ಪಶ್ಚಿಮ ಬಂಗಾಳದಲ್ಲಿ ಬಾಂಬ್ ಸ್ಫೋಟ; ಟಿಎಂಸಿ ಕಾರ್ಯಕರ್ತ ಬಲಿ, ಪಂಚಾಯತಿ ಮುಖ್ಯಸ್ಥನ ಸಹೋದರನಿಗೆ ಗಾಯ

ಬಿರ್ಭೂಮ್ ಜಿಲ್ಲೆಯ ಮಾರ್ಗ್ರಾಮ್‌ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತ ಸಾವಿಗೀಡಾಗಿದ್ದು, ಆಡಳಿತ ಪಕ್ಷದ ಪಂಚಾಯತ್ ಮುಖ್ಯಸ್ಥನ ಸಹೋದರನಿಗೆ ಗಾಯವಾಗಿದೆ.
ಸ್ಪೋಟ (ಸಾಂದರ್ಭಿಕ ಚಿತ್ರ)
ಸ್ಪೋಟ (ಸಾಂದರ್ಭಿಕ ಚಿತ್ರ)
Updated on

ಕೋಲ್ಕತ್ತಾ: ಬಿರ್ಭೂಮ್ ಜಿಲ್ಲೆಯ ಮಾರ್ಗ್ರಾಮ್‌ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತ ಸಾವಿಗೀಡಾಗಿದ್ದು, ಆಡಳಿತ ಪಕ್ಷದ ಪಂಚಾಯತಿ ಮುಖ್ಯಸ್ಥನ ಸಹೋದರನಿಗೆ ಗಾಯವಾಗಿದೆ.

ಈ ದಾಳಿಗೆ ಕಾಂಗ್ರೆಸ್ ಬೆಂಬಲಿಗರೇ ಕಾರಣ ಎಂದು ಮೃತ ನ್ಯೂಟನ್ ಶೇಖ್ ಅವರ ಕುಟುಂಬ ಸದಸ್ಯರು ಆರೋಪಿಸಿದರೆ, ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಅವರು ಯಾವುದೇ ರೀತಿಯ ದೈಹಿಕ ದಾಳಿಯಲ್ಲಿ ಭಾಗಿಯಾಗಲು ಮಾರ್ಗ್ರಾಮ್‌ನಲ್ಲಿ ಪಕ್ಷವು ಕಡಿಮೆ ಅಸ್ತಿತ್ವವನ್ನು ಹೊಂದಿದೆ ಎಂದು ಹೇಳಿದರು.

ಬಾಂಬ್ ದಾಳಿಯಲ್ಲಿ ನ್ಯೂಟನ್ ಶೇಖ್ ಮೃತಪಟ್ಟಿದ್ದರೆ, ಗಾಯಗೊಂಡ ಲಾಲ್ತು ಶೇಖ್ ಅವರನ್ನು ಚಿಕಿತ್ಸೆಗಾಗಿ ಕೋಲ್ಕತ್ತಾದ ಸರ್ಕಾರಿ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಿರ್ಭೂಮ್ ಜಿಲ್ಲೆ ಜಾರ್ಖಂಡ್‌ನೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಕಾರಣ ಮಾವೋವಾದಿಗಳು ದಾಳಿಯಲ್ಲಿ ಭಾಗಿಯಾಗಿರಬಹುದೆಂಬ ಶಂಕೆ ವ್ಯಕ್ತಪಡಿಸಿದ ಪಶ್ಚಿಮ ಬಂಗಾಳ ನಗರಾಭಿವೃದ್ಧಿ ಸಚಿವ ಫಿರ್ಹಾದ್ ಹಕೀಮ್, ದಾಳಿಯನ್ನು ಹೇಗೆ ಮತ್ತು ಏಕೆ ನಡೆಸಲಾಗಿದೆ ಎಂಬುದನ್ನು ಕಂಡುಹಿಡಿಯಲು ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಬೇಕು ಎಂದು ಹೇಳಿದರು.

ಇದರ ಹಿಂದೆ ದೊಡ್ಡ ಪಿತೂರಿ ಇದೆ ಎಂದು ನಾನು ಭಾವಿಸುತ್ತೇನೆ ಮತ್ತು ಈ ಬಾಂಬ್‌ಗಳನ್ನು ತಯಾರಿಸಲು ಸಂಗ್ರಹಿಸಿದ ಸಾಮಗ್ರಿಗಳ ಮೂಲವನ್ನು ತನಿಖೆ ಮಾಡಬೇಕು ಎಂದು ಅವರು ಮಾರ್ಗ್ರಾಮ್‌ನಲ್ಲಿ ಗಾಯಗೊಂಡ ಲಾಲ್ತು ಅವರನ್ನು ಭೇಟಿಯಾದ ನಂತರ ಟಿಎಂಸಿ ಪಂಚಾಯತ್ ಮುಖ್ಯಸ್ಥರು ಸುದ್ದಿಗಾರರಿಗೆ ತಿಳಿಸಿದರು.

ಮಾರ್ಗ್ರಾಮ್‌ದಲ್ಲಿ ಕಾಂಗ್ರೆಸ್‌ಗೆ ಯಾವುದೇ ಸಂಘಟನಾ ಶಕ್ತಿ ಇಲ್ಲ ಎಂದು ಹೇಳಿದ ಚೌಧರಿ, ಈ ವಿಷಯ ತಿಳಿದಿದ್ದರೂ ಪಕ್ಷಕ್ಕೆ ಪ್ರಚಾರ ನೀಡಲು ಯಾರಾದರೂ ಬಯಸಿದರೆ, ಅದರ ಬಗ್ಗೆ ನನಗೆ ಯಾವುದೇ ಸಮಸ್ಯೆ ಇಲ್ಲ. ದಾಳಿಕೋರರು ಮತ್ತು ಸಂತ್ರಸ್ತರು ಇಬ್ಬರೂ ಟಿಎಂಸಿಗೆ ಸೇರಿದವರು ಎಂಬುದು ಎಲ್ಲರಿಗೂ ತಿಳಿಸಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com