ಪ್ರತಿಪಕ್ಷಗಳಿಗಿಂತ ಹೆಚ್ಚಾಗಿ ತಮ್ಮದೇ ಸರ್ಕಾರದ ವಿರುದ್ಧ ಮುಗಿಬೀಳುತ್ತಿರುವ ಗುಜರಾತ್ ಬಿಜೆಪಿ ಶಾಸಕರು!

ಇತ್ತೀಚೆಗೆ ನಡೆದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 156 ಸ್ಥಾನಗಳನ್ನು ಗಳಿಸಿದ ನಂತರ ತಮ್ಮದೇ ಸರ್ಕಾರ ರಚಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಅಹಮದಾಬಾದ್: ಇತ್ತೀಚೆಗೆ ನಡೆದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 156 ಸ್ಥಾನಗಳನ್ನು ಗಳಿಸಿದ ನಂತರ ತಮ್ಮದೇ ಸರ್ಕಾರ ರಚಿಸಿದೆ.

ಆದರೆ  ಪ್ರತಿಪಕ್ಷಗಳಿಗಿಂತ ಹೆಚ್ಚಾಗಿ ಬಿಜೆಪಿ ನಾಯಕರು ತಮ್ಮದೇ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ.  ಬರೋಡಾ ಡೈರಿಯಲ್ಲಿ ಬಿಜೆಪಿ ನೇತೃತ್ವದ ಆಡಳಿತವು ಭ್ರಷ್ಟಾಚಾರ ನಡೆಸುತ್ತಿದೆ ಎಂದು ವಡೋದರಾ ಸಾವ್ಲಿಯ ಶಾಸಕ ಕೇತನ್ ಇನಾಮದಾರ್ ಆರೋಪಿಸಿದ್ದಾರೆ, ವಿರಾಮಗಮ್ ಬಿಜೆಪಿ ಶಾಸಕ ಹಾರ್ದಿಕ್ ಪಟೇಲ್ ರೈತರ ಶೋಷಣೆಯ ಆರೋಪದ ಮೇಲೆ ಆಂದೋಲನ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ.

ಮತ್ತೊಂದೆಡೆ ಸೂರತ್ ವರಚ ಶಾಸಕ ಕುಮಾರ್ ಕನಾನಿ ಸರ್ಕಾರದ ಹಲವು ನೀತಿಗಳನ್ನು ಟೀಕಿಸಿದ್ದಾರೆ. ಸರ್ಕಾರ ರಚನೆಯಾದ ನಂತರ, ವಡೋದರದ ಸಾವ್ಲಿ ಶಾಸಕ ಕೇತನ್ ಇನಾಮದಾರ್ ತಮ್ಮದೇ ಪಕ್ಷದ ವಿರುದ್ಧ ಪ್ರಶ್ನೆಗಳನ್ನು ಎತ್ತಲಾರಂಭಿಸಿದ್ದಾರೆ.

ಬರೋಡಾ ಡೈರಿ ಎಂದು ಜನಪ್ರಿಯವಾಗಿರುವ ಬಿಜೆಪಿ ಆಡಳಿತವಿರುವ ಬರೋಡಾ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ಲಿಮಿಟೆಡ್ ನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಇನಾಮದಾರ್ ಆರೋಪಿಸಿದ್ದಾರೆ. ಕೆಲವು ನಿರ್ದೇಶಕರು ಡೈರಿಯಲ್ಲಿನ ಸ್ಥಾನಗಳಿಗೆ ತಮ್ಮ ಸಂಬಂಧಿಕರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ, ಜೊತೆಗೆ ನಿರ್ವಹಣೆ ಗುತ್ತಿಗೆ ನೀಡುವಲ್ಲಿ ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಇನಾಮದಾರ್ ಕೂಡ ಬರೋಡಾ ಡೈರಿಯ ಹೊರಗೆ ಪ್ರತಿಭಟನೆ ನಡೆಸಿದರು. ಪರಿಣಾಮವಾಗಿ, ಫೆಬ್ರವರಿ 22 ರಂದು ಬರೋಡಾ ಡೈರಿಯ ಸ್ವತಂತ್ರ, ಉಪಾಧ್ಯಕ್ಷ ಮತ್ತು ಹಂಗಾಮಿ ಅಧ್ಯಕ್ಷ ಜಿ ಬಿ ಸೋಲಂಕಿ ರಾಜೀನಾಮೆ ನೀಡಿದರು.

ರಾಜ್ಯದಲ್ಲಿ ಪಾಟಿದಾರ್ ಆಂದೋಲನದ ನೇತೃತ್ವ ವಹಿಸಿದ್ದ ಹಾರ್ದಿಕ್ ಪಟೇಲ್ ಅವರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಕೃಷಿ ಸಚಿವ ರಾಘವ್‌ಜಿ ಪಟೇಲ್‌ ಅವರಿಗೆ ಪತ್ರ ಬರೆದು, ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಆಡಳಿತಕ್ಕಾಗಿ ಬಿಟಿ ಅಲ್ಲದ ಹತ್ತಿಯನ್ನು ಸರ್ಕಾರದ ಖರೀದಿ ಪಟ್ಟಿಗೆ ಸೇರಿಸಬೇಕು ಎಂದು ಮನವಿ ಮಾಡಿದರು. ಹತ್ತಿ ಬೇಲ್‌ಗಳ ತೂಕದಲ್ಲಿ ವಾಣಿಜ್ಯ ವಿತರಕರು ರೈತರನ್ನು ವಂಚಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಗಾಂಧಿ ಮಾರ್ಗದಲ್ಲಿ ಪ್ರತಿಭಟನೆ ನಡೆಸುವುದಾಗಿ ಪತ್ರದಲ್ಲಿ ಬೆದರಿಕೆ ಹಾಕಿದ್ದಾರೆ.

ಸೂರತ್‌ನ ವರಾಚಾದ ಶಾಸಕ ಕಿಶೋರ್ ಕನಾನಿ ಅವರು ಹಲವಾರು ವಿಷಯಗಳ ಬಗ್ಗೆ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಮೊದಲಿಗೆ ಗುಜರಾತ್ ಸಿಎಂಗೆ ಪತ್ರ ಬರೆದು, ವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳು ಆರು ತಿಂಗಳ ಕಾಲ ಸರ್ಕಾರದ ಯೋಜನೆಯಡಿ ಸಾಲ ದೊರೆಯುತ್ತಿಲ್ಲ ಇದರಿಂದ ಅವರರ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com