ಪನ್ನುನ್ ಪ್ರಕರಣ: ಅಮೇರಿಕಾದಿಂದ ಮಾಹಿತಿ ಪಡೆದ ಬಳಿಕ ಭಾರತ ತನಿಖಾ ಸಮಿತಿ ರಚಿಸಿದೆ- ಜೈಶಂಕರ್ 

ಸಿಖ್ ಪ್ರತ್ಯೇಕತವಾದಿ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆ ಪಿತೂರಿಯಲ್ಲಿ ಭಾರತದ ಕೈವಾಡವಿದೆ ಎಂಬ ಅಮೇರಿಕಾ ಆರೋಪದ ಬೆನ್ನಲ್ಲೇ ವಿದೇಶಾಂಗ ಸಚಿವ ಜೈ ಶಂಕರ್ ಈ ವಿಚಾರವಾಗಿ ತನಿಖಾ ಸಮಿತಿಯನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ.
ವಿದೇಶಾಂಗ ಸಚಿವ ಎಸ್ ಜೈಶಂಕರ್
ವಿದೇಶಾಂಗ ಸಚಿವ ಎಸ್ ಜೈಶಂಕರ್

ನವದೆಹಲಿ: ಸಿಖ್ ಪ್ರತ್ಯೇಕತವಾದಿ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆ ಪಿತೂರಿಯಲ್ಲಿ ಭಾರತದ ಕೈವಾಡವಿದೆ ಎಂಬ ಅಮೇರಿಕಾ ಆರೋಪದ ಬೆನ್ನಲ್ಲೇ ವಿದೇಶಾಂಗ ಸಚಿವ ಜೈ ಶಂಕರ್ ಈ ವಿಚಾರವಾಗಿ ತನಿಖಾ ಸಮಿತಿಯನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ.

ವಿಷಯ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ್ದಾಗಿದೆ ಆದ್ದರಿಂದ ಅಮೇರಿಕಾದಿಂದ ನಮಗೆ ಬಂದಿರುವ ಮಾಹಿತಿ ಬಗ್ಗೆ ತನಿಖಾ ಸಮಿತಿ ಗಮನ ಹರಿಸಲಿದೆ ಎಂದು ಜೈಶಂಕರ್ ತಿಳಿಸಿದ್ದಾರೆ.

ರಾಜ್ಯಸಭೆಯಲ್ಲಿ ಈ ವಿಷಯವಾಗಿ ಮಾತನಾಡಿದ ಸಚಿವರು, ಒಟ್ಟಾವಾ ಭಾರತಕ್ಕೆ ಯಾವುದೇ ನಿರ್ದಿಷ್ಟ ಪುರಾವೆಗಳು ಅಥವಾ ಮಾಹಿತಿಯನ್ನು ಒದಗಿಸದ ಕಾರಣ ಖಾಲಿಸ್ತಾನಿ ಉಗ್ರಗಾಮಿಯ ಹತ್ಯೆಯಲ್ಲಿ ಭಾರತೀಯ ಏಜೆಂಟರ ಸಂಭಾವ್ಯ ಒಳಗೊಳ್ಳುವಿಕೆಯ ಕೆನಡಾದ ಆರೋಪಗಳಿಗೆ ಇದೇ ಮಾದರಿಯಲ್ಲಿ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಹೇಳಿದ್ದಾರೆ.

"ಯುಎಸ್‌ಗೆ ಸಂಬಂಧಿಸಿದಂತೆ, ಯುನೈಟೆಡ್ ಸ್ಟೇಟ್ಸ್‌ನೊಂದಿಗಿನ ನಮ್ಮ ಭದ್ರತಾ ಸಹಕಾರದ ಭಾಗವಾಗಿ ಕೆಲವು ಮಾಹಿತಿಗಳನ್ನು ನಮಗೆ ನೀಡಲಾಗಿದೆ. ಆ ಮಾಹಿತಿಗಳು ಸಂಘಟಿತ ಅಪರಾಧ, ಕಳ್ಳಸಾಗಣೆ ಮತ್ತು ಇತರ ವಿಷಯಗಳ ಸಂಬಂಧಿತವಾಗಿದ್ದರಿಂದ ನಮಗೆ ಕಳವಳವನ್ನುಂಟುಮಾಡಿದವು ಎಂದು ಜೈಶಂಕರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com