ದೀಪಾವಳಿ ಸಂಭ್ರಮ: ಗಡಿಯಲ್ಲಿ ಭಾರತ-ಪಾಕ್ ಯೋಧರು ಸಿಹಿ ವಿನಿಮಯ

ದೇಶಾದ್ಯಂತ ದೀಪಾವಳಿ ಸಂಭ್ರಮ ಮನೆ ಮಾಡಿದ್ದು, ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿಯಲ್ಲಿ ಭಾನುವಾರ ಭಾರತ ಹಾಗೂ ಪಾಕಿಸ್ತಾನದ ಯೋಧರು ಸಿಹಿ ವಿನಿಮಯ ಮಾಡಿಕೊಂಡರು ಎಂದು ಅಧಿಕಾರಿಗಳು ತಿಳಿಸಿದರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜಮ್ಮು-ಕಾಶ್ಮೀರ: ದೇಶಾದ್ಯಂತ ದೀಪಾವಳಿ ಸಂಭ್ರಮ ಮನೆ ಮಾಡಿದ್ದು, ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿಯಲ್ಲಿ ಭಾನುವಾರ ಭಾರತ ಹಾಗೂ ಪಾಕಿಸ್ತಾನದ ಯೋಧರು ಸಿಹಿ ವಿನಿಮಯ ಮಾಡಿಕೊಂಡರು ಎಂದು ಅಧಿಕಾರಿಗಳು ತಿಳಿಸಿದರು.
 
ಆದಾಗ್ಯೂ, ಅಂತರರಾಷ್ಟ್ರೀಯ ಗಡಿಯಲ್ಲಿ ಉಭಯ ದೇಶದ ಯೋಧರ ನಡುವೆ ಸಾಂಪ್ರದಾಯಿಕ ಸಿಹಿತಿಂಡಿಗಳು ಮತ್ತು ಸಿಹಿತಿಂಡಿಗಳ ವಿನಿಮಯ ನಡೆಯಲಿಲ್ಲ. ಪಾಕಿಸ್ತಾನದ ರೇಂಜರ್‌ಗಳು ಇತ್ತೀಚೆಗೆ ಕದನ ವಿರಾಮ ಉಲ್ಲಂಘಿಸಿ  ಗಡಿ ಭದ್ರತಾ ಪಡೆ ಯೋಧರೊಬ್ಬರು ಸಾವನ್ನಪ್ಪಿದ ನಂತರದ ಪರಿಸ್ಥಿತಿ ಬಿಗಡಾಯಿಸಿರುವುದು ಇದಕ್ಕೆ ಕಾರಣವಾಗಿದೆ.

ನವೆಂಬರ್ 8 ಮತ್ತು 9 ರ ಮಧ್ಯರಾತ್ರಿಯಲ್ಲಿ ಸಾಂಬಾ ಜಿಲ್ಲೆಯ ರಾಮಗಢ ಸೆಕ್ಟರ್‌ನಲ್ಲಿ ಪಾಕಿಸ್ತಾನದ ರೇಂಜರ್‌ಗಳ ಗುಂಡಿನ ದಾಳಿಯಲ್ಲಿ  ಬಿಎಸ್‌ಎಫ್ ಯೋಧರೊಬ್ಬರು ಹತ್ಯೆಗೀಡಾಗಿದ್ದರು. ಇದಕ್ಕೂ ಮುನ್ನಾ ಅಕ್ಟೋಬರ್ 26 ರಂದು ಜಮ್ಮುವಿನ ಅರ್ನಿಯಾ ಸೆಕ್ಟರ್‌ನಲ್ಲಿ ಗಡಿಯಾಚೆಗಿನ ಗುಂಡಿನ ದಾಳಿಯಲ್ಲಿ ಇಬ್ಬರು ಬಿಎಸ್‌ಎಫ್ ಸಿಬ್ಬಂದಿ ಮತ್ತು ಒಬ್ಬ ಮಹಿಳೆ ಗಾಯಗೊಂಡಿದ್ದರೆ, ಅಕ್ಟೋಬರ್ 17 ರಂದು ಇದೇ ರೀತಿಯ ಘಟನೆಯಲ್ಲಿ ಮತ್ತೋರ್ವ ಬಿಎಸ್ ಎಫ್ ಯೋಧ ಗಾಯಗೊಂಡಿದ್ದರು. 

ಆದಾಗ್ಯೂ, ಪೂಂಚ್ ಜಿಲ್ಲೆಯ ಚಕನ್ ದಾ ಬಾಗ್ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನಿ ಸೈನಿಕರು ದೀಪಾವಳಿ ಸಿಹಿ ವಿನಿಮಯ ಮಾಡಿಕೊಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com