ಬಡವರ ವಿರೋಧಿ; ಕರ್ನಾಟಕಕ್ಕೆ ಅಕ್ಕಿಯನ್ನು ನಿರಾಕರಿಸಿದ ಮೋದಿ ಸರ್ಕಾರದ ವಿರುದ್ಧ ಜೈರಾಮ್ ರಮೇಶ್ ವಾಗ್ದಾಳಿ

ಭಾರತೀಯ ಆಹಾರ ನಿಗಮದ (ಎಫ್‌ಸಿಐ) ದಾಸ್ತಾನಿನಲ್ಲಿರುವ ಅಕ್ಕಿಯನ್ನು ಕರ್ನಾಟಕ ಸರ್ಕಾರಕ್ಕೆ ಮಾರಾಟ ಮಾಡದ ಕೇಂದ್ರ ಸರ್ಕಾರದ ಆಪಾದಿತ ಕ್ರಮದ ಕುರಿತು ನಡೆಯುತ್ತಿರುವ ಗದ್ದಲದ ನಡುವೆ, ಕಾಂಗ್ರೆಸ್ ಬುಧವಾರ ಬಿಜೆಪಿ ಸರ್ಕಾರ 'ಬಡವರ ವಿರೋಧಿ' ಮತ್ತು 'ಸೇಡಿನ ರಾಜಕೀಯ' ಎಂದು ವಾಗ್ದಾಳಿ ನಡೆಸಿದೆ. 
ಜೈರಾಮ್ ರಮೇಶ್
ಜೈರಾಮ್ ರಮೇಶ್
Updated on

ನವದೆಹಲಿ: ಭಾರತೀಯ ಆಹಾರ ನಿಗಮದ (ಎಫ್‌ಸಿಐ) ದಾಸ್ತಾನಿನಲ್ಲಿರುವ ಅಕ್ಕಿಯನ್ನು ಕರ್ನಾಟಕ ಸರ್ಕಾರಕ್ಕೆ ಮಾರಾಟ ಮಾಡದ ಕೇಂದ್ರ ಸರ್ಕಾರದ ಆಪಾದಿತ ಕ್ರಮದ ಕುರಿತು ನಡೆಯುತ್ತಿರುವ ಗದ್ದಲದ ನಡುವೆ, ಕಾಂಗ್ರೆಸ್ ಬುಧವಾರ ಬಿಜೆಪಿ ಸರ್ಕಾರ 'ಬಡವರ ವಿರೋಧಿ' ಮತ್ತು 'ಸೇಡಿನ ರಾಜಕೀಯ' ಎಂದು ವಾಗ್ದಾಳಿ ನಡೆಸಿದೆ. 

ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, 'ಮೋದಿಯವರ ಬಡವರ ವಿರೋಧಿ ಮತ್ತು ಸೇಡಿನ ರಾಜಕಾರಣದ ನಡೆಗಳು. 

1. ಮೇ 13, 2023 ರಂದು ಪ್ರಧಾನಿ (ನರೇಂದ್ರ ಮೋದಿ) ಮತ್ತು ಬಿಜೆಪಿಯನ್ನು ಕರ್ನಾಟಕದ ಜನರು ಸಮಗ್ರವಾಗಿ ತಿರಸ್ಕರಿಸಿದರು. 

2. ಜೂನ್ 2 ರಂದು, ಕರ್ನಾಟಕದ ಮುಖ್ಯಮಂತ್ರಿ (ಸಿದ್ದರಾಮಯ್ಯ) ಜುಲೈ 1 ರಿಂದ ಬಡ ಕುಟುಂಬಗಳಿಗೆ 10 ಕೆಜಿ ಉಚಿತ ಆಹಾರ ಧಾನ್ಯಗಳನ್ನು ನೀಡುವ ಅನ್ನ ಭಾಗ್ಯ ಗ್ಯಾರಂಟಿಯನ್ನು ಜಾರಿಗೊಳಿಸುವುದಾಗಿ ಘೋಷಿಸಿದರು. 

3. ಜೂನ್ 13, 2023, ಕೇಂದ್ರ ಸರ್ಕಾರವು ಎಫ್‌ಸಿಐನಿಂದ ರಾಜ್ಯಗಳಿಗೆ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ ಅಕ್ಕಿ ಮಾರಾಟವನ್ನು ನಿಷೇಧಿಸುವ ಸುತ್ತೋಲೆಯನ್ನು ಹೊರಡಿಸಿದೆ . ಅನ್ನ ಭಾಗ್ಯ ಯೋಜನೆಯನ್ನು ನಾಶಗೊಳಿಸಲು ಇದನ್ನು ಮಾಡಲಾಗಿದೆ' ಎಂದು ದೂರಿದ್ದಾರೆ.

ಮುಂದುವರಿದು, 'ಕರ್ನಾಟಕವು ಎಫ್‌ಸಿಐಗೆ ಪ್ರತಿ ಕ್ವಿಂಟಾಲ್‌ಗೆ 3,400 ರೂ. ಪಾವತಿಸಲು ಸಿದ್ಧವಾಗಿದೆ. ಆದರೆ, ಆ ಕಿಟಕಿಯನ್ನು ಮುಚ್ಚಲಾಯಿತು. ಆದರೆ, ಎಫ್‌ಸಿಐ ಎಥೆನಾಲ್ ಉತ್ಪಾದನೆ ಮತ್ತು ಪೆಟ್ರೋಲ್ ಮಿಶ್ರಣಕ್ಕಾಗಿ ಕ್ವಿಂಟಾಲ್‌ಗೆ 2,000 ರೂ.ಗೆ ಅಕ್ಕಿ ಮಾರಾಟ ಮಾಡುವುದನ್ನು ಮುಂದುವರೆಸಿದೆ. ಆಹಾರ ಭದ್ರತೆ ಎಲ್ಲಾ ಸಮಯದಲ್ಲೂ ಅತ್ಯಂತ ಕಾಳಜಿಯ ವಿಷಯವಾಗಿರಬೇಕು' ಎಂದಿದ್ದಾರೆ.

ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡುವುದಾಗಿ ಸಿದ್ದರಾಮಯ್ಯ ಮಂಗಳವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗಿನ ಭೇಟಿಯು ಸೌಜನ್ಯದ ಭೇಟಿಯಾಗಿದೆ ಮತ್ತು ನಾನು ಸಿಎಂ ಆದ ನಂತರ ಮೊದಲ ಬಾರಿಗೆ ಅವರನ್ನು ಭೇಟಿಯಾಗುತ್ತಿದ್ದೇನೆ. ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪಿಯೂಷ್ ಗೋಯೆಲ್ ಅವರನ್ನೂ ಭೇಟಿ ಮಾಡಿ ರಾಜ್ಯಕ್ಕೆ ಅಕ್ಕಿ ಪೂರೈಕೆ ಕುರಿತು ಚರ್ಚೆ ನಡೆಸುವುದಾಗಿ ತಿಳಿಸಿದರು.

ಅನ್ನಭಾಗ್ಯ ಯೋಜನೆ ಜಾರಿ ಕುರಿತು ಮಾತನಾಡಿದ ಸಿದ್ದರಾಮಯ್ಯ, ಯೋಜನೆ ಜಾರಿ ವಿಳಂಬವಾಗಬಹುದು ಎಂದಿದ್ದಾರೆ. ಜುಲೈ 1ರಿಂದಲೇ ಯೋಜನೆಯನ್ನು ಆರಂಭಿಸುವುದಾಗಿ ಕಾಂಗ್ರೆಸ್ ಘೋಷಿಸಿತ್ತು. ಯೋಜನೆ ಜಾರಿಯಾಗದಿದ್ದರೆ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಘೋಷಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com