ಅತೀಕ್ ಅಹ್ಮದ್ ವಕೀಲರ ಮನೆ ಮೇಲೆ ಬಾಂಬ್ ದಾಳಿ!

ಇತ್ತೀಚೆಗೆ ಗುಂಡೇಟಿಗೆ ಬಲಿಯಾಗಿದ್ದ ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ ವಕೀಲರ ಮನೆ ಮೇಲೆ ಏ.18 ರಂದು ಬಾಂಬ್ ದಾಳಿ ನಡೆದಿದೆ. 
ಅತೀಕ್ ಅಹ್ಮದ್ ವಕೀಲರ ಮನೆ ಮೇಲೆ ಬಾಂಬ್ ದಾಳಿ!
ಅತೀಕ್ ಅಹ್ಮದ್ ವಕೀಲರ ಮನೆ ಮೇಲೆ ಬಾಂಬ್ ದಾಳಿ!
Updated on

ಪ್ರಯಾಗ್ ರಾಜ್: ಇತ್ತೀಚೆಗೆ ಗುಂಡೇಟಿಗೆ ಬಲಿಯಾಗಿದ್ದ ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ ವಕೀಲರ ಮನೆ ಮೇಲೆ ಏ.18 ರಂದು ಬಾಂಬ್ ದಾಳಿ ನಡೆದಿದೆ. 

ಪ್ರಯಾಗ್ ರಾಜ್ ನಲ್ಲಿ ಈ ಘಟನೆ ವರದಿಯಾಗಿದ್ದು, ಘಟನೆಯಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. 

ಅತೀಕ್ ಅಹ್ಮದ್ ಒಂದು ವೇಳೆ ತನಗೆ ಅನಾಹುತ ಸಂಭವಿಸಿ ಹತ್ಯೆಯಾದಲ್ಲಿ ಪತ್ರವೊಂದನ್ನು ಯುಪಿ ಸಿಎಂ ಹಾಗೂ ಸಿಜೆಐ ಗೆ ತಲುಪಿಸಲು ಸೂಚಿಸಿದ್ದ ಆ ಪತ್ರ ಈಗ ಸಿಎಂ ಹಾಗೂ ಸಿಜೆಐ ಗೆ ತಲುಪಲಿದೆ ಎಂದು ಅತೀಕ್ ಅಹ್ಮದ್ ನ ವಕೀಲರಾದ ವಿಜಯ್ ಮಿಶ್ರಾ ಹೇಳಿದ್ದರು. ಈ ಹೇಳಿಕೆ ನೀಡಿದ ಬೆನ್ನಲ್ಲೇ ಅವರ ನಿವಾಸದ ಮೇಲೆ ಬಾಂಬ್ ದಾಳಿ ನಡೆದಿದೆ.

"ಮುಚ್ಚಿದ ಲಕೋಟೆಯಲ್ಲಿ ಕಳಿಸಲಾಗುತ್ತಿರುವ ಪತ್ರ ನನ್ನ ಬಳಿ ಇಲ್ಲ, ಅದನ್ನು ನಾನು ಕಳಿಸುತ್ತಿಲ್ಲ. ಅತೀಕ್ ಅಹ್ಮದ್ ಬರೆದಿದ್ದ ಪತ್ರವನ್ನು ಬೇರೆಡೆ ಇಡಲಾಗಿದೆ ಹಾಗೂ ಮತ್ತೊಬ್ಬರು ಕಳಿಸುತ್ತಿದ್ದಾರೆ. ಪತ್ರದಲ್ಲಿರುವ ಅಂಶಗಳ ಬಗ್ಗೆ ತನಗೆ ತಿಳಿದಿಲ್ಲ ಎಂದು ವಿಜಯ್ ಮಿಶ್ರಾ ಹೇಳಿದ್ದರು. 

ಅತೀಕ್ ಅಹ್ಮದ್ ಒಂದು ವೇಳೆ ತನಗೆ ಏನಾದರೂ ದುರ್ಘಟನೆ ಸಂಭವಿಸಿ, ಹತ್ಯೆಯಾದರೆ ಈ ಪತ್ರವನ್ನು ಮುಚ್ಚಿದ ಲಕೋಟೆಯಲ್ಲಿ ಯುಪಿ ಸಿಎಂ ಹಾಗೂ ಸಿಜೆಐ ಗೆ ಕಳಿಸಬೇಕೆಂದು ಸೂಚಿಸಿದ್ದರು ಎಂದು ವಕೀಲ ಮಿಶ್ರ ತಿಳಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com