2024 ಲೋಕಸಭಾ ಚುನಾವಣೆ: ಕಾಂಗ್ರೆಸ್ ಗೆ ಸಂಜಯ್ ರಾವತ್ ನೀಡಿದ ಎಚ್ಚರಿಕೆ ಇದು!

ಗಾಂಧಿ ಕುಟುಂಬದ ಸುತ್ತ ಪ್ರಧಾನಿ ನರೇಂದ್ರ ಮೋದಿ ಪರವಾಗಿ ರಾಜಕೀಯ ಮಾಡುವವರಿದ್ದರೆ 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ ಎಂದು ಶಿವಸೇನೆ-ಉದ್ಧವ್  ಠಾಕ್ರೆ ಬಣದ ನಾಯಕ ಸಂಜಯ್ ರಾವತ್ ಭಾನುವಾರ ಹೇಳಿದ್ದಾರೆ. 
ಸಂಜಯ್ ರಾವತ್
ಸಂಜಯ್ ರಾವತ್

ಮುಂಬೈ:  ಗಾಂಧಿ ಕುಟುಂಬದ ಸುತ್ತ ಪ್ರಧಾನಿ ನರೇಂದ್ರ ಮೋದಿ ಪರವಾಗಿ ರಾಜಕೀಯ ಮಾಡುವವರಿದ್ದರೆ 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ ಎಂದು ಶಿವಸೇನೆ-ಉದ್ಧವ್  ಠಾಕ್ರೆ ಬಣದ ನಾಯಕ ಸಂಜಯ್ ರಾವತ್ ಭಾನುವಾರ ಹೇಳಿದ್ದಾರೆ. 

ಪಕ್ಷದ ಮುಖವಾಣಿ 'ಸಾಮ್ನಾ'ದಲ್ಲಿ ತಮ್ಮ ಸಾಪ್ತಾಹಿಕ ಅಂಕಣದಲ್ಲಿ ರಾವತ್ , ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂಎಸ್) ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ. ಇತ್ತೀಚಿಗೆ ನಡೆದ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ ಅಂಚೆ ಮತಗಳ ಎಣಿಕೆ ವೇಳೆ ಕಾಂಗ್ರೆಸ್ 199 ಸ್ಥಾನಗಳಲ್ಲಿ ಮುಂದಿತ್ತು. ಆದರೆ ಇವಿಎಂಗಳಲ್ಲಿನ ಮತ ಎಣಿಕೆ ವೇಳೆ ಪರಿಸ್ಥಿತಿ ಬದಲಾಯಿತು ಎಂದು ಅವರು ಹೇಳಿದ್ದಾರೆ.

"ಗಾಂಧಿಗಳ ಸುತ್ತ ಮೋದಿ ಮತ್ತು ಶಾ  ಅವರಿಗೆ ಅನುಕೂಲಕರವಾದ ರಾಜಕೀಯ ಮಾಡುವ ಜನರು ಇದ್ದರೆ 2024 ರಲ್ಲಿ ಹೆಚ್ಚಿನ ಅಪಾಯವಿದೆ" ಎಂದು ಮಧ್ಯಪ್ರದೇಶದಲ್ಲಿ ಚುನಾವಣೆಯ ನೇತೃತ್ವ ವಹಿಸಿದ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಅವರನ್ನು ಉಲ್ಲೇಖಿಸಿ ಸಂಜಯ್ ರಾವತ್ ಹೇಳಿದ್ದಾರೆ.  ಮೂರು ರಾಜ್ಯಗಳಲ್ಲಿ ಮೋದಿ ಗೆಲುವಿನ 'ಮ್ಯಾಜಿಕ್' ಕೆಲಸ ಮಾಡಿದೆ, ಆದರೆ ತೆಲಂಗಾಣದಲ್ಲಿ ಮಾಡಿಲ್ಲ. ಕಾಂಗ್ರೆಸ್‌ನಿಂದ ಮೋದಿಯನ್ನು ಸೋಲಿಸಲು ಸಾಧ್ಯವಿಲ್ಲ ಎಂಬುದೂ ಮಿಥ್ಯೆ ಎಂದಿದ್ದಾರೆ. 

 ರಾಜಸ್ಥಾನ ಮತ್ತು ಛತ್ತೀಸ್‌ಗಢದ ನಿರ್ಗಮಿತ ಮುಖ್ಯಮಂತ್ರಿಗಳಾದ ಅಶೋಕ್ ಗೆಹ್ಲೋಟ್ ಮತ್ತು ಭೂಪೇಶ್ ಬಾಘೇಲ್ ಹೋರಾಟ ನಡೆಸಿದರೂ ಈ ಎರಡು ರಾಜ್ಯಗಳಲ್ಲಿ ಕಾಂಗ್ರೆಸ್ ಸೋತಿದೆ ಎಂದು ಸಂಜಯ್ ರಾವತ್ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com