'ದಿ ಕೇರಳ ಸ್ಟೋರಿಗೆ' ಮಧ್ಯಪ್ರದೇಶ, ಯುಪಿ ನಂತರ ಉತ್ತರಾಖಂಡ್ ರಾಜ್ಯದಲ್ಲಿಯೂ ತೆರಿಗೆ ವಿನಾಯಿತಿ!

ವಿವಾದಾತ್ಮಕ ' ದಿ ಕೇರಳ ಸ್ಟೋರಿ'ಗೆ ಉತ್ತರಾಖಂಡ್ ರಾಜ್ಯದಲ್ಲಿ ತೆರಿಗೆ ವಿನಾಯಿತಿ ಇರಲಿದೆ ಎಂದು ಉತ್ತರಾಖಂಡ್ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಸಪ್ತಲ್ ಮಹಾರಾಜ್ ಹೇಳಿದ್ದಾರೆ. ಅದಾ ಶರ್ಮಾ ನಟಿಸಿರುವ ಈ ಚಿತ್ರವು ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. 
ದಿ ಕೇರಳ ಸ್ಟೋರಿ ಸ್ಟಿಲ್
ದಿ ಕೇರಳ ಸ್ಟೋರಿ ಸ್ಟಿಲ್

ಡೆಹ್ರಾಡೂನ್: ವಿವಾದಾತ್ಮಕ ' ದಿ ಕೇರಳ ಸ್ಟೋರಿ'ಗೆ ಉತ್ತರಾಖಂಡ್ ರಾಜ್ಯದಲ್ಲಿ ತೆರಿಗೆ ವಿನಾಯಿತಿ ಇರಲಿದೆ ಎಂದು ಉತ್ತರಾಖಂಡ್ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಸಪ್ತಲ್ ಮಹಾರಾಜ್ ಹೇಳಿದ್ದಾರೆ. ಅದಾ ಶರ್ಮಾ ನಟಿಸಿರುವ ಈ ಚಿತ್ರವು ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. 

ಕೇರಳದಿಂದ ಕಣ್ಮರೆಯಾದ ಸಾವಿರಾರು ಮಹಿಳೆಯ ಹಿಂದಿನ ಘಟನೆಗಳನ್ನು ಈ ಚಿತ್ರ ಹೇಳುತ್ತದೆ. ಬಲವಂತದಿಂದ ಹೇಗೆ ಇಸ್ಲಾಂಗೆ ಮಹಿಳೆಯನ್ನು ಮತಾಂತರಿಸಲಾಯಿತು ಮತ್ತು ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್‌ ಗೆ ಹೇಗೆ ಸೇರಿದರು ಎಂಬುದರ ಸುತ್ತ ಕಥೆ ಸಾಗುತ್ತದೆ. 

ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ಬಗ್ಗೆ ಉತ್ತರಾಖಂಡ ಸರ್ಕಾರ ಇನ್ನೂ ಔಪಚಾರಿಕ ಪ್ರಕಟಣೆ ಮಾಡಿಲ್ಲವಾದರೂ ಶೀಘ್ರದಲ್ಲೇ ರಾಜ್ಯದಲ್ಲಿ ತೆರಿಗೆ ವಿನಾಯಿತಿ ಸಿಗಲಿದೆ ಎಂದು ಮಹಾರಾಜ್ ತಿಳಿಸಿದರು.  ಕೇರಳದ ಸತ್ಯ ಕಥೆ ಬಿಂಬಿಸುವ ಈ ಚಿತ್ರವನ್ನು ಪ್ರತಿಯೊಬ್ಬರು ನೋಡಬೇಕು ಎಂದು  ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮಂಗಳವಾರ ಹೇಳಿದ್ದರು. 

ಪಶ್ಚಿಮ ಬಂಗಾಳ ಸರ್ಕಾರ ಚಿತ್ರಮಂದಿರಗಳಲ್ಲಿ ಕೇರಳ ಸ್ಟೋರಿ ಚಿತ್ರ ಪ್ರದರ್ಶನವನ್ನು ನಿಷೇಧಿಸಿದೆ ಮತ್ತು ತಮಿಳುನಾಡಿನ ಮಲ್ಟಿಪ್ಲೆಕ್ಸ್‌ಗಳು ಭಾನುವಾರದಿಂದ ಪ್ರದರ್ಶನಗಳನ್ನು ರದ್ದುಗೊಳಿಸಿವೆ. ಆದರೆ, ಬಿಜೆಪಿ ಈ ಸಿನಿಮಾವನ್ನು ಬೆಂಬಲಿಸಿದೆ ಅಲ್ಲದೇ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಸರ್ಕಾರಗಳು ತೆರಿಗೆ ವಿನಾಯಿತಿ ನೀಡಲು ಅನುಮತಿಸಿವೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com