ದೆಹಲಿ ಎಂಸಿಡಿ ಮೇಯರ್ ಚುನಾವಣೆ: ಎಎಪಿ ಅಭ್ಯರ್ಥಿ ಶೆಲ್ಲಿ ಒಬೆರಾಯ್ ಗೆ 150 ಮತಗಳಿಂದ ಗೆಲುವು; ಬಿಜೆಪಿಗೆ ಮುಖಭಂಗ

ಮುನ್ಸಿಪಲ್ ಚುನಾವಣೆ ಮುಗಿದ 80 ದಿನಗಳ ನಂತರ ದೆಹಲಿಗೆ ಹೊಸ ಮೇಯರ್ ಆಯ್ಕೆಯಾಗಿದ್ದಾರೆ. ಆಮ್ ಆದ್ಮಿ ಪಕ್ಷದ ಶೆಲ್ಲಿ ಒಬೆರಾಯ್ 150 ಮತಗಳನ್ನು ಪಡೆದು ಮೇಯರ್ ಆಗಿ ಆಯ್ಕೆಯಾಗಿದ್ದು ಬಿಜೆಪಿಯ ರೇಖಾ ಗುಪ್ತಾ 34 ಮತಗಳಿಂದ ಸೋಲು ಕಂಡಿದ್ದಾರೆ.
ಶೆಲ್ಲಿ ಒಬೆರಾಯ್
ಶೆಲ್ಲಿ ಒಬೆರಾಯ್
Updated on

ನವದೆಹಲಿ: ಮುನ್ಸಿಪಲ್ ಚುನಾವಣೆ ಮುಗಿದ 80 ದಿನಗಳ ನಂತರ ದೆಹಲಿಗೆ ಹೊಸ ಮೇಯರ್ ಆಯ್ಕೆಯಾಗಿದ್ದಾರೆ. ಆಮ್ ಆದ್ಮಿ ಪಕ್ಷದ ಶೆಲ್ಲಿ ಒಬೆರಾಯ್ 150 ಮತಗಳನ್ನು ಪಡೆದು ಮೇಯರ್ ಆಗಿ ಆಯ್ಕೆಯಾಗಿದ್ದು ಬಿಜೆಪಿಯ ರೇಖಾ ಗುಪ್ತಾ 34 ಮತಗಳಿಂದ ಸೋಲು ಕಂಡಿದ್ದಾರೆ.

ದೆಹಲಿಗೆ 10 ವರ್ಷಗಳ ನಂತರ ಮಹಿಳಾ ಮೇಯರ್ ಸಿಕ್ಕಿದ್ದಾರೆ. ಬಿಜೆಪಿಯ ರಜನಿ ಅಬ್ಬಿ 2011ರಲ್ಲಿ ಕೊನೆಯ ಮಹಿಳಾ ಮೇಯರ್ ಆಗಿದ್ದರು. ಇದರ ನಂತರ, 2012ರಲ್ಲಿ ಶೀಲಾ ದೀಕ್ಷಿತ್ ಸರ್ಕಾರದಲ್ಲಿ ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್ ಅನ್ನು 3 ಭಾಗಗಳಾಗಿ ವಿಂಗಡಿಸಲಾಯಿತು. ಆದರೆ 2022ರಲ್ಲಿ ಈ ಭಾಗಗಳು ಮತ್ತೆ ಒಂದಾಗಿದ್ದು ನಂತರ ನಡೆದ ಮೊದಲ ಚುನಾವಣೆ ಇದಾಗಿದೆ.

ಮತ್ತೊಂದೆಡೆ ಮೇಯರ್ ಚುನಾವಣೆಯಲ್ಲಿ ಶೆಲ್ಲಿ ಒಬೆರಾಯ್ ಗೆಲುವು ಸಾಧಿಸುತ್ತಿದ್ದಂತೆ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಗೂಂಡಾಗಿರಿಗೆ ಸೋಲಾಗಿದ್ದು, ದೆಹಲಿಯ ಜನರು ಗೆದ್ದಿದ್ದಾರೆ ಎಂದು ಹೇಳಿದ್ದಾರೆ.

ಎಂಸಿಡಿ ಚುನಾವಣಾ ಫಲಿತಾಂಶ ಕಳೆದ ಡಿಸೆಂಬರ್ 8ರಂದು ನಡೆದಿತ್ತು. 15 ವರ್ಷಗಳ ನಂತರ ಬಿಜೆಪಿ ಮೇಯರ್ ಸ್ಥಾನದಿಂದ ಹೊರಬಂದಿದೆ. ಎಂಸಿಡಿಯಲ್ಲಿ 15 ವರ್ಷಗಳ ನಂತರ ಬಿಜೆಪಿಗೆ ಬಹುಮತ ಸಿಕ್ಕಿಲ್ಲ. 250 ಸ್ಥಾನಗಳ ಮನೆಯಲ್ಲಿ ಮೇಯರ್ ಆಗಲು 138 ಮತಗಳ ಅಗತ್ಯವಿತ್ತು. ಮೇಯರ್ ಚುನಾವಣೆಯಲ್ಲಿ 241 ಕಾರ್ಪೊರೇಟರ್‌ಗಳು, 10 ಸಂಸದರು ಮತ್ತು 14 ಶಾಸಕರು ಮತ ಚಲಾಯಿಸಿದ್ದಾರೆ. 9 ಕಾಂಗ್ರೆಸ್ ಕೌನ್ಸಿಲರ್‌ಗಳು ಚುನಾವಣೆಯಲ್ಲಿ ಭಾಗವಹಿಸಿಲ್ಲ.

ಮತದಾನಕ್ಕೂ ಮುನ್ನ ಎಎಪಿ ಕಾರ್ಪೊರೇಟರ್ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು
ಬೆಳಿಗ್ಗೆ 11 ಗಂಟೆಗೆ ಮತದಾನ ಪ್ರಾರಂಭವಾಗುವ ಮೊದಲು ಸಿವಿಕ್ ಸೆಂಟರ್‌ನಲ್ಲಿ ಗದ್ದಲದಂತಹ ಪರಿಸ್ಥಿತಿ ಕಂಡುಬಂದಿದೆ. ಎಎಪಿ ಕೌನ್ಸಿಲರ್‌ಗಳೂ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಬಿಜೆಪಿ ಶಾಸಕ ವಿಜೇಂದರ್ ಗುಪ್ತಾ ಅವರ ಸದನಕ್ಕೆ ಎಎಪಿ ಕಾರ್ಪೊರೇಟರ್‌ಗಳು ವಿರೋಧ ವ್ಯಕ್ತಪಡಿಸಿದ್ದರು. ಗದ್ದಲದ ಭೀತಿಯ ಹಿನ್ನೆಲೆಯಲ್ಲಿ ಸದನದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. 

ಈ ಮೊದಲು 3 ಬಾರಿ ಚುನಾವಣೆ ನಡೆಸಲು ಸಾಧ್ಯವಾಗಿರಲಿಲ್ಲ
ಇದಕ್ಕೂ ಮುನ್ನ ಮೂರು ಬಾರಿ ಮೇಯರ್ ಚುನಾವಣೆ ನಡೆಸಲು ಪ್ರಯತ್ನ ನಡೆದಿತ್ತು ಆದರೆ ಬಿಜೆಪಿ ಮತ್ತು ಆಪ್ ಸದಸ್ಯರ ಗದ್ದಲದಿಂದಾಗಿ ಅದು ಸಾಧ್ಯವಾಗಲಿಲ್ಲ. 10 ನಾಮನಿರ್ದೇಶಿತ ಎಂಸಿಡಿ ಸದಸ್ಯರಿಗೆ ಮತದಾನ ಮಾಡಲು ಎಲ್‌ಜಿ ವಿಕೆ ಸಕ್ಸೇನಾ ಅವರ ನಿರ್ಧಾರವು ಕೋಲಾಹಲಕ್ಕೆ ಕಾರಣವಾಗಿತ್ತು. ಎಎಪಿಯ ಮೇಯರ್ ಅಭ್ಯರ್ಥಿ ಶೈಲಿ ಒಬೆರಾಯ್ ಈ ಕುರಿತು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಫೆಬ್ರವರಿ 17 ರಂದು ಸುಪ್ರೀಂ ಕೋರ್ಟ್ ಎಎಪಿ ಪರವಾಗಿ ತೀರ್ಪು ನೀಡಿತು. 24 ಗಂಟೆಯೊಳಗೆ ನೋಟಿಸ್ ಜಾರಿ ಮಾಡುವಂತೆ ಸೂಚಿಸಲಾಗಿತ್ತು. ಇದಾದ ನಂತರ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಫೆಬ್ರವರಿ 22 ರಂದು ಚುನಾವಣೆ ನಡೆಸುವಂತೆ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಪ್ರಸ್ತಾಪಿಸಿದರು. ಅವರು 2 ಗಂಟೆಗಳ ಒಳಗೆ ಅದನ್ನು ಒಪ್ಪಿಕೊಂಡರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com