ರಾಂಚಿ: 4ನೇ ಮಹಡಿಯಿಂದ ಕೆಳಗಿಳಿಯಲು ಹೋದ ವ್ಯಕ್ತಿ ಲಿಫ್ಟ್ ನಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ರಾಂಚಿಯ ಶೈಲೇಶ್ ಕುಮಾರ್ ಮೃತ ವ್ಯಕ್ತಿ.
ಶೈಲೇಶ್ ಕುಮಾರ್, 4ನೇ ಮಹಡಿಯಲ್ಲಿ ನಿಂತು ಲಿಫ್ಟ್ ಗುಂಡಿ ಒತ್ತಿದ್ದಾರೆ, ಈ ವೇಳೆ ಲಿಫ್ಟ್ ಬಾಗಿಲು ತೆಗೆದಿದೆ, ಆದರೆ ಲಿಫ್ಟ್ ಮಾತ್ರ ಕೆಳಗೆ ಬರಲಿಲ್ಲ, ಇದನ್ನು ಗಮನಿಸದ ಶೈಲೇಶ್ ಕಾಲಿಟ್ಟಿದ್ದಾರೆ. ಇದರಿಂದ 4ನೇ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.
ಶೈಲೇಶ್ ಶುಕ್ರವಾರ ನೆಲಮಹಡಿಗೆ ಬರಲು ನಾಲ್ಕನೇ ಮಹಡಿಯಲ್ಲಿದ್ದ ಲಿಫ್ಟ್ ಬಟನ್ ಒತ್ತಿದರು, ನಂತರ ತಕ್ಷಣ ಲಿಫ್ಟ್ ಬಾಗಿಲು ತೆರೆದುಕೊಂಡಿತು. ಆದರೆ ಲಿಫ್ಟ್ ಬರಲಿಲ್ಲ, ಶೈಲೇಶ್ ಎಲಿವೇಟರ್ ಡಕ್ಟ್ ಪ್ರವೇಶಿಸಿದರು , ಈ ವೇಳೆ ಶಾಫ್ಟ್ ನಿಂದ ನೆಲಕ್ಕೆ ಬಿದ್ದಿದ್ದಾರೆ ಎಂದು ರಾಂಚಿ ಎಸ್ ಪಿ ತಿಳಿಸಿದ್ದಾರೆ.
ಜೋರಾದ ಶಬ್ದ ಕೇಳಿದ ಕೂಡಲೇ ಕಟ್ಟಡದ ಭದ್ರತಾ ಸಿಬ್ಬಂದಿ ಓಡಿ ಬಂದಿದ್ದಾರೆ. ಆದರೆ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು ಎಂದು ತಿಳಿದು ಬಂದಿದೆ. ಅಂದಿನಿಂದ ಲಿಫ್ಟ್ ಮುಚ್ಚಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಸಂಬಂಧ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.
Advertisement