ಸಿಬಿಐ ಚಾರ್ಜ್‌ಶೀಟ್: ಎಲ್‌ಜೆಪಿ(ಆರ್) ಸಂಸದೀಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ MLC ಹುಲಾಸ್ ಪಾಂಡೆ ರಾಜಿನಾಮೆ

ಬಿಹಾರದ ಪ್ರಸಿದ್ಧ ಬ್ರಹ್ಮೇಶ್ವರ ಮುಖಿಯಾ ಹತ್ಯೆ ಪ್ರಕರಣದ ಚಾರ್ಜ್ ಶೀಟ್ ನಲ್ಲಿ ತಮ್ಮ ಹೆಸರನ್ನು ಉಲ್ಲೇಖಿಸಿದ್ದರಿಂದ ಮಾಜಿ MLC ಹುಲಾಸ್ ಪಾಂಡೆ ಸಿಬಿಐ ವಿರುದ್ಧ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ.
ಹುಲಾಸ್ ಪಾಂಡೆ
ಹುಲಾಸ್ ಪಾಂಡೆ
Updated on

ಬಿಹಾರದ ಪ್ರಸಿದ್ಧ ಬ್ರಹ್ಮೇಶ್ವರ ಮುಖಿಯಾ ಹತ್ಯೆ ಪ್ರಕರಣದ ಚಾರ್ಜ್ ಶೀಟ್ ನಲ್ಲಿ ತಮ್ಮ ಹೆಸರನ್ನು ಉಲ್ಲೇಖಿಸಿದ್ದರಿಂದ ಮಾಜಿ MLC ಹುಲಾಸ್ ಪಾಂಡೆ ಸಿಬಿಐ ವಿರುದ್ಧ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ.

ಅಷ್ಟೇ ಅಲ್ಲದೆ ಚಿರಾಗ್ ಪಾಸ್ವಾನ್ ಅವರ ಪಕ್ಷದ ಎಲ್‌ಜೆಪಿ ರಾಮ್ ವಿಲಾಸ್‌ನ ಸಂಸದೀಯ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

ಹುಲಾಸ್ ಪಾಂಡೆ ತಾನು ನಿರಪರಾಧಿ ಎಂದು ಘೋಷಿಸಿಕೊಂಡಿದ್ದು, ಸಿಬಿಐ ತನ್ನ ಹೆಸರನ್ನು ಚಾರ್ಜ್ ಶೀಟ್ ನಲ್ಲಿ ಸೇರಿಸಿದೆ ಎಂದು ಹೇಳಿದ್ದಾರೆ. ರಣವೀರ್ ಸೇನಾ ಮುಖ್ಯಸ್ಥ ಬ್ರಹ್ಮೇಶ್ವರ್ ಮುಖಿಯಾ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ಸಂಸ್ಥೆಯು ಪೂರಕ ಚಾರ್ಜ್ ಶೀಟ್ ಅನ್ನು ಅರಾಹ್ ನ್ಯಾಯಾಲಯಕ್ಕೆ ಶನಿವಾರ ಸಲ್ಲಿಸಿತ್ತು. ಇದರಲ್ಲಿ ಚಿರಾಗ್ ಪಾಸ್ವಾನ್ ಆಪ್ತ ಮಾಜಿ ಎಂಎಲ್ ಸಿ ಹುಲಾಸ್ ಪಾಂಡೆ ಸೇರಿದಂತೆ 8 ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿತ್ತು.

ಹುಲಾಸ್ ಪಾಂಡೆ ಸೋಮವಾರ ಪಾಟ್ನಾದಲ್ಲಿ ಮಾಧ್ಯಮದ ಮುಂದೆ ಹಾಜರಾಗಿ ಸಿಬಿಐ ಆರೋಪಗಳನ್ನು ತಿರಸ್ಕರಿಸಿದರು. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಪಾಂಡೆ ಸಮರ್ಥಿಸಿಕೊಂಡರು. ವೈಯಕ್ತಿಕ ಪ್ರತಿಷ್ಠೆಗಿಂತ ಪಕ್ಷದ ಛಾಪು ಮುಖ್ಯ ಎಂದರು. ಆದ್ದರಿಂದ, ಅವರು ತಕ್ಷಣವೇ ಎಲ್‌ಜೆಪಿ ರಾಮ್ ವಿಲಾಸ್‌ನ ಸಂಸದೀಯ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಸಿಬಿಐ ಚಾರ್ಜ್ ಶೀಟ್ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಹುಲಾಸ್ ಪಾಂಡೆ ಹೇಳಿದ್ದಾರೆ. ಮಾಧ್ಯಮಗಳ ಮೂಲಕವೇ ಅವರಿಗೆ ಈ ವಿಷಯ ತಿಳಿಯಿತು. ಪಾಂಡೆ ಅವರು ಬ್ರಹ್ಮೇಶ್ವರ ಮುಖಿಯಾ ಅವರೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಮತ್ತು ಅವರೊಂದಿಗೆ ಯಾವುದೇ ದ್ವೇಷವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಆರೋಪಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ. ಚುನಾವಣೆ ಬಂದಾಗಲೆಲ್ಲ ಅವರ ವಿರೋಧಿಗಳು ಷಡ್ಯಂತ್ರ ರೂಪಿಸಿ ಅವಮಾನ ಮಾಡುತ್ತಾರೆ. ತನಿಖಾ ಸಂಸ್ಥೆಯನ್ನು ಯಾರೋ ದಿಕ್ಕು ತಪ್ಪಿಸಿದ್ದಾರೆಂದು ತೋರುತ್ತದೆ ಎಂದು ಹೇಳಿದರು.

2012ರ ಜೂನ್ 1ರಂದು ಅರ್ರಾದಲ್ಲಿ ರಣವೀರ್ ಸೇನೆಯ ಬ್ರಹ್ಮೇಶ್ವರ್ ಮುಖಿಯಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಘಟನೆ ನಡೆದು ಒಂದು ವರ್ಷದ ಬಳಿಕ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ಸುಮಾರು 10 ವರ್ಷಗಳ ತನಿಖೆಯ ನಂತರ, ಸಿಬಿಐ ಸೋಮವಾರ ನ್ಯಾಯಾಲಯಕ್ಕೆ ಹೊಸ ಚಾರ್ಜ್ ಶೀಟ್ ಸಲ್ಲಿಸಿದ್ದು, ಇದರಲ್ಲಿ ಹುಲಾಸ್ ಪಾಂಡೆ, ಅಭಯ್ ಪಾಂಡೆ, ನಂದ್ ಗೋಪಾಲ್, ರಿತೇಶ್ ಕುಮಾರ್, ಅಮಿತೇಶ್, ಪ್ರಿನ್ಸ್, ಬಾಲೇಶ್ವರ್ ಮತ್ತು ಮನೋಜ್ ರೈ ಅವರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಹುಲಾಸ್ ಪಾಂಡೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯುನಿಂದ ಎಂಎಲ್ಸಿ ಆಗಿದ್ದಾರೆ. ಪ್ರಸ್ತುತ ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ ರಾಮ್ ವಿಲಾಸ್‌ನಲ್ಲಿದೆ.

ಸಿಬಿಐ ಚಾರ್ಜ್ ಶೀಟ್ ಕುರಿತಂತೆ ಜನವರಿ 3ರಂದು ನ್ಯಾಯಾಲಯ ವಿಚಾರಣೆ ನಡೆಸಲಿದೆ ಎಂದು ತನಿಖಾಧಿಕಾರಿ ಸಿಯಾರಾಮ್ ಸಿಂಗ್ ಹೇಳಿದ್ದಾರೆ. ಸಂಸದ-ಶಾಸಕ ಅರ್ರಾದ ವಿಶೇಷ ನ್ಯಾಯಾಧೀಶರು ಈ ಪ್ರಕರಣದ ವಿಚಾರಣೆ ನಡೆಸಲಿದ್ದಾರೆ. ಚಾರ್ಜ್ ಶೀಟ್ ಆಧಾರದ ಮೇಲೆ ಎಲ್ಲಾ ಆರೋಪಿಗಳನ್ನು ನ್ಯಾಯಾಲಯಕ್ಕೆ ವಿಚಾರಣೆಗೆ ಕರೆಯಲಾಗುವುದು. ಅಲ್ಲಿ ಅವರು ತಮ್ಮ ವಿರುದ್ಧದ ಆರೋಪಗಳನ್ನು ಸ್ವೀಕರಿಸುತ್ತಾರೆಯೇ ಅಥವಾ ಇಲ್ಲವೇ ಎಂದು ಕೇಳಲಾಗುತ್ತದೆ. ಇದಾದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com