ಸಂಸತ್ತಿನಿಂದ ವಿಜಯ್ ಚೌಕವರೆಗೂ ವಿಪಕ್ಷ ಸಂಸದರಿಂದ ‘ತಿರಂಗಾ ನಡಿಗೆ'- ವಿಡಿಯೋ

ಬಜೆಟ್ ಅಧಿವೇಶನದ ಕೊನೆಯ ದಿನವಾದ ಇಂದು ಪ್ರತಿಪಕ್ಷಗಳ ಸದಸ್ಯರು ಸಂಸತ್ತಿನಿಂದ ವಿಜಯ್ ಚೌಕದವರೆಗೂ ತಿರಂಗಾ ಹಿಡಿದು ಪ್ರತಿಭಟನೆ ನಡೆಸಿದರು.
ತಿರಂಗಾ ನಡಿಗೆಯಲ್ಲಿ ವಿಪಕ್ಷ ಸಂಸದರು
ತಿರಂಗಾ ನಡಿಗೆಯಲ್ಲಿ ವಿಪಕ್ಷ ಸಂಸದರು

ನವದೆಹಲಿ: ಬಜೆಟ್ ಅಧಿವೇಶನದ ಕೊನೆಯ ದಿನವಾದ ಇಂದು ಪ್ರತಿಪಕ್ಷಗಳ ಸದಸ್ಯರು ಸಂಸತ್ತಿನಿಂದ ವಿಜಯ್ ಚೌಕದವರೆಗೂ ತಿರಂಗಾ ಹಿಡಿದು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಕಾಂಗ್ರೆಸ್ ಮುಖಂಡ ಕೆ.ಸಿ. ವೇಣುಗೋಪಾಲ್, ಸರ್ಕಾರ ಸಂಸತ್ ಕಲಾಪ ನಡೆಯಲು ಬಿಡುತ್ತಿಲ್ಲ. ಅದಾನಿ ಹಗರಣ ಕುರಿತು ಚರ್ಚೆ ಅವರು ಏಕೆ ಅವಕಾಶ ಮಾಡಿಕೊಡುತ್ತಿಲ್ಲ ಎಂದು ಪ್ರಶ್ನಿಸಿದರು. ಬಜೆಟ್ ಅಧಿವೇಶನ ಆರಂಭವಾದಾಗಿನಿಂದಲೂ ಸಂಸತ್ತಿನ ಉಭಯ ಸದನಗಳ ಕಲಾಪ ಪದೇ ಪದೇ ಮುಂದೂಡಲ್ಪಟ್ಟಿತ್ತು. 

ಸಂಸತ್ತಿನಿಂದ ಆರಂಭವಾದ ತಿರಂಗಾ ನಡಿಗೆ ವಿಜಯ್ ಚೌಕದ ಬಳಿ ಅಂತ್ಯಗೊಂಡಿತು. ಈ ನಡಿಗೆ ನಂತರ ಕನ್ಸಿಟ್ಯೂಷನ್ ಕ್ಲಬ್ ನಲ್ಲಿ ವಿಪಕ್ಷಗಳು ಸುದ್ದಿಗೋಷ್ಠಿ ನಡೆಯಲಿದೆ ಎನ್ನಲಾಗಿದೆ. ಈ ಮಧ್ಯೆ, ಲೋಕಸಭಾ ಸ್ಪೀಕರ್ ಇಂದು ಸಂಜೆ ಆಯೋಜಿಸಿರುವ ಚಹಾಕೂಟದಲ್ಲಿ ಕಾಂಗ್ರೆಸ್ ಸೇರಿದಂತೆ ಇತರ ಮೂರು ಪ್ರಮುಖ ರಾಜಕೀಯ ಪಕ್ಷಗಳು ಪಾಲ್ಗೊಳ್ಳಲುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com