ಸ್ಪೀಕರ್ ಓಂ ಬಿರ್ಲ
ಸ್ಪೀಕರ್ ಓಂ ಬಿರ್ಲ

'ನಮ್ಮೆಲ್ಲರಿಗೂ ಅತ್ಯಂತ ನೋವಾಗಿದೆ': ಮಣಿಪುರ ಘಟನೆಗಳ ಕುರಿತು ಓಂ ಬಿರ್ಲಾ

ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಶಾಂತಿಗಾಗಿ ಕರೆ ನೀಡಿದ ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಅಲ್ಲಿನ ಘಟನೆಗಳಿಂದ 'ನೋವಾಗಿದೆ' ಎಂದು ಶನಿವಾರ ಹೇಳಿದ್ದಾರೆ.

ಶಿಲ್ಲಾಂಗ್: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಶಾಂತಿಗಾಗಿ ಕರೆ ನೀಡಿದ ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಅಲ್ಲಿನ ಘಟನೆಗಳಿಂದ 'ನೋವಾಗಿದೆ' ಎಂದು ಶನಿವಾರ ಹೇಳಿದ್ದಾರೆ.

ಇಂದು ಶಿಲ್ಲಾಂಗ್ ನಲ್ಲಿ ನಡೆದ ಕಾಮನ್‌ವೆಲ್ತ್ ಸಂಸದೀಯ ಸಂಘದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಲೋಕಸಭೆ ಸ್ಪೀಕರ್, ಶಾಂತಿಯಿಂದ ಮಾತ್ರ ರಾಜ್ಯ ಮತ್ತು ಪ್ರದೇಶದಲ್ಲಿ ಸಮೃದ್ಧಿ ತರಲು ಸಾಧ್ಯ ಎಂದರು.

"ಮಣಿಪುರದಲ್ಲಿ ನಡೆದ ರಾಜ್ಯದಲ್ಲಿ ನಡೆದ ಯಾವುದೇ ಘಟನೆಗಳು ಒಳ್ಳೆಯ ಘಟನೆಗಳಲ್ಲ. ಹಿಂಸಾಚಾರದಿಂದ ನಮ್ಮೆಲ್ಲರಿಗೂ ನೋವಾಗಿದೆ' ಓಂ ಬಿರ್ಲಾ ಅವರು ಹೇಳಿದ್ದಾರೆ.

ದೇಶ ಮತ್ತು ಎಲ್ಲಾ ರಾಜ್ಯಗಳು, ಹಾಗೆಯೇ ಎಲ್ಲಾ ಸಮಾಜಗಳು ಶಾಂತಿಯ ಹಾದಿಯಲ್ಲಿ ನಡೆಯಬೇಕು. 
ನಾವು ಮಾನವೀಯತೆ ದೃಷ್ಟಿಕೋನದಿಂದ ಶಾಂತಿಗಾಗಿ ಕರೆ ನೀಡುತ್ತೇವೆ ಎಂದು ಸ್ಪೀಕರ್ ತಿಳಿಸಿದ್ದಾರೆ.

ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಕಳೆದ ಮೇ 3 ರಿಂದ ಜನಾಂಗೀಯ ಹಿಂಸಾಚಾರಗಳು ನಡೆಯುತ್ತಿದ್ದು, 160ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com