ರಾಜ್ಯಸಭೆಯಲ್ಲೂ ಅರಣ್ಯ ಸಂರಕ್ಷಣೆ (ತಿದ್ದುಪಡಿ) ಮಸೂದೆಗೆ ಅಂಗೀಕಾರ!

ಅರಣ್ಯ ಸಂರಕ್ಷಣಾ ಕಾನೂನುಗಳಿಂದ ದೇಶದ ಗಡಿಯಿಂದ 100 ಕಿ.ಮೀ ವರೆಗಿನ ಭೂಮಿಗೆ ವಿನಾಯಿತಿ ನೀಡುವ ಮತ್ತು ಅರಣ್ಯ ಪ್ರದೇಶಗಳಲ್ಲಿ ಮೃಗಾಲಯ, ಸಫಾರಿ ಮತ್ತು ಪರಿಸರ ಪ್ರವಾಸೋದ್ಯಮ ಸೌಲಭ್ಯಗಳನ್ನು ಸ್ಥಾಪಿಸಲು ಅನುವು ಮಾಡಿಕೊಡುವ ಮಸೂದೆಯನ್ನು ರಾಜ್ಯಸಭೆ ಬುಧವಾರ ಅಂಗೀಕರಿಸಿದೆ.
ಭೂಪೇಂದ್ರ ಯಾದವ್
ಭೂಪೇಂದ್ರ ಯಾದವ್

ನವದೆಹಲಿ: ಅರಣ್ಯ ಸಂರಕ್ಷಣಾ ಕಾನೂನುಗಳಿಂದ ದೇಶದ ಗಡಿಯಿಂದ 100 ಕಿ.ಮೀ ವರೆಗಿನ ಭೂಮಿಗೆ ವಿನಾಯಿತಿ ನೀಡುವ ಮತ್ತು ಅರಣ್ಯ ಪ್ರದೇಶಗಳಲ್ಲಿ ಮೃಗಾಲಯ, ಸಫಾರಿ ಮತ್ತು ಪರಿಸರ ಪ್ರವಾಸೋದ್ಯಮ ಸೌಲಭ್ಯಗಳನ್ನು ಸ್ಥಾಪಿಸಲು ಅನುವು ಮಾಡಿಕೊಡುವ ಮಸೂದೆಯನ್ನು ರಾಜ್ಯಸಭೆ ಬುಧವಾರ ಅಂಗೀಕರಿಸಿದೆ.

ಕಳೆದ ಜುಲೈ 26ರಂದು ಲೋಕಸಭೆಯಲ್ಲಿ ಈ ಮಸೂದೆ ಅಂಗೀಕಾರಗೊಂಡಿತ್ತು. ವಿನಾಯಿತಿ ಪಡೆದ ಅರಣ್ಯ ಭೂಮಿಯಲ್ಲಿ ಅಂತಾರಾಷ್ಟ್ರೀಯ ಗಡಿಗಳಿಂದ 100 ಕಿಲೋಮೀಟರ್ ವರೆಗಿನ ಭೂಮಿ, ನಿಯಂತ್ರಣ ರೇಖೆ ಮತ್ತು ನೈಜ ನಿಯಂತ್ರಣ ರೇಖೆ ಮತ್ತು ರಾಷ್ಟ್ರೀಯ ಭದ್ರತೆಗಾಗಿ ಕಾರ್ಯತಂತ್ರದ ಯೋಜನೆಗಳ ನಿರ್ಮಾಣಕ್ಕೆ ಬಳಸಲು ಉದ್ದೇಶಿಸಲಾಗಿದೆ.

ಲಿಥಿಯಂ ಸೇರಿದಂತೆ 12 ಪರಮಾಣು ಖನಿಜಗಳ ಪೈಕಿ ಆರು ಮತ್ತು ಚಿನ್ನ ಮತ್ತು ಬೆಳ್ಳಿಯಂತಹ ಆಳವಾದ ಖನಿಜಗಳನ್ನು ಗಣಿಗಾರಿಕೆ ಮಾಡಲು ಖಾಸಗಿ ವಲಯಕ್ಕೆ ಅನುಮತಿ ನೀಡುವ ಮಸೂದೆಯನ್ನು ರಾಜ್ಯಸಭೆ ಬುಧವಾರ ಧ್ವನಿ ಮತದ ಮೂಲಕ ಅಂಗೀಕರಿಸಿತು.

ಲೋಕಸಭೆಯಲ್ಲಿ ಮಸೂದೆ ಮಂಡಿಸಿದ್ದ ಪ್ರಲ್ಹಾದ್ ಜೋಶಿ
ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ ಅವರು ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ, 2023 ಅನ್ನು ಊಟದ ನಂತರ ಮಂಡಿಸಿದರು. ಇಲ್ಲಿಯವರೆಗೆ ಎಲ್ಲಾ 12 ಪರಮಾಣು ಖನಿಜಗಳ ಗಣಿಗಾರಿಕೆಯನ್ನು ಸರ್ಕಾರಿ ಕಂಪನಿಗಳಿಗೆ ಮೀಸಲಿಡಲಾಗಿತ್ತು. ಖಾಸಗಿ ವಲಯದಿಂದ ಗಣಿಗಾರಿಕೆ ಮಾಡಲು ಅನುಮತಿಸುವ ಆರು ಪರಮಾಣು ಖನಿಜಗಳಲ್ಲಿ ಲಿಥಿಯಂ, ಬೆರಿಲಿಯಮ್, ನಿಯೋಬಿಯಂ, ಟೈಟಾನಿಯಂ, ಟ್ಯಾಂಟಲಮ್ ಮತ್ತು ಜಿರ್ಕೋನಿಯಮ್ ಸೇರಿವೆ.

ಬ್ಯಾಟರಿಗಳನ್ನು ತಯಾರಿಸಲು ಲಿಥಿಯಂ ಅನ್ನು ಬಳಸಲಾಗುತ್ತದೆ. ಆಳದಲ್ಲಿ ಕಂಡುಬರುವ ಖನಿಜಗಳಲ್ಲಿ ಚಿನ್ನ, ಬೆಳ್ಳಿ ಮತ್ತು ವಜ್ರಗಳು ಸೇರಿವೆ, ಜೊತೆಗೆ ತಾಮ್ರ, ಸತು, ಸೀಸ, ನಿಕಲ್, ಕೋಬಾಲ್ಟ್ ಮತ್ತು ಪ್ಲಾಟಿನಮ್ ಇವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com