ಆಪರೇಷನ್ ಕಾವೇರಿ: ಸುಡಾನ್ ನಿಂದ ನವದೆಹಲಿಗೆ ಆಗಮಿಸಿದ 365 ಭಾರತೀಯರು

ಆಪರೇಷನ್ ಕಾವೇರಿ ಕಾರ್ಯಾಚರಣೆಯಡಿ ಸಂಘರ್ಷ ಪೀಡಿತ ಸುಡಾನ್ ನಿಂದ 365 ಭಾರತೀಯರು ಶನಿವಾರ ರಾತ್ರಿ ನವದೆಹಲಿಗೆ ಆಗಮಿಸಿದರು.
ಸುಡಾನ್ ನಿಂದ ನವದೆಹಲಿಗೆ ಆಗಮಿಸಿದ ಭಾರತೀಯರು
ಸುಡಾನ್ ನಿಂದ ನವದೆಹಲಿಗೆ ಆಗಮಿಸಿದ ಭಾರತೀಯರು
Updated on

ನವದೆಹಲಿ: ಆಪರೇಷನ್ ಕಾವೇರಿ ಕಾರ್ಯಾಚರಣೆಯಡಿ ಸಂಘರ್ಷ ಪೀಡಿತ ಸುಡಾನ್ ನಿಂದ 365 ಭಾರತೀಯರು ಶನಿವಾರ ರಾತ್ರಿ ನವದೆಹಲಿಗೆ ಆಗಮಿಸಿದರು.

ಆಪರೇಷನ್ ಕಾವೇರಿ ಕಾರ್ಯಾಚರಣೆಯಡಿ ಇನ್ನೂ ಹೆಚ್ಚಿನ ಭಾರತೀಯರು ಭಾರತೀಯರು ಸ್ವದೇಶಕ್ಕೆ ವಾಪಸ್ಸಾಗುತ್ತಿದ್ದಾರೆ. 365 ಮಂದಿ ನವದೆಹಲಿಗೆ ಆಗಮಿಸಿದ್ದಾರೆ ಎಂದು ವಿದೇಶಾಂಗ ಸಚಿವ ಜೈ ಶಂಕರ್ ಶನಿವಾರ ಟ್ವೀಟ್ ಮಾಡಿದ್ದಾರೆ.

ಭಾರತೀಯರನ್ನು ಕರೆತರುವ ಮತ್ತೊಂದು ವಿಮಾನ ಜೆದ್ಹಾದಿಂದ  ನವದೆಹಲಿಗೆ ಹೊರಟಿದೆ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.

ಶನಿವಾರ ಬೆಳಗ್ಗೆ ವಿಮಾನವೊಂದರ ಮೂಲಕ 231 ಭಾರತೀಯ ಪ್ರಯಾಣಿಕರನ್ನು ಸುಡಾನ್ ನಿಂದ ನವದೆಹಲಿಗೆ ಕರೆತರಲಾಗಿತ್ತು. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com