Onion Price: ಬೆಲೆ ಕುಸಿತ ಹಿನ್ನೆಲೆ; ರೈತರಿಂದ ಈರುಳ್ಳಿ ಖರೀದಿಸುವಂತೆ ಕೇಂದ್ರ ಸರ್ಕಾರ ನಿರ್ದೇಶನ

ಈರುಳ್ಳಿ ಬೆಲೆ ಕುಸಿತದ ಹಿನ್ನಲೆಯಲ್ಲಿ ರೈತರಿಂದಲೇ ನೇರವಾಗಿ ಈರುಳ್ಳಿ ಖರೀದಿ ಮಾಡುವಂತೆ ಕೇಂದ್ರ ಸರ್ಕಾರ ಏಜೆನ್ಸಿಗಳಿಗೆ ಬುಧವಾರ ಸೂಚಿಸಿದೆ
ಈರುಳ್ಳಿ
ಈರುಳ್ಳಿ
Updated on

ನವದೆಹಲಿ: ಈರುಳ್ಳಿ ಬೆಲೆ ಕುಸಿತದ ಹಿನ್ನಲೆಯಲ್ಲಿ ರೈತರಿಂದಲೇ ನೇರವಾಗಿ ಈರುಳ್ಳಿ ಖರೀದಿ ಮಾಡುವಂತೆ ಕೇಂದ್ರ ಸರ್ಕಾರ ಏಜೆನ್ಸಿಗಳಿಗೆ ಬುಧವಾರ ಸೂಚಿಸಿದೆ

ಮಂಡಿಗಳಲ್ಲಿ ಈರುಳ್ಳಿ ಬೆಲೆ ಕುಸಿತದ ವರದಿಗಳ ನಡುವೆಯೇ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರ ತನ್ನ ಖರೀದಿ ಏಜೆನ್ಸಿಗಳಿಗೆ ಸೂಚಿಸಿದ್ದು, ಏಕಕಾಲದಲ್ಲಿ ಬಳಕೆ ಕೇಂದ್ರಗಳಿಗೆ ಕಳುಹಿಸಿ ಮಾರಾಟ ಮಾಡುವಂತೆ ಕೇಂದ್ರ ಸರ್ಕಾರದಿಂದ ನಿರ್ದೇಶನ ನೀಡಲಾಗಿದೆ. ರೈತರಿಂದ ಈರುಳ್ಳಿ ಖರೀದಿಸಲು ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (NAFED) ಮತ್ತು ರಾಷ್ಟ್ರೀಯ ಗ್ರಾಹಕ ಸಹಕಾರ ಒಕ್ಕೂಟ (NCCF) ಗೆ ನಿರ್ದೇಶನ ನೀಡಿದೆ.

ಇದೇ ವಿಚಾರವಾಗಿ ಮಂಗಳವಾರ ಸಂಜೆ ಹೇಳಿಕೆ ಬಿಡುಗಡೆ ಮಾಡಿರುವ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, 'ಕಳೆದ ಹತ್ತು ದಿನಗಳಲ್ಲಿ ರೈತರಿಂದ 100 ಕೆ.ಜಿ.ಗೆ 900 ರೂ.ಗೂ ಅಧಿಕ ದರದಲ್ಲಿ ಸುಮಾರು 4,000 ಟನ್ ಈರುಳ್ಳಿಯನ್ನು ನೇರವಾಗಿ ಖರೀದಿಸಿದೆ. ಮೂಲಗಳ ಪ್ರಕಾರ ಭಾರತದ ಅತಿದೊಡ್ಡ ಈರುಳ್ಳಿ ಮಾರುಕಟ್ಟೆ ಲಸಲಗಾಂವ್ ಮಂಡಿಯಲ್ಲಿ ಈರುಳ್ಳಿ ಬೆಲೆ ಕೆಜಿಗೆ 1 ರಿಂದ 2 ರೂ.ವರೆಗೆ ಇದೆ ಎಂಬ ವರದಿಗಳಿವೆ.

ಸಚಿವಾಲಯದ ಹೇಳಿಕೆಯ ಪ್ರಕಾರ, NAFED 40 ಖರೀದಿ ಕೇಂದ್ರಗಳನ್ನು ತೆರೆದಿದ್ದು, ಅಲ್ಲಿ ರೈತರು ತಮ್ಮ ದಾಸ್ತಾನು ಮಾರಾಟ ಮಾಡಬಹುದು ಮತ್ತು ಆನ್‌ಲೈನ್‌ನಲ್ಲಿ ಪಾವತಿಯನ್ನು ಪಡೆಯಬಹುದು. ದೆಹಲಿ, ಕೋಲ್ಕತ್ತಾ, ಗುವಾಹಟಿ, ಭುವನೇಶ್ವರ್, ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ಕೊಚ್ಚಿಯಲ್ಲಿನ ಖರೀದಿ ಕೇಂದ್ರಗಳಿಂದ ದಾಸ್ತಾನು ಸಾಗಣೆಗೆ NAFED ವ್ಯವಸ್ಥೆ ಮಾಡಿದೆ ಎಂದು ಹೇಳಿದೆ. ಅಂತೆಯೇ 2022-23ನೇ ಸಾಲಿನಲ್ಲಿ ಅಂದಾಜು 318 ಲಕ್ಷ ಟನ್‌ಗಳಷ್ಟು ಈರುಳ್ಳಿ ಉತ್ಪಾದನೆಯಾಗಿದ್ದು, ಕಳೆದ ವರ್ಷದ ಉತ್ಪಾದನೆಯ 316.98 ಲಕ್ಷ ಟನ್‌ಗಳನ್ನು ದಾಟಿದೆ. ಬೇಡಿಕೆ ಮತ್ತು ಪೂರೈಕೆಯಲ್ಲಿನ ಸ್ಥಿರತೆ ಹಾಗೂ ರಫ್ತು ಸಾಮರ್ಥ್ಯದಿಂದಾಗಿ ಬೆಲೆಗಳು ಸ್ಥಿರವಾಗಿವೆ ಎಂದು ಹೇಳಿದೆ.

ಆದಾಗ್ಯೂ, ಫೆಬ್ರವರಿ ತಿಂಗಳಲ್ಲಿ ಕೆಂಪು ಈರುಳ್ಳಿ ಬೆಲೆಯಲ್ಲಿ ಕುಸಿತ ಕಂಡಿತು, ವಿಶೇಷವಾಗಿ ಮಹಾರಾಷ್ಟ್ರದಲ್ಲಿ, ಮಾದರಿ ದರವು ಕ್ವಿಂಟಲ್‌ಗೆ 500-700 ರೂ.ಗೆ ಕುಸಿದಿದೆ. ಇತರ ರಾಜ್ಯಗಳಲ್ಲಿ ಒಟ್ಟಾರೆ ಉತ್ಪಾದನೆಯಲ್ಲಿನ ಕುಸಿತಕ್ಕೆ ಕಾರಣವೆಂದು ತಜ್ಞರು ಹೇಳುತ್ತಾರೆ, ಇದು ದೇಶದ ಪ್ರಮುಖ ಈರುಳ್ಳಿ ಉತ್ಪಾದನಾ ಜಿಲ್ಲೆಯಾದ ನಾಸಿಕ್‌ನಿಂದ ಸರಬರಾಜುಗಳ ಮೇಲೆ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಎಲ್ಲ ರಾಜ್ಯಗಳಲ್ಲೂ ಈರುಳ್ಳಿ ಬಿತ್ತನೆಯಾಗಿದೆ. ರಾಷ್ಟ್ರೀಯ ಉತ್ಪಾದನೆಯಲ್ಲಿ ಮಹಾರಾಷ್ಟ್ರ ಶೇ.43, ಮಧ್ಯಪ್ರದೇಶ ಶೇ.16 ಮತ್ತು ಕರ್ನಾಟಕ ಮತ್ತು ಗುಜರಾತ್ ಶೇ.9ರಷ್ಟು ಕೊಡುಗೆ ನೀಡುತ್ತವೆ. ವರ್ಷಕ್ಕೆ ಮೂರು ಬಾರಿ ಕೊಯ್ಲು ಮಾಡಲಾಗುತ್ತದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com