'ಪಠಾಣ್' ಬಿಡುಗಡೆ: ಪ್ರವಾದಿ ಮೊಹಮ್ಮದ್ ವಿರುದ್ಧ 'ಆಕ್ಷೇಪಾರ್ಹ' ಘೋಷಣೆ, ಇಂದೋರ್‌ನಲ್ಲಿ ನಾಲ್ವರ ಬಂಧನ

ಇಂದೋರ್ ಚಿತ್ರಮಂದಿರದ ಬಳಿ 'ಪಠಾಣ್' ಚಿತ್ರದ ವಿರುದ್ಧ ಬಲಪಂಥೀಯ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯಲ್ಲಿ ಪ್ರವಾದಿ ಮೊಹಮ್ಮದ್ ವಿರುದ್ಧ ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಲಾಗಿದೆ ಎಂದು ಕೆಲವು ಮುಸ್ಲಿಂ ಸಮುದಾಯದವರು ದೂರಿದ ನಂತರ ಮಧ್ಯಪ್ರದೇಶದ ಇಂದೋರ್‌ನ ಪೊಲೀಸರು ಬುಧವಾರ ನಾಲ್ವರನ್ನು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಇಂದೋರ್: ನಗರದ ಚಿತ್ರಮಂದಿರದ ಬಳಿ 'ಪಠಾಣ್' ಚಿತ್ರದ ವಿರುದ್ಧ ಬಲಪಂಥೀಯ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯಲ್ಲಿ ಪ್ರವಾದಿ ಮೊಹಮ್ಮದ್ ವಿರುದ್ಧ ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಲಾಗಿದೆ ಎಂದು ಕೆಲವು ಮುಸ್ಲಿಂ ಸಮುದಾಯದವರು ದೂರಿದ ನಂತರ ಮಧ್ಯಪ್ರದೇಶದ ಇಂದೋರ್‌ನ ಪೊಲೀಸರು ಬುಧವಾರ ನಾಲ್ವರನ್ನು ಬಂಧಿಸಿದ್ದಾರೆ.

ಪ್ರತ್ಯೇಕ ಬೆಳವಣಿಗೆಯಲ್ಲಿ, ನಗರದಲ್ಲಿ ಜಿಹಾದಿ ಅಂಶಗಳು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ತಲೆಕಡಿಯುತ್ತೇವೆ ಎಂದು ಪ್ರಚೋದನಕಾರಿ ಘೋಷಣೆ ಎದ್ದಿದೆ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಆರೋಪಿಸಿದ ನಂತರ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೆಲವು ಬಲಪಂಥೀಯ ಸಂಘಟನೆಗಳು ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿ ಪಠಾಣ್ ಚಿತ್ರದ ಕೆಲವು ದೃಶ್ಯಗಳ ಕುರಿತು ಬುಧವಾರದಂದು ಪ್ರತಿಭಟನೆಗಳನ್ನು ನಡೆಸಿದವು. ಇಂದೋರ್ ಮತ್ತು ಭೋಪಾಲ್‌ನಲ್ಲಿ ಕೆಲವು ಚಿತ್ರಮಂದಿರಗಳು ಬೆಳಗಿನ ಪ್ರದರ್ಶನಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿದವು.

ಇಂದೋರ್‌ನಲ್ಲಿರುವ ನಗರ ಮೂಲದ ಕಸ್ತೂರ್ ಟಾಕೀಸ್ ಆವರಣದಲ್ಲಿ ಬಲಪಂಥೀಯ ಕಾರ್ಯಕರ್ತರು ನಡೆಸಿದ 'ಪಠಾಣ್' ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಪ್ರವಾದಿ ವಿರುದ್ಧ ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಲಾಯಿತು ಎಂದು ಮುಸ್ಲಿಂ ಸಮುದಾಯದ ಕೆಲವು ಸದಸ್ಯರು ಆರೋಪಿಸಿದ್ದಾರೆ.

ಅವರ ದೂರಿನ ಆಧಾರದ ಮೇಲೆ, ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿದೆ ಮತ್ತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ನಂತರ ಬಂಧಿಸಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಬುಧವಾರ ರಾತ್ರಿ ನಗರದ ಬದ್ವಾಲಿ ಚೌಕಿ ಪ್ರದೇಶದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಪ್ರಚೋದನಾಕಾರಿ ಘೋಷಣೆ ಕೂಗಿದರು ಎಂದು ವಿಎಚ್‌ಪಿ ಹೇಳಿದೆ.

ವಿಎಚ್‌ಪಿ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ಟ್ವಿಟರ್‌ನಲ್ಲಿ ಈ ಘೋಷಣೆಯಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ಆರೋಪ ಮಾಡಿದ್ದಾರೆ. ಅವರು ರಾಜ್ಯದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಗೃಹ ಸಚಿವ ನರೋತ್ತಮ್ ಮಿಶ್ರಾ ಅವರನ್ನು ಟ್ಯಾಗ್ ಮಾಡಿದ್ದು, 'ಇಂದು ಇಂದೋರ್‌ನಲ್ಲಿ 'ಸರ್ ತಾನ್ ಸೆ ಜುದಾ' ಗ್ಯಾಂಗ್ ಸಕ್ರಿಯವಾಗಿದೆ ಎಂಬ ಬಗ್ಗೆ ಅವರಿಗೆ (ಚೌಹಾಣ್ ಮತ್ತು ಮಿಶ್ರಾ) ಬಹುಶಃ ತಿಳಿದಿಲ್ಲ' ಎಂದಿದ್ದಾರೆ.

ಜಿಹಾದಿ ಅಂಶಗಳು ಈ ಪ್ರತಿಭಟನೆಯ ಭಾಗವಾಗಿದೆ ಎಂದು ಅವರು ಆರೋಪಿಸಿದರು.

ಸ್ಥಳೀಯ ವಿಎಚ್‌ಪಿ ನಿಯೋಗ ಬುಧವಾರ ರಾತ್ರಿ ನಗರ ಪೊಲೀಸ್ ಕಮಿಷನರ್ ಹರಿನಾರಾಯಣಚಾರಿ ಮಿಶ್ರಾ ಅವರನ್ನು ಭೇಟಿ ಮಾಡಿ ಬಾರ್ವಾಲಿ ಚೌಕಿ ಪ್ರದೇಶದಲ್ಲಿ ಈ ಘೋಷಣೆಯ ವಿರುದ್ಧ ಮನವಿ ಸಲ್ಲಿಸಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com