ಆಪ್ ಸರ್ಕಾರ-ಲೆಫ್ಟಿನೆಂಟ್ ಗವರ್ನರ್ ತಿಕ್ಕಾಟ; ದೆಹಲಿ ಸರ್ಕಾರದ ವಿದ್ಯುತ್ ಸಬ್ಸಿಡಿ ದಿಢೀರ್ ಸ್ಥಗಿತ

ದೆಹಲಿ ಸರ್ಕಾರದ ವಿದ್ಯುತ್ ಸಬ್ಸಿಡಿ ದಿಢೀರ್ ಸ್ಥಗಿತವಾಗಿದ್ದು, ಆಪ್ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ.
ದೆಹಲಿ ಇಂಧನ ಸಚಿವೆ ಆತಿಶಿ ಸುದ್ದಿಗೋಷ್ಠಿ
ದೆಹಲಿ ಇಂಧನ ಸಚಿವೆ ಆತಿಶಿ ಸುದ್ದಿಗೋಷ್ಠಿ
Updated on

ನವದೆಹಲಿ: ದೆಹಲಿ ಸರ್ಕಾರದ ವಿದ್ಯುತ್ ಸಬ್ಸಿಡಿ ದಿಢೀರ್ ಸ್ಥಗಿತವಾಗಿದ್ದು, ಆಪ್ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ.

ಹೌದು.. ರಾಷ್ಟ್ರ ರಾಜಧಾನಿ ದೆಹಲಿಯ 46 ಲಕ್ಷ ಕುಟುಂಬಗಳಿಗೆ ನೀಡಲಾಗುತ್ತಿದ್ದ ವಿದ್ಯುತ್ ಸಬ್ಸಿಡಿ ಇಂದಿಗೆ ಕೊನೆಗೊಳ್ಳಲಿದೆ. ನಾಳೆಯಿಂದ ವಿದ್ಯುತ್ ಬಿಲ್‌ಗೆ ಸಬ್ಸಿಡಿ ನೀಡುವುದಿಲ್ಲ ಎಂದು ದೆಹಲಿ ವಿದ್ಯುತ್ ಸಚಿವೆ ಅತಿಶಿ ಮರ್ಲೆನಾ ಶುಕ್ರವಾರ ಘೋಷಿಸಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿರುವ ಅತಿಶಿ ಮರ್ಲೆನಾ ಅವರು, ವಿದ್ಯುತ್‌ ಸಬ್ಸಿಡಿ ದಿಢೀರ್‌ ಸ್ಥಗಿತವಾಗುತ್ತಿರುವುದು ಏಕೆ ಎಂಬ ಬಗ್ಗೆ ವಿವರಣೆಯನ್ನೂ ನೀಡಿದ್ದಾರೆ.

‘ವಿದ್ಯುತ್ ಸಬ್ಸಿಡಿಯನ್ನು ನಿಲ್ಲಿಸಲಾಗಿದೆ. ಎಎಪಿ ಸರ್ಕಾರವು ಮುಂಬರುವ ವರ್ಷಕ್ಕೆ ಸಬ್ಸಿಡಿಯನ್ನು ಮುಂದುವರೆಸುವ ನಿರ್ಧಾರವನ್ನು ತೆಗೆದುಕೊಂಡಿತ್ತು. ಆದರೆ, ಆ ನಿರ್ಧಾರಕ್ಕೆ ಸಂಬಂಧಿಸಿದ ಕಡತಕ್ಕೆ ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ಅವರ ಅನುಮೋದನೆ ಬೇಕಾಗಿದೆ. ಆದರೆ ಅದು ಈ ವರೆಗೆ ಸಿಕ್ಕಿಲ್ಲ. ಹೀಗಾಗಿ ಸಬ್ಸಿಡಿ ಬಿಡುಗಡೆ ಮಾಡಲು ಸಾಧ್ಯವಿಲ್ಲ. ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಸಬ್ಸಿಡಿಯನ್ನು ಮುಂಬರುವ ವರ್ಷಕ್ಕೆ ವಿಸ್ತರಿಸಲು ಇನ್ನೂ ಕಡತವನ್ನು ತೆರವುಗೊಳಿಸದ ಕಾರಣ ಶುಕ್ರವಾರದಿಂದ ಸಬ್ಸಿಡಿಗಳನ್ನು ನಿಲ್ಲಿಸಲಾಗುವುದು. ನಾವು 46 ಲಕ್ಷ ಜನರಿಗೆ ನೀಡುತ್ತಿರುವ ಸಬ್ಸಿಡಿ ಇಂದಿನಿಂದ ನಿಲ್ಲುತ್ತದೆ. ಸೋಮವಾರದಿಂದ ಸಬ್ಸಿಡಿ ಇಲ್ಲದೆ ಜನರು ಹಣದುಬ್ಬರದ ಬಿಲ್‌ಗಳನ್ನು ಪಡೆಯುತ್ತಾರೆ ಎಂದು ಹೇಳಿದ್ದಾರೆ.

ಆರೋಪ ನಿರಾಕರಿಸಿದ ಸಕ್ಸೇನಾ ಕಚೇರಿ
ಇನ್ನು ಆಪ್ ಸರ್ಕಾರದ ಆರೋಪಗಳನ್ನು ನಿರಾಕರಿಸಿರುವ ಲೆಫ್ಟಿನೆಂಟ್ ಗವರ್ನರ್ ಸಕ್ಸೇನಾ ಅವರ ಕಚೇರಿ, ಅನಗತ್ಯ ರಾಜಕೀಯದಿಂದ ದೂರವಿರಲು ಸಲಹೆ ನೀಡಿದೆ. ಏಪ್ರಿಲ್ 4 ರವರೆಗೆ ನಿರ್ಧಾರವನ್ನು ಏಕೆ ಬಾಕಿ ಇರಿಸಲಾಯಿತು, ಏಪ್ರಿಲ್ 15 ರ ಗಡುವು ಹೋಯಿತು ಮತ್ತು ಏಪ್ರಿಲ್ 11 ರಂದು ಮಾತ್ರ ಫೈಲ್ ಅನ್ನು ಏಕೆ ಕಳುಹಿಸಲಾಗಿದೆ. ಲೆಫ್ಟಿನೆಂಟ್ ಗವರ್ನರ್ ವಿರುದ್ಧ ಅನಗತ್ಯ ರಾಜಕೀಯ ಮತ್ತು ಆಧಾರರಹಿತ, ಸುಳ್ಳು ಆರೋಪಗಳಿಂದ ದೂರವಿರಲು ಇಂಧನ ಸಚಿವರಿಗೆ ಸೂಚಿಸಲಾಗಿದೆ. ಅವರು ಸುಳ್ಳು ಹೇಳಿಕೆಗಳ ಮೂಲಕ ಜನರನ್ನು ದಾರಿ ತಪ್ಪಿಸಬಾರದು... ಏಪ್ರಿಲ್ 13 ರಂದು ಪತ್ರ ಬರೆದು ಇಂದು ಪತ್ರಿಕಾಗೋಷ್ಠಿ ನಡೆಸುವ ನಾಟಕದ ಅಗತ್ಯವೇನು? ಎಂದು ಪ್ರಶ್ನಿಸಿದೆ.

ದೆಹಲಿಯ ಎಎಪಿ ಸರ್ಕಾರವು ಮಾಸಿಕ ಬಳಕೆಯ 200 ಯೂನಿಟ್‌ ವಿದ್ಯುತ್ ನೀಡುತ್ತಿತ್ತು. 201 ರಿಂದ 400 ಯೂನಿಟ್‌ ವಿದ್ಯುತ್ ಬಳಕೆ ಮಾಡುವವರಿಗೆ 50 ಪ್ರತಿಶತ ಸಬ್ಸಿಡಿಯನ್ನು  850 ರೂ ಕ್ಕೆ ಸೀಮಿತಗೊಳಿಸಲಾಗಿದೆ.

ಕಳೆದ ವರ್ಷ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವಿದ್ಯುತ್ ಸಬ್ಸಿಡಿಗೆ ಅರ್ಜಿ ಸಲ್ಲಿಸುವ ಗ್ರಾಹಕರಿಗೆ ಮಾತ್ರ ನೀಡಲಾಗುವುದು ಎಂದು ಘೋಷಿಸಿದರು. ಅಧಿಕೃತ ಅಂಕಿಅಂಶಗಳ ಪ್ರಕಾರ, 58 ಲಕ್ಷಕ್ಕೂ ಹೆಚ್ಚು ದೇಶೀಯ ಗ್ರಾಹಕರಲ್ಲಿ 48 ಲಕ್ಷಕ್ಕೂ ಹೆಚ್ಚು ಜನರು ವಿದ್ಯುತ್ ಸಬ್ಸಿಡಿಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಎಎಪಿ ಸರ್ಕಾರವು 2023-24ರ ಬಜೆಟ್‌ನಲ್ಲಿ ವಿದ್ಯುತ್ ಸಬ್ಸಿಡಿಗಾಗಿ 3,250 ಕೋಟಿ ರೂಗಳನ್ನು ನಿಗದಿಪಡಿಸಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com