ಅಮಿತ್‌ ಜಿ, ಸಂವಿಧಾನದ ಬಗ್ಗೆ ನನ್ನ ತಿಳುವಳಿಕೆ ಏನೆಂದರೆ... ಶಾ ಗೆ ಕಪಿಲ್ ಸಿಬಲ್ ತಿರುಗೇಟು

ಪ್ರಧಾನಿಗಳಿಗೆ ಮಾಡಿದ ಅವಮಾನ ದೇಶಕ್ಕೆ ಮಾಡಿದ ಅವಮಾನ ಎಂದು ಅಮಿತ್ ಶಾ ನೀಡಿದ್ದ ಹೇಳಿಕೆಗೆ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್  ತಿರುಗೇಟು ನೀಡಿದ್ದಾರೆ.
ಕಪಿಲ್ ಸಿಬಲ್
ಕಪಿಲ್ ಸಿಬಲ್

ನವದೆಹಲಿ: ಪ್ರಧಾನಿಗಳಿಗೆ ಮಾಡಿದ ಅವಮಾನ ದೇಶಕ್ಕೆ ಮಾಡಿದ ಅವಮಾನ ಎಂದು ಅಮಿತ್ ಶಾ ನೀಡಿದ್ದ ಹೇಳಿಕೆಗೆ  ಸಂಸದ ಕಪಿಲ್ ಸಿಬಲ್  ತಿರುಗೇಟು ನೀಡಿದ್ದಾರೆ.

ಮೋದಿ ಸಮುದಾಯದ ರಾಷ್ಟ್ರೀಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದ ಅಮಿತ್ ಶಾ, ಪ್ರಧಾನಿ ಮೋದಿ ಅವರು ಒಬಿಸಿಗಳಿಗೆ ಅರ್ಹವಾದ ಗೌರವವನ್ನು ನೀಡಿದರು. ಬಡ ನಾಗರಿಕರ ನೋವನ್ನು ಅರ್ಥಮಾಡಿಕೊಳ್ಳುತ್ತಾರೆ ಏಕೆಂದರೆ ಅವರು ಅಂತಹ ಕುಟುಂಬದಲ್ಲಿ ಜನಿಸಿದರು.

2019 ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ “ಮೋದಿ ಉಪನಾಮ ಹೇಳಿಕೆಗೆ ಶಿಕ್ಷೆ ವಿಧಿಸಿರುವುದನ್ನು ಉಲ್ಲೇಖಿಸಿದ ಶಾ, ಯಾರಾದರೂ ಒಬ್ಬ ವ್ಯಕ್ತಿಯನ್ನು ಅವಮಾನಿಸಿದರೆ ಅದು ದೊಡ್ಡ ವಿಷಯವಲ್ಲ, ಆದರೆ ಯಾರಾದರೂ ಇಡೀ ಸಮುದಾಯವನ್ನು ಮತ್ತು ಪ್ರಧಾನಿಯನ್ನು ಅವಮಾನಿಸಿದರೆ ಅದು ಇಡೀ ದೇಶಕ್ಕೆ ಮಾಡಿದ ಅವಮಾನವಾಗಿದೆ ಎಂದಿದ್ದರು.

ಪೂರ್ಣೇಶ್‌ಭಾಯ್ ಈ ಯುದ್ಧವನ್ನು ದೃಢವಾಗಿ ಹೋರಾಡಿ ಗೆದ್ದಿದ್ದಾರೆ. ನಾನು ಅವರಿಗೆ ಮತ್ತು ಇತರರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಿಮ್ಮ ಸಮುದಾಯದ ಘನತೆಗಾಗಿ ಹೋರಾಡಿದ್ದಕ್ಕಾಗಿ ಇಡೀ ದೇಶವು ನಿಮ್ಮೊಂದಿಗಿದೆ ಎಂದು ಶಾ ಹೇಳಿದ್ದರು.

ಈ ಸಂಬಂಧ ಟ್ವೀಟ್ ಮಾಡಿರುವ ಕಪಿಲ್ ಸಿಬಲ್ ಅಮಿತ್‌ಜಿ, ಸಂವಿಧಾನದ ಬಗ್ಗೆ ನನ್ನ ತಿಳುವಳಿಕೆ ಏನೆಂದರೆ ಪ್ರಧಾನಿ ದೇಶಕ್ಕಾಗಿ ಕೆಲಸ ಮಾಡುತ್ತಾರೆ, ಪ್ರಧಾನಿ ದೇಶವಲ್ಲ. ಹಾಗೆಯೇ ಸರ್ಕಾರ ದೇಶಕ್ಕಾಗಿ ಕೆಲಸ ಮಾಡುತ್ತದೆ, ಆದರೆ ಸರ್ಕಾರವೇ ದೇಶವಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com