೆ ತೋರುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com