ದಾಳಿ ವೇಳೆ ತುಳಿತದಿಂದ 4 ದಿನಗಳ ಶಿಶು ಸಾವು: ಜಾರ್ಖಂಡ್ ನ 6 ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಕರಣ

ಪೊಲೀಸ್ ದಾಳಿಯ ವೇಳೆ ತುಳಿತದಿಂದ ಶಿಶುವೊಂದು ಮೃತಪಟ್ಟಿದ್ದು ಜಾರ್ಖಂಡ್ ನ 6 ಮಂದಿ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. 
ನವಜಾತ ಶಿಶು (ಸಂಗ್ರಹ ಚಿತ್ರ)
ನವಜಾತ ಶಿಶು (ಸಂಗ್ರಹ ಚಿತ್ರ)
Updated on

ಜಾರ್ಖಂಡ್: ಪೊಲೀಸ್ ದಾಳಿಯ ವೇಳೆ ತುಳಿತದಿಂದ ಶಿಶುವೊಂದು ಮೃತಪಟ್ಟಿದ್ದು ಜಾರ್ಖಂಡ್ ನ 6 ಮಂದಿ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. 

ಘಟನೆ ಸಂಬಂಧ 6 ಮಂದಿ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದ್ದರೆ, 5 ಮಂದಿ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. 

ಜಾರ್ಖಂಡ್ ನ ಗಿರಿಡಿಹ್ ನಲ್ಲಿ ಈ ಘಟನೆ ನಡೆದಿದೆ.  4 ದಿನಗಳ ಶಿಶುವಿನ ಮರಣೋತ್ತರ ಪರೀಕ್ಷೆ ನಡೆಸಾಗಿದ್ದು, ಪೊಲೀಸ್ ಅಧಿಕಾರಿಗಳ ಬೂಟಿನ ತುಳಿತಕ್ಕೆ ಒಳಗಾದ ಮಗುವಿನ  ಗುಲ್ಮ (ದೇಹದ ಅಂಗ) ಛಿದ್ರಗೊಂಡಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇಬ್ಬರು ವ್ಯಕ್ತಿಗಳನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದಾಗ ಈ ಘಟನೆ ನಡೆದಿದೆ. ಮಗುವಿನ ಅಜ್ಜ ಹಾಗೂ ಇನ್ನೂ ಇತರರ ವಿರುದ್ಧ ಪೊಲೀಸರು ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಲು ಹೋಗಿದ್ದರು. 

ಘಟನೆಯ ಬಗ್ಗೆ ಸಿಎಂ ಹೇಮಂತ್ ಸೊರೇನ್ ತನಿಖೆಗೆ ಆದೇಶಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com