'ಅಮಾವಾಸ್ಯೆಯಂದು ಜಾಗರೂಕರಾಗಿರಿ': ಅಪರಾಧ ತಡೆಯಲು ಹಿಂದೂ ಕ್ಯಾಲೆಂಡರ್ ಅನುಸರಿಸಿ; ಪೊಲೀಸ್ ಇಲಾಖೆ ಸುತ್ತೋಲೆ

ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನದಂದು ಹೊರಡಿಸಿದ ವಿಚಿತ್ರ ಆಂತರಿಕ ಸುತ್ತೋಲೆಯಲ್ಲಿ, ಯುಪಿ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ವಿಜಯ ಕುಮಾರ್ ಅವರು ಚಂದ್ರನ ಚಲನೆಯ ಆಧಾರದ ಮೇಲೆ ಸಮಯ ನಿರ್ಣಯಿಸಲು 'ಹಿಂದೂ ಪಂಚಾಂಗ' (ಕ್ಯಾಲೆಂಡರ್) ಬಳಸುವಂತೆ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಲಕ್ನೋ: ಅಮಾವಾಸ್ಯೆಯಂದು ಜಾಗರೂಕರಾಗಿರಿ, ಪಂಚಾಂಗ ಅನುಸರಿಸಿ ಕೆಲಸ ಮಾಡಿ ಎಂದು ಉತ್ತರ ಪ್ರದೇಶ ಪೊಲೀಸ್ ಇಲಾಖೆ ವಿಚಿತ್ರ ಸುತ್ತೋಲೆ ಹೊರಡಿಸಿದೆ.

ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ಹೊರಡಿಸಿದ ವಿಚಿತ್ರ ಆಂತರಿಕ ಸುತ್ತೋಲೆಯಲ್ಲಿ, ಯುಪಿ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ವಿಜಯ ಕುಮಾರ್ ಅವರು ಚಂದ್ರನ ಚಲನೆಯ ಆಧಾರದ ಮೇಲೆ ಸಮಯ ನಿರ್ಣಯಿಸಲು 'ಹಿಂದೂ ಪಂಚಾಂಗ' (ಕ್ಯಾಲೆಂಡರ್) ಬಳಸುವಂತೆ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಈ ಅವಧಿಯಲ್ಲಿ ಅಪರಾಧಿಗಳು ಸಕ್ರಿಯರಾಗುವ ಸಂಭವನೀಯತೆ ಹೆಚ್ಚು ಇರುತ್ತದೆ ಎಂದು ತಿಳಿಸಿದ್ದಾರೆ. 'ಪಂಚಾಂಗ' ಎಂಬುದು ಚಂದ್ರನ ಕ್ಯಾಲೆಂಡರ್ ಆಗಿದ್ದು, ಇದು ಹುಣ್ಣಿಮೆಯಿಂದ ಪ್ರಾರಂಭವಾಗುವ ಹದಿನೈದು ದಿನಗಳನ್ನು ಹೊಂದಿದೆ, ಇದನ್ನು ಪ್ರಕಾಶಮಾನವಾದ ಹಂತ ಶುಕ್ಲ ಪಕ್ಷ ಎಂದು ಕರೆಯಲಾಗುತ್ತದೆ.

ಚಂದ್ರನಿಲ್ಲದೆ ಪ್ರಾರಂಭವಾಗುವ ಹದಿನೈದು ದಿನಗಳನ್ನು ಕೃಷ್ಣ ಪಕ್ಷ ಎಂದು ಕರೆಯಲಾಗುತ್ತದೆ. ಶುಕ್ಲಪಕ್ಷದ ಸಮಯದಲ್ಲಿ, ರಾತ್ರಿಗಳು ಚಂದ್ರನ ಬೆಳಕಿನಿಂದ ಪ್ರಕಾಶಮಾನವಾಗಿರುತ್ತವೆ ಆದರೆ ಕೃಷ್ಣ ಪಕ್ಷದಲ್ಲಿ ರಾತ್ರಿಗಳು ಕತ್ತಲೆಯಾಗಿರುತ್ತವೆ. ಬೆಳದಿಂಗಳಿಲ್ಲದ ರಾತ್ರಿ ಕತ್ತಲೆಯಾಗಿರುತ್ತದೆ.

ಆಗಸ್ಟ್ 14 ರ ಸುತ್ತೋಲೆಯಲ್ಲಿ ಪಂಚಾಂಗದ ಪ್ರತಿಯನ್ನು ಲಗತ್ತಿಸಲಾಗಿದೆ, ಚಂದ್ರನ ಬೆಳಕಿಲ್ಲದ ಕೃಷ್ಣಪಕ್ಷದ ರಾತ್ರಿ ಗಸ್ತು ತಿರುಗುವಂತೆ ರಾಜ್ಯಾದ್ಯಂತ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ, ಏಕೆಂದರೆ ಈ ಸಮಯದಲ್ಲಿ  ಈ ಗ್ಯಾಂಗ್‌ಗಳು ಹೆಚ್ಚು ಸಕ್ರಿಯರಾಗಿರುತ್ತವೆ.

ಆಗಸ್ಟ್ 16, ಸೆಪ್ಟೆಂಬರ್ 14, ಮತ್ತು ಅಕ್ಟೋಬರ್ 14 ರಂದು ಅಮಾವಾಸ್ಯೆಯಿದೆ (ಚಂದ್ರನಿಲ್ಲದ ದಿನ ಮತ್ತು ಚಂದ್ರನ ಹದಿನೈದು ದಿನಗಳ ಕರಾಳ ರಾತ್ರಿ) ಈ ಅವಧಿಯಲ್ಲಿ ಹೆಚ್ಚು ಜಾಗರೂಕರಾಗಿರುವಂತೆ ಪೊಲೀಸರಿಗೆ ಸೂಚಿಸಲಾಗಿದೆ.

ಈ ದಿನಾಂಕಗಳಿಗೆ ಒಂದು ವಾರ ಮೊದಲು ಮತ್ತು ನಂತರ ಎಚ್ಚರಿಕೆ ವಹಿಸುವಂತೆ ಡಿಜಿಪಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವಿಶೇಷವಾಗಿ, ಕ್ರಿಮಿನಲ್ ಗ್ಯಾಂಗ್‌ಗಳು ನಿರ್ಭಯವಾಗಿ ಅತ್ಯಂತ ಅನುಕೂಲಕರ ಅವಧಿಯಾದ ಕರಾಳ ರಾತ್ರಿಗಳಲ್ಲಿ ಕೆಲಸ ಮಾಡುತ್ತವೆ.  ಸಾರ್ವಜನಿಕರು ತಿಂಗಳ ಕರಾಳ ಅವಧಿಯ ಬಗ್ಗೆ ಜಾಗೃತರಾಗಿರಬೇಕು ಮತ್ತು ಅಪರಾಧಗಳನ್ನು ನಿಯಂತ್ರಣದಲ್ಲಿಡಲು ಗಸ್ತು ತಿರುಗುವಿಕೆಯನ್ನು ತೀವ್ರಗೊಳಿಸುವ ಸಲುವಾಗಿ ಪೊಲೀಸರು ಸಹ ಅದರ ಬಗ್ಗೆ ಎಚ್ಚರದಿಂದಿರಬೇಕು ಎಂದು ಡಿಜಿಪಿ ತಿಳಿಸಿದ್ದಾರೆ.

ಮನೆಗಳಲ್ಲಿ ಬೀಗ ಮತ್ತು ಡಬಲ್ ಲಾಕ್ ವ್ಯವಸ್ಥೆಯನ್ನು ಅಳವಡಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಡಿಜಿಪಿ ವಿಜಯ್ ಕುಮಾರ್ ಅವರು ಹಾಟ್ ಸ್ಪಾಟ್‌ಗಳನ್ನು ಗುರುತಿಸುವಾಗ ಕ್ರೈಮ್ ಮ್ಯಾಪಿಂಗ್ ಮಾಡುವುದು ಹೇಗೆ ಎಂದು ಚರ್ಚಿಸಿದ್ದಾರೆ ಮತ್ತು ಅಲ್ಲಿ ರಾತ್ರಿ ಗಸ್ತು ತೀವ್ರಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com